೧
ٱلۡحَمۡدُ لِلَّهِ ٱلَّذِي خَلَقَ ٱلسَّمَٰوَٰتِ وَٱلۡأَرۡضَ وَجَعَلَ ٱلظُّلُمَٰتِ وَٱلنُّورَۖ ثُمَّ ٱلَّذِينَ كَفَرُواْ بِرَبِّهِمۡ يَعۡدِلُونَ
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ಅಂಧಕಾರಗಳನ್ನು ಹಾಗೂ ಬೆಳಕನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಆದರೂ ಸತ್ಯನಿಷೇಧಿಗಳು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಮಾನರನ್ನು ಕಲ್ಪಿಸುತ್ತಿದ್ದಾರೆ.
೨
هُوَ ٱلَّذِي خَلَقَكُم مِّن طِينٖ ثُمَّ قَضَىٰٓ أَجَلٗاۖ وَأَجَلٞ مُّسَمًّى عِندَهُۥۖ ثُمَّ أَنتُمۡ تَمۡتَرُونَ
ನಿಮ್ಮನ್ನು ಜೇಡಿಮಣ್ಣಿನಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ಅವಧಿಯನ್ನು ನಿಶ್ಚಯಿಸಿದನು. ಅವನ ಬಳಿ ಇನ್ನೊಂದು ನಿಶ್ಚಿತ ಅವಧಿಯಿದೆ. ಹೀಗಿದ್ದೂ ನೀವು ಸಂಶಯಪಡುತ್ತೀರಿ.
೩
وَهُوَ ٱللَّهُ فِي ٱلسَّمَٰوَٰتِ وَفِي ٱلۡأَرۡضِ يَعۡلَمُ سِرَّكُمۡ وَجَهۡرَكُمۡ وَيَعۡلَمُ مَا تَكۡسِبُونَ
ಅವನೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಏಕೈಕ ದೇವನಾದ ಅಲ್ಲಾಹು. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅವನು ತಿಳಿಯುತ್ತಾನೆ. ನೀವು ಮಾಡುವ ಕರ್ಮಗಳನ್ನೂ ಅವನು ತಿಳಿಯುತ್ತಾನೆ.
೪
وَمَا تَأۡتِيهِم مِّنۡ ءَايَةٖ مِّنۡ ءَايَٰتِ رَبِّهِمۡ إِلَّا كَانُواْ عَنۡهَا مُعۡرِضِينَ
ಅವರ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳಲ್ಲಿ ಯಾವುದೇ ಒಂದು ದೃಷ್ಟಾಂತವು ಅವರ ಬಳಿಗೆ ಬಂದರೂ, ಅವರು ಅದರಿಂದ ವಿಮುಖರಾಗುತ್ತಿದ್ದರು.
೫
فَقَدۡ كَذَّبُواْ بِٱلۡحَقِّ لَمَّا جَآءَهُمۡ فَسَوۡفَ يَأۡتِيهِمۡ أَنۢبَٰٓؤُاْ مَا كَانُواْ بِهِۦ يَسۡتَهۡزِءُونَ
ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದರ ನಿಜಾಂಶಗಳು ನಂತರ ಅವರ ಬಳಿಗೆ ಬರಲಿವೆ.
೬
أَلَمۡ يَرَوۡاْ كَمۡ أَهۡلَكۡنَا مِن قَبۡلِهِم مِّن قَرۡنٖ مَّكَّنَّٰهُمۡ فِي ٱلۡأَرۡضِ مَا لَمۡ نُمَكِّن لَّكُمۡ وَأَرۡسَلۡنَا ٱلسَّمَآءَ عَلَيۡهِم مِّدۡرَارٗا وَجَعَلۡنَا ٱلۡأَنۡهَٰرَ تَجۡرِي مِن تَحۡتِهِمۡ فَأَهۡلَكۡنَٰهُم بِذُنُوبِهِمۡ وَأَنشَأۡنَا مِنۢ بَعۡدِهِمۡ قَرۡنًا ءَاخَرِينَ
ಅವರಿಗಿಂತ ಮೊದಲು ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆಂದು ಅವರು ನೋಡಿಲ್ಲವೇ? ನಿಮಗೆ ನೀಡದಂತಹ ಶಕ್ತಿ-ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು. ಅವರಿಗೆ ಆಕಾಶದಿಂದ ಧಾರಾಕಾರ ಮಳೆಯನ್ನು ಸುರಿಸಿಕೊಟ್ಟೆವು. ಅವರ ತಳಭಾಗದಿಂದ ನದಿಗಳು ಹರಿಯುವಂತೆ ಮಾಡಿದೆವು. ನಂತರ ಅವರು ಮಾಡಿದ ಪಾಪಗಳ ಕಾರಣದಿಂದ ನಾವು ಅವರನ್ನು ನಾಶ ಮಾಡಿದೆವು. ಅವರ ನಂತರ ನಾವು ಬೇರೊಂದು ತಲೆಮಾರನ್ನು ಸೃಷ್ಟಿಸಿದೆವು.
೭
وَلَوۡ نَزَّلۡنَا عَلَيۡكَ كِتَٰبٗا فِي قِرۡطَاسٖ فَلَمَسُوهُ بِأَيۡدِيهِمۡ لَقَالَ ٱلَّذِينَ كَفَرُوٓاْ إِنۡ هَٰذَآ إِلَّا سِحۡرٞ مُّبِينٞ
ನಾವು ನಿಮಗೆ ಕಾಗದದಲ್ಲಿ ಬರೆದಿರುವ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ, ನಂತರ ಅವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ, “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ” ಎಂದು ಆ ಸತ್ಯನಿಷೇಧಿಗಳು ಹೇಳುತ್ತಿದ್ದರು.
೮
وَقَالُواْ لَوۡلَآ أُنزِلَ عَلَيۡهِ مَلَكٞۖ وَلَوۡ أَنزَلۡنَا مَلَكٗا لَّقُضِيَ ٱلۡأَمۡرُ ثُمَّ لَا يُنظَرُونَ
ಅವರು ಹೇಳಿದರು: “ಅವರ (ಪ್ರವಾದಿಯ) ಜೊತೆಯಲ್ಲಿ ಒಬ್ಬ ದೇವದೂತರನ್ನು ಏಕೆ ಇಳಿಸಲಾಗಿಲ್ಲ?” ಆದರೆ ನಾವು ದೇವದೂತರನ್ನು ಇಳಿಸುತ್ತಿದ್ದರೆ ವಿಷಯವು (ಅಂತಿಮವಾಗಿ) ತೀರ್ಮಾನವಾಗುತ್ತಿತ್ತು. ನಂತರ ಅವರಿಗೆ ಕಾಲಾವಕಾಶ ನೀಡಲಾಗುತ್ತಿರಲಿಲ್ಲ.
೯
وَلَوۡ جَعَلۡنَٰهُ مَلَكٗا لَّجَعَلۡنَٰهُ رَجُلٗا وَلَلَبَسۡنَا عَلَيۡهِم مَّا يَلۡبِسُونَ
ನಾವು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೂ ಸಹ ಅವರನ್ನು ಮನುಷ್ಯನಾಗಿ ಮಾಡಿಯೇ ಕಳುಹಿಸುತ್ತಿದ್ದೆವು. ಅವರು ಈಗ ಏನು ಗೊಂದಲ ಮಾಡುತ್ತಿದ್ದಾರೋ ಅದೇ ಗೊಂದಲವನ್ನು ಅವರು ಆಗಲೂ ಮಾಡುತ್ತಿದ್ದರು.[1]
[1] ಅಲ್ಲಾಹು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದು ಸಾಧ್ಯವಿಲ್ಲ. ಏಕೆಂದರೆ ದೇವದೂತರನ್ನು ಕಳುಹಿಸಿದರೆ ಜನರು ಹೇಳುತ್ತಿದ್ದರು: “ನೀನೇಕೆ ದೇವದೂತರನ್ನು ಪ್ರವಾದಿಯಾಗಿ ಕಳುಹಿಸಿದೆ? ನೀನು ಮನುಷ್ಯನನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೆ ನಾವು ಆ ಪ್ರವಾದಿಯನ್ನು ಅನುಸರಿಸುತ್ತಿದ್ದೆವು. ನಾವು ದೇವದೂತರನ್ನು ಅನುಸರಿಸುವುದು ಹೇಗೆ ಸಾಧ್ಯ? ಅವರಿಗೂ ನಮಗೂ ಅಗಾಧ ವ್ಯತ್ಯಾಸವಿದೆ.” ಇನ್ನು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದಾದರೂ ಅವರನ್ನು ಮನುಷ್ಯ ರೂಪದಲ್ಲೇ ಕಳುಹಿಸಬೇಕಾಗುತ್ತದೆ. ಆದರೆ ಆಗಲೂ ಅವರು ಈಗ ಹೇಳುತ್ತಿರುವ ಅದೇ ಕಾರಣವನ್ನು ಹೇಳಿ ಅನುಸರಿಸಲು ನಿರಾಕರಿಸುತ್ತಿದ್ದರು.
೧೦
وَلَقَدِ ٱسۡتُهۡزِئَ بِرُسُلٖ مِّن قَبۡلِكَ فَحَاقَ بِٱلَّذِينَ سَخِرُواْ مِنۡهُم مَّا كَانُواْ بِهِۦ يَسۡتَهۡزِءُونَ
ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಜನರಿಂದ ತಮಾಷೆಗೆ ಗುರಿಯಾಗಿದ್ದಾರೆ. ನಂತರ, ಅವರು ಏನು ತಮಾಷೆ ಮಾಡುತ್ತಿದ್ದರೋ ಅದೇ ಅವರನ್ನು ಆವರಿಸಿಕೊಂಡಿತು.
೧೧
قُلۡ سِيرُواْ فِي ٱلۡأَرۡضِ ثُمَّ ٱنظُرُواْ كَيۡفَ كَانَ عَٰقِبَةُ ٱلۡمُكَذِّبِينَ
ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.”
೧೨
قُل لِّمَن مَّا فِي ٱلسَّمَٰوَٰتِ وَٱلۡأَرۡضِۖ قُل لِّلَّهِۚ كَتَبَ عَلَىٰ نَفۡسِهِ ٱلرَّحۡمَةَۚ لَيَجۡمَعَنَّكُمۡ إِلَىٰ يَوۡمِ ٱلۡقِيَٰمَةِ لَا رَيۡبَ فِيهِۚ ٱلَّذِينَ خَسِرُوٓاْ أَنفُسَهُمۡ فَهُمۡ لَا يُؤۡمِنُونَ
ಕೇಳಿರಿ: “ಭೂಮ್ಯಾಕಾಶಗಳಲ್ಲಿರುವುದು ಯಾರಿಗೆ ಸೇರಿದ್ದು?” ಹೇಳಿರಿ: “ಅಲ್ಲಾಹನಿಗೆ ಸೇರಿದ್ದು.” ಅವನು ದಯೆ ತೋರುವುದನ್ನು ಸ್ವಯಂ ಕಡ್ಡಾಯಗೊಳಿಸಿದ್ದಾನೆ. ಪುನರುತ್ಥಾನದ ದಿನದಂದು ಅವನು ನಿಮ್ಮನ್ನು ಖಂಡಿತ ಒಟ್ಟುಗೂಡಿಸುವನು. ಅದರಲ್ಲಿ ಸಂಶಯವೇ ಇಲ್ಲ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.
೧೩
۞ وَلَهُۥ مَا سَكَنَ فِي ٱلَّيۡلِ وَٱلنَّهَارِۚ وَهُوَ ٱلسَّمِيعُ ٱلۡعَلِيمُ
ರಾತ್ರಿ ಮತ್ತು ಹಗಲಿನಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
೧೪
قُلۡ أَغَيۡرَ ٱللَّهِ أَتَّخِذُ وَلِيّٗا فَاطِرِ ٱلسَّمَٰوَٰتِ وَٱلۡأَرۡضِ وَهُوَ يُطۡعِمُ وَلَا يُطۡعَمُۗ قُلۡ إِنِّيٓ أُمِرۡتُ أَنۡ أَكُونَ أَوَّلَ مَنۡ أَسۡلَمَۖ وَلَا تَكُونَنَّ مِنَ ٱلۡمُشۡرِكِينَ
ಹೇಳಿರಿ: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ನಾನು ರಕ್ಷಕನಾಗಿ ಸ್ವೀಕರಿಸಬೇಕೇ? ಅವನು ಆಹಾರ ನೀಡುತ್ತಾನೆ. ಅವನಿಗೆ ಯಾರೂ ಆಹಾರವನ್ನು ನೀಡುವುದಿಲ್ಲ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನಿಗೆ ಶರಣಾದವರಲ್ಲಿ ಮೊದಲಿಗನಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ. ನೀವು ಎಂದಿಗೂ ಬಹುದೇವಾರಾಧಕರಲ್ಲಿ ಸೇರಬಾರದು (ಎಂದು ಕೂಡ ನನಗೆ ಆಜ್ಞಾಪಿಸಲಾಗಿದೆ).”
೧೫
قُلۡ إِنِّيٓ أَخَافُ إِنۡ عَصَيۡتُ رَبِّي عَذَابَ يَوۡمٍ عَظِيمٖ
ಹೇಳಿರಿ: “ನಾನು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಅವಿಧೇಯತೆ ತೋರಿದರೆ, ಒಂದು ಭಯಾನಕ ದಿನದ (ಪುನರುತ್ಥಾನ ದಿನದ) ಶಿಕ್ಷೆ (ನನ್ನ ಮೇಲೆರಗಬಹುದೆಂದು) ನಾನು ಭಯಪಡುತ್ತೇನೆ.”
೧೬
مَّن يُصۡرَفۡ عَنۡهُ يَوۡمَئِذٖ فَقَدۡ رَحِمَهُۥۚ وَذَٰلِكَ ٱلۡفَوۡزُ ٱلۡمُبِينُ
ಆ ದಿನ ಯಾರು ಶಿಕ್ಷೆಯಿಂದ ಪಾರಾಗುತ್ತಾನೋ ಅವನಿಗೆ ಅಲ್ಲಾಹು ಖಂಡಿತ ದಯೆ ತೋರಿದ್ದಾನೆ. ಅದು ಸ್ಪಷ್ಟ ವಿಜಯವಾಗಿದೆ.
೧೭
وَإِن يَمۡسَسۡكَ ٱللَّهُ بِضُرّٖ فَلَا كَاشِفَ لَهُۥٓ إِلَّا هُوَۖ وَإِن يَمۡسَسۡكَ بِخَيۡرٖ فَهُوَ عَلَىٰ كُلِّ شَيۡءٖ قَدِيرٞ
ಅಲ್ಲಾಹು ನಿಮಗೇನಾದರೂ ತೊಂದರೆ ಕೊಟ್ಟರೆ, ಅದನ್ನು ನಿವಾರಿಸಲು ಅವನ ಹೊರತು ಯಾರಿಗೂ ಸಾಧ್ಯವಿಲ್ಲ. ಅವನು ನಿಮಗೇನಾದರೂ ಒಳಿತು ಮಾಡಿದರೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
೧೮
وَهُوَ ٱلۡقَاهِرُ فَوۡقَ عِبَادِهِۦۚ وَهُوَ ٱلۡحَكِيمُ ٱلۡخَبِيرُ
ಅವನಿಗೆ ಅವರ ದಾಸರ ಮೇಲೆ ಪರಮಾಧಿಕಾರವಿದೆ. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
೧೯
قُلۡ أَيُّ شَيۡءٍ أَكۡبَرُ شَهَٰدَةٗۖ قُلِ ٱللَّهُۖ شَهِيدُۢ بَيۡنِي وَبَيۡنَكُمۡۚ وَأُوحِيَ إِلَيَّ هَٰذَا ٱلۡقُرۡءَانُ لِأُنذِرَكُم بِهِۦ وَمَنۢ بَلَغَۚ أَئِنَّكُمۡ لَتَشۡهَدُونَ أَنَّ مَعَ ٱللَّهِ ءَالِهَةً أُخۡرَىٰۚ قُل لَّآ أَشۡهَدُۚ قُلۡ إِنَّمَا هُوَ إِلَٰهٞ وَٰحِدٞ وَإِنَّنِي بَرِيٓءٞ مِّمَّا تُشۡرِكُونَ
ಕೇಳಿರಿ: “ಅತಿದೊಡ್ಡ ಸಾಕ್ಷ್ಯ ಯಾವುದು?” ಹೇಳಿರಿ: “ಅಲ್ಲಾಹು ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿದ್ದಾನೆ. ಈ ಕುರ್ಆನಿನ ಮೂಲಕ ನಿಮಗೆ ಮತ್ತು ಇದು ತಲುಪುವ ಎಲ್ಲರಿಗೂ ಮುನ್ನೆಚ್ಚರಿಕೆ ನೀಡಲು ನನಗೆ ಈ ಕುರ್ಆನನ್ನು ದೇವವಾಣಿಯಾಗಿ ನೀಡಲಾಗಿದೆ. ಅಲ್ಲಾಹನೊಂದಿಗೆ ಬೇರೆ ದೇವರಿದ್ದಾರೆಂದು ನೀವು ನಿಜವಾಗಿಯೂ ಸಾಕ್ಷಿವಹಿಸುತ್ತೀರಾ?” ಹೇಳಿರಿ: “ನಾನು ಸಾಕ್ಷಿವಹಿಸುವುದಿಲ್ಲ.” ಹೇಳಿರಿ: “ಅವನು ಏಕೈಕ ದೇವನು. ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.”
೨೦
ٱلَّذِينَ ءَاتَيۡنَٰهُمُ ٱلۡكِتَٰبَ يَعۡرِفُونَهُۥ كَمَا يَعۡرِفُونَ أَبۡنَآءَهُمُۘ ٱلَّذِينَ خَسِرُوٓاْ أَنفُسَهُمۡ فَهُمۡ لَا يُؤۡمِنُونَ
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು (ಯಹೂದಿಗಳು ಮತ್ತು ಕ್ರೈಸ್ತರು) ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅದನ್ನು (ಕುರ್ಆನನ್ನು) ಗುರುತಿಸುತ್ತಾರೆ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.
೨೧
وَمَنۡ أَظۡلَمُ مِمَّنِ ٱفۡتَرَىٰ عَلَى ٱللَّهِ كَذِبًا أَوۡ كَذَّبَ بِـَٔايَٰتِهِۦٓۚ إِنَّهُۥ لَا يُفۡلِحُ ٱلظَّٰلِمُونَ
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.
೨೨
وَيَوۡمَ نَحۡشُرُهُمۡ جَمِيعٗا ثُمَّ نَقُولُ لِلَّذِينَ أَشۡرَكُوٓاْ أَيۡنَ شُرَكَآؤُكُمُ ٱلَّذِينَ كُنتُمۡ تَزۡعُمُونَ
ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಸಹಭಾಗಿತ್ವ (ಶಿರ್ಕ್) ಮಾಡಿದವರೊಡನೆ ಕೇಳುವೆವು: “ನೀವು (ನಿಮ್ಮ ದೇವರುಗಳೆಂದು) ವಾದಿಸುತ್ತಿದ್ದ ಆ ಸಹಭಾಗಿಗಳು ಎಲ್ಲಿದ್ದಾರೆ?”
೨೩
ثُمَّ لَمۡ تَكُن فِتۡنَتُهُمۡ إِلَّآ أَن قَالُواْ وَٱللَّهِ رَبِّنَا مَا كُنَّا مُشۡرِكِينَ
ನಂತರ ಅವರ ಸಹಭಾಗಿತ್ವದ (ಶಿರ್ಕ್ನ) ಪರಿಣಾಮವು, “ನಮ್ಮ ಪರಿಪಾಲಕನಾದ ಅಲ್ಲಾಹನ ಮೇಲಾಣೆ! ನಿಶ್ಚಯವಾಗಿಯೂ ನಾವು ಸಹಭಾಗಿತ್ವ (ಶಿರ್ಕ್) ಮಾಡಿಲ್ಲ” ಎಂದು ಹೇಳುವುದರ ಹೊರತು ಇನ್ನೇನೂ ಆಗಿರುವುದಿಲ್ಲ.
೨೪
ٱنظُرۡ كَيۡفَ كَذَبُواْ عَلَىٰٓ أَنفُسِهِمۡۚ وَضَلَّ عَنۡهُم مَّا كَانُواْ يَفۡتَرُونَ
ಅವರು ಅವರ ಬಗ್ಗೆಯೇ ಹೇಗೆ ಸುಳ್ಳು ಹೇಳುತ್ತಿದ್ದಾರೆಂದು ನೋಡಿ. ಅವರು (ಅಲ್ಲಾಹನ ಸಹಭಾಗಿಗಳೆಂದು) ಆರೋಪಿಸುತ್ತಿದ್ದ ದೇವರುಗಳೆಲ್ಲವೂ ಅವರನ್ನು ಬಿಟ್ಟು ಮರೆಯಾಗಿ ಹೋದವು.
೨೫
وَمِنۡهُم مَّن يَسۡتَمِعُ إِلَيۡكَۖ وَجَعَلۡنَا عَلَىٰ قُلُوبِهِمۡ أَكِنَّةً أَن يَفۡقَهُوهُ وَفِيٓ ءَاذَانِهِمۡ وَقۡرٗاۚ وَإِن يَرَوۡاْ كُلَّ ءَايَةٖ لَّا يُؤۡمِنُواْ بِهَاۖ حَتَّىٰٓ إِذَا جَآءُوكَ يُجَٰدِلُونَكَ يَقُولُ ٱلَّذِينَ كَفَرُوٓاْ إِنۡ هَٰذَآ إِلَّآ أَسَٰطِيرُ ٱلۡأَوَّلِينَ
ಅವರಲ್ಲಿ ಕೆಲವರು ನೀವು (ಕುರ್ಆನ್ ಪಠಿಸುವುದನ್ನು) ಕಿವಿಗೊಟ್ಟು ಕೇಳುತ್ತಾರೆ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳ ಮೇಲೆ ಪರದೆಗಳನ್ನು ಮತ್ತು ಅವರ ಕಿವಿಗಳಿಗೆ ಕಿವುಡುತನವನ್ನು ಹಾಕಿದ್ದೇವೆ. ಅವರು ಎಲ್ಲಾ ರೀತಿಯ ದೃಷ್ಟಾಂತಗಳನ್ನು ನೋಡಿದರೂ ವಿಶ್ವಾಸವಿಡುವುದಿಲ್ಲ. ಎಲ್ಲಿಯವರೆಗೆಂದರೆ ಅವರು ತಮ್ಮ ಬಳಿಗೆ ತರ್ಕಿಸುವುದಕ್ಕಾಗಿ ಬಂದರೆ, ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಪುರಾತನ ಕಾಲದ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”
೨೬
وَهُمۡ يَنۡهَوۡنَ عَنۡهُ وَيَنۡـَٔوۡنَ عَنۡهُۖ وَإِن يُهۡلِكُونَ إِلَّآ أَنفُسَهُمۡ وَمَا يَشۡعُرُونَ
ಅವರು ಆ ಸತ್ಯದಿಂದ ಜನರನ್ನು ತಡೆಯುವುದಲ್ಲದೆ, ಸ್ವಯಂ ಅದರಿಂದ ದೂರವಾಗುತ್ತಿದ್ದಾರೆ. ಅವರು ಸ್ವಯಂ ಅವರನ್ನೇ ನಾಶ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
೨೭
وَلَوۡ تَرَىٰٓ إِذۡ وُقِفُواْ عَلَى ٱلنَّارِ فَقَالُواْ يَٰلَيۡتَنَا نُرَدُّ وَلَا نُكَذِّبَ بِـَٔايَٰتِ رَبِّنَا وَنَكُونَ مِنَ ٱلۡمُؤۡمِنِينَ
ಅವರನ್ನು ನರಕದ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡಿದ್ದರೆ! ಅವರು ಹೇಳುವರು: “ನಮ್ಮನ್ನು ಪುನಃ ಭೂಲೋಕಕ್ಕೆ ಕಳುಹಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಹಾಗೇನಾದರೂ ಕಳುಹಿಸಿದರೆ, ನಾವು ನಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಖಂಡಿತ ನಿಷೇಧಿಸುವುದಿಲ್ಲ; ಮತ್ತು ನಾವು ಖಂಡಿತ ಸತ್ಯವಿಶ್ವಾಸಿಗಳೊಡನೆ ಸೇರುವೆವು.”
೨೮
بَلۡ بَدَا لَهُم مَّا كَانُواْ يُخۡفُونَ مِن قَبۡلُۖ وَلَوۡ رُدُّواْ لَعَادُواْ لِمَا نُهُواْ عَنۡهُ وَإِنَّهُمۡ لَكَٰذِبُونَ
ಅಲ್ಲ, ವಾಸ್ತವವಾಗಿ ಅವರು ಇದಕ್ಕೆ ಮೊದಲು ಏನನ್ನು ಮುಚ್ಚಿಟ್ಟಿದ್ದರೋ ಅದು ಈಗ ಅವರಿಗೆ ಬಹಿರಂಗವಾಗಿದೆ. ಅವರನ್ನು ಪುನಃ ಭೂಲೋಕಕ್ಕೆ ಕಳುಹಿಸಲಾದರೂ, ಅವರಿಗೆ ವಿರೋಧಿಸಲಾದ ವಿಷಯಗಳನ್ನೇ ಅವರು ಪುನರಾವರ್ತಿಸುವರು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.
೨೯
وَقَالُوٓاْ إِنۡ هِيَ إِلَّا حَيَاتُنَا ٱلدُّنۡيَا وَمَا نَحۡنُ بِمَبۡعُوثِينَ
ಅವರು ಹೇಳಿದರು: “ನಮ್ಮ ಈ ಭೂಲೋಕ ಜೀವನದ ಹೊರತು ಬೇರೇನೂ ಇಲ್ಲ. ನಮಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೂ ಇಲ್ಲ.”
೩೦
وَلَوۡ تَرَىٰٓ إِذۡ وُقِفُواْ عَلَىٰ رَبِّهِمۡۚ قَالَ أَلَيۡسَ هَٰذَا بِٱلۡحَقِّۚ قَالُواْ بَلَىٰ وَرَبِّنَاۚ قَالَ فَذُوقُواْ ٱلۡعَذَابَ بِمَا كُنتُمۡ تَكۡفُرُونَ
ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಿಸಲಾದ ದೃಶ್ಯವನ್ನು ನೀವು ನೋಡಿದ್ದರೆ! ಅವನು ಕೇಳುವನು: “ಇದು ಸತ್ಯವಲ್ಲವೇ?” ಅವರು ಉತ್ತರಿಸುವರು: “ಹೌದು! ನಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ.” ಅವನು ಹೇಳುವನು: “ಹಾಗಾದರೆ ನೀವು ಏನನ್ನು ನಿಷೇಧಿಸಿದಿರೋ ಅದರ ಶಿಕ್ಷೆಯನ್ನು ಅನುಭವಿಸಿರಿ.”
೩೧
قَدۡ خَسِرَ ٱلَّذِينَ كَذَّبُواْ بِلِقَآءِ ٱللَّهِۖ حَتَّىٰٓ إِذَا جَآءَتۡهُمُ ٱلسَّاعَةُ بَغۡتَةٗ قَالُواْ يَٰحَسۡرَتَنَا عَلَىٰ مَا فَرَّطۡنَا فِيهَا وَهُمۡ يَحۡمِلُونَ أَوۡزَارَهُمۡ عَلَىٰ ظُهُورِهِمۡۚ أَلَا سَآءَ مَا يَزِرُونَ
ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಿಶ್ಚಯವಾಗಿಯೂ ನಷ್ಟ ಹೊಂದಿದರು. ಎಲ್ಲಿಯವರೆಗೆಂದರೆ, ಹಠಾತ್ತನೆ ಅಂತಿಮದಿನವು ಬರುವಾಗ, ಅವರು ಹೇಳುವರು: “ನಾವು ಇದರ (ಅಂತಿಮದಿನ) ಬಗ್ಗೆ ನಿರ್ಲಕ್ಷ್ಯ ಮಾಡಿದ ಕಾರಣ ಅಯ್ಯೋ! ನಮ್ಮ ದುರ್ಗತಿಯೇ!” ಅವರು ಅವರ ಬೆನ್ನುಗಳ ಮೇಲೆ ಪಾಪಗಳ ಭಾರವನ್ನು ಹೊರುತ್ತಿರುವರು. ಅವರು ಹೊರುವ ಭಾರವು ಬಹಳ ನಿಕೃಷ್ಟವಾಗಿದೆ.
೩೨
وَمَا ٱلۡحَيَوٰةُ ٱلدُّنۡيَآ إِلَّا لَعِبٞ وَلَهۡوٞۖ وَلَلدَّارُ ٱلۡأٓخِرَةُ خَيۡرٞ لِّلَّذِينَ يَتَّقُونَۚ أَفَلَا تَعۡقِلُونَ
ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಲ್ಲದೆ ಇನ್ನೇನೂ ಅಲ್ಲ. ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮವಾಗಿದೆ. ನೀವು ಆಲೋಚಿಸುವುದಿಲ್ಲವೇ?
೩೩
قَدۡ نَعۡلَمُ إِنَّهُۥ لَيَحۡزُنُكَ ٱلَّذِي يَقُولُونَۖ فَإِنَّهُمۡ لَا يُكَذِّبُونَكَ وَلَٰكِنَّ ٱلظَّٰلِمِينَ بِـَٔايَٰتِ ٱللَّهِ يَجۡحَدُونَ
ಅವರು ಹೇಳುವ ಮಾತುಗಳಿಂದ ನಿಮಗೆ ಬೇಸರವಾಗುತ್ತಿದೆಯೆಂದು ನಮಗೆ ಖಂಡಿತ ತಿಳಿದಿದೆ. ಆದರೆ ಅವರು ನಿಮ್ಮನ್ನು ನಿಷೇಧಿಸುವುದಿಲ್ಲ. ಆದರೆ ಆ ಅತಿರೇಕಿಗಳು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಾರೆ.
೩೪
وَلَقَدۡ كُذِّبَتۡ رُسُلٞ مِّن قَبۡلِكَ فَصَبَرُواْ عَلَىٰ مَا كُذِّبُواْ وَأُوذُواْ حَتَّىٰٓ أَتَىٰهُمۡ نَصۡرُنَاۚ وَلَا مُبَدِّلَ لِكَلِمَٰتِ ٱللَّهِۚ وَلَقَدۡ جَآءَكَ مِن نَّبَإِيْ ٱلۡمُرۡسَلِينَ
ನಿಮಗಿಂತ ಮೊದಲೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿದ್ದಾರೆ. ಜನರು ತಮ್ಮನ್ನು ನಿಷೇಧಿಸುವುದನ್ನು ಮತ್ತು ತಮಗೆ ತೊಂದರೆ ನೀಡುವುದನ್ನು ಅವರು ತಾಳಿಕೊಳ್ಳುತ್ತಿದ್ದರು—ನಮ್ಮ ಸಹಾಯವು ಬರುವವರೆಗೆ. ಅಲ್ಲಾಹನ ವಚನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಸಂದೇಶವಾಹಕರುಗಳ ಕೆಲವು ಸಮಾಚಾರಗಳು ನಿಮಗೆ ಈಗಾಗಲೇ ತಲುಪಿವೆ.
೩೫
وَإِن كَانَ كَبُرَ عَلَيۡكَ إِعۡرَاضُهُمۡ فَإِنِ ٱسۡتَطَعۡتَ أَن تَبۡتَغِيَ نَفَقٗا فِي ٱلۡأَرۡضِ أَوۡ سُلَّمٗا فِي ٱلسَّمَآءِ فَتَأۡتِيَهُم بِـَٔايَةٖۚ وَلَوۡ شَآءَ ٱللَّهُ لَجَمَعَهُمۡ عَلَى ٱلۡهُدَىٰۚ فَلَا تَكُونَنَّ مِنَ ٱلۡجَٰهِلِينَ
ಅವರು ನಿಮ್ಮನ್ನು ತಿರಸ್ಕರಿಸಿ ವಿಮುಖರಾಗುವುದನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾಗುವುದಾದರೆ, ಭೂಮಿಯೊಳಗಿಳಿಯಲು ಒಂದು ಸುರಂಗವನ್ನು, ಅಥವಾ ಆಕಾಶಕ್ಕೇರಲು ಒಂದು ಏಣಿಯನ್ನು ಹುಡುಕಿ, ನಂತರ ಅವರಿಗೊಂದು ದೃಷ್ಟಾಂತವನ್ನು ತಂದುಕೊಡಲು ಸಾಧ್ಯವಾಗುವುದಾದರೆ ತಂದು ಕೊಡಿ. ಅಲ್ಲಾಹು ಇಚ್ಛಿಸಿದರೆ ಅವರೆಲ್ಲರನ್ನೂ ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದ್ದರಿಂದ ನೀವು ಅವಿವೇಕಿಗಳಲ್ಲಿ ಸೇರಬೇಡಿ.
೩೬
۞ إِنَّمَا يَسۡتَجِيبُ ٱلَّذِينَ يَسۡمَعُونَۘ وَٱلۡمَوۡتَىٰ يَبۡعَثُهُمُ ٱللَّهُ ثُمَّ إِلَيۡهِ يُرۡجَعُونَ
ಕೇಳುವವರು ಮಾತ್ರ ಉತ್ತರಿಸುತ್ತಾರೆ. ಸತ್ತವರನ್ನು ಅಲ್ಲಾಹು ಜೀವ ನೀಡಿ ಎಬ್ಬಿಸುತ್ತಾನೆ. ನಂತರ ಅವರನ್ನು ಅವನ ಬಳಿಗೆ ಮರಳಿಸಲಾಗುತ್ತದೆ.
೩೭
وَقَالُواْ لَوۡلَا نُزِّلَ عَلَيۡهِ ءَايَةٞ مِّن رَّبِّهِۦۚ قُلۡ إِنَّ ٱللَّهَ قَادِرٌ عَلَىٰٓ أَن يُنَزِّلَ ءَايَةٗ وَلَٰكِنَّ أَكۡثَرَهُمۡ لَا يَعۡلَمُونَ
ಅವರು ಕೇಳುತ್ತಾರೆ: “ಅವರಿಗೆ (ಪ್ರವಾದಿಗೆ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಅವತೀರ್ಣವಾಗಿಲ್ಲ?” ಹೇಳಿರಿ: “ನಿಶ್ಚಯವಾಗಿಯೂ ದೃಷ್ಟಾಂತವನ್ನು ಅವತೀರ್ಣಗೊಳಿಸುವ ಸಾಮರ್ಥ್ಯ ಅಲ್ಲಾಹನಿಗಿದೆ.” ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
೩೮
وَمَا مِن دَآبَّةٖ فِي ٱلۡأَرۡضِ وَلَا طَٰٓئِرٖ يَطِيرُ بِجَنَاحَيۡهِ إِلَّآ أُمَمٌ أَمۡثَالُكُمۚ مَّا فَرَّطۡنَا فِي ٱلۡكِتَٰبِ مِن شَيۡءٖۚ ثُمَّ إِلَىٰ رَبِّهِمۡ يُحۡشَرُونَ
ಭೂಮಿಯಲ್ಲಿರುವ ಯಾವುದೇ ಜೀವಿಯಾಗಲಿ ಅಥವಾ (ಆಕಾಶದಲ್ಲಿ) ಎರಡು ರೆಕ್ಕೆಗಳಿಂದ ಹಾರಾಡುವ ಹಕ್ಕಿಗಳಾಗಲಿ, ಅವೆಲ್ಲವೂ ನಿಮ್ಮಂತಿರುವ ಸಮುದಾಯಗಳಾಗಿವೆ. ನಾವು ಗ್ರಂಥದಲ್ಲಿ[1] ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ನಂತರ ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಒಟ್ಟುಗೂಡಿಸಲಾಗುತ್ತದೆ.
[1] ಗ್ರಂಥದಲ್ಲಿ ಎಂದರೆ ಅಲ್ಲಾಹನ ಬಳಿಯಿರುವ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿ. ಅದರಲ್ಲಿ ಎಲ್ಲಾ ಜೀವಿಗಳ ಸಂಪೂರ್ಣ ಮಾಹಿತಿಗಳನ್ನು ದಾಖಲಿಸಲಾಗಿದೆ.
೩೯
وَٱلَّذِينَ كَذَّبُواْ بِـَٔايَٰتِنَا صُمّٞ وَبُكۡمٞ فِي ٱلظُّلُمَٰتِۗ مَن يَشَإِ ٱللَّهُ يُضۡلِلۡهُ وَمَن يَشَأۡ يَجۡعَلۡهُ عَلَىٰ صِرَٰطٖ مُّسۡتَقِيمٖ
ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಕಿವುಡರು, ಮೂಕರು ಮತ್ತು ಕತ್ತಲೆಗಳಲ್ಲಿರುವವರಾಗಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರನ್ನು ದುರ್ಮಾರ್ಗದಲ್ಲಿ ಮಾಡುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ನೇರಮಾರ್ಗದಲ್ಲಿ ಮಾಡುತ್ತಾನೆ.
೪೦
قُلۡ أَرَءَيۡتَكُمۡ إِنۡ أَتَىٰكُمۡ عَذَابُ ٱللَّهِ أَوۡ أَتَتۡكُمُ ٱلسَّاعَةُ أَغَيۡرَ ٱللَّهِ تَدۡعُونَ إِن كُنتُمۡ صَٰدِقِينَ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಅಂತಿಮದಿನವು ಸಂಭವಿಸಿದರೆ, ನೀವು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುತ್ತೀರಾ? ನೀವು ಸತ್ಯವಂತರಾಗಿದ್ದರೆ ಹೇಳಿರಿ.”
೪೧
بَلۡ إِيَّاهُ تَدۡعُونَ فَيَكۡشِفُ مَا تَدۡعُونَ إِلَيۡهِ إِن شَآءَ وَتَنسَوۡنَ مَا تُشۡرِكُونَ
ಇಲ್ಲ, ವಾಸ್ತವವಾಗಿ ನೀವು ಅಲ್ಲಾಹನನ್ನೇ ಕರೆದು ಪ್ರಾರ್ಥಿಸುತ್ತೀರಿ. ಆಗ ಅವನು ಇಚ್ಛಿಸಿದರೆ, ಯಾವುದಕ್ಕಾಗಿ ನೀವು ಅವನನ್ನು ಕರೆದು ಪ್ರಾರ್ಥಿಸಿದಿರೋ ಅದನ್ನು ಅವನು ನಿವಾರಿಸುವನು. (ಆ ಸಂದರ್ಭದಲ್ಲಿ) ನೀವು ಮಾಡುತ್ತಿದ್ದ ಸಹಭಾಗಿತ್ವವನ್ನು (ಶಿರ್ಕ್) ನೀವು ಮರೆತುಬಿಡುತ್ತೀರಿ.
೪೨
وَلَقَدۡ أَرۡسَلۡنَآ إِلَىٰٓ أُمَمٖ مِّن قَبۡلِكَ فَأَخَذۡنَٰهُم بِٱلۡبَأۡسَآءِ وَٱلضَّرَّآءِ لَعَلَّهُمۡ يَتَضَرَّعُونَ
ನಿಮಗಿಂತ ಮೊದಲು ಅನೇಕ ಸಮುದಾಯಗಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿದ್ದೇವೆ. ನಂತರ ಅವರು ವಿನಮ್ರರಾಗುವುದಕ್ಕಾಗಿ ನಾವು ಅವರನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿದೆವು.
೪೩
فَلَوۡلَآ إِذۡ جَآءَهُم بَأۡسُنَا تَضَرَّعُواْ وَلَٰكِن قَسَتۡ قُلُوبُهُمۡ وَزَيَّنَ لَهُمُ ٱلشَّيۡطَٰنُ مَا كَانُواْ يَعۡمَلُونَ
ನಮ್ಮ ಶಿಕ್ಷೆಯು ಬಂದಾಗ ಅವರೇಕೆ ವಿನಮ್ರರಾಗಲಿಲ್ಲ? ಆದರೆ ಅವರ ಹೃದಯಗಳು ಕಠೋರವಾದವು. ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಶೈತಾನನು ಅವರಿಗೆ ಅಲಂಕರಿಸಿ ತೋರಿಸಿದನು.
೪೪
فَلَمَّا نَسُواْ مَا ذُكِّرُواْ بِهِۦ فَتَحۡنَا عَلَيۡهِمۡ أَبۡوَٰبَ كُلِّ شَيۡءٍ حَتَّىٰٓ إِذَا فَرِحُواْ بِمَآ أُوتُوٓاْ أَخَذۡنَٰهُم بَغۡتَةٗ فَإِذَا هُم مُّبۡلِسُونَ
ಅವರಿಗೆ ನೀಡಲಾದ ಹಿತೋಪದೇಶಗಳನ್ನು ಅವರು ಮರೆತಾಗ, ಎಲ್ಲಾ ವಸ್ತುಗಳ ದ್ವಾರಗಳನ್ನು ನಾವು ಅವರಿಗೆ ತೆರೆದುಕೊಟ್ಟೆವು.[1] ಎಲ್ಲಿಯವರೆಗೆಂದರೆ, ಅವರಿಗೆ ನೀಡಲಾದ ಸವಲತ್ತುಗಳನ್ನು ಕಂಡು ಅವರು ಆನಂದಿಸುತ್ತಿದ್ದಾಗ ಹಠಾತ್ತನೆ ನಾವು ಅವರನ್ನು ಹಿಡಿದೆವು. ಆಗ ಅವರು ಸಂಪೂರ್ಣ ಹತಾಶರಾದರು.
[1] ಅಂದರೆ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮತ್ತು ಸವಲತ್ತುಗಳನ್ನು ಯಥೇಷ್ಟವಾಗಿ ನೀಡಿದೆವು.
೪೫
فَقُطِعَ دَابِرُ ٱلۡقَوۡمِ ٱلَّذِينَ ظَلَمُواْۚ وَٱلۡحَمۡدُ لِلَّهِ رَبِّ ٱلۡعَٰلَمِينَ
ಅಕ್ರಮವೆಸಗಿದ ಜನರನ್ನು ಬೇರು ಸಹಿತ ನಿರ್ಮೂಲನ ಮಾಡಲಾಯಿತು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
೪೬
قُلۡ أَرَءَيۡتُمۡ إِنۡ أَخَذَ ٱللَّهُ سَمۡعَكُمۡ وَأَبۡصَٰرَكُمۡ وَخَتَمَ عَلَىٰ قُلُوبِكُم مَّنۡ إِلَٰهٌ غَيۡرُ ٱللَّهِ يَأۡتِيكُم بِهِۗ ٱنظُرۡ كَيۡفَ نُصَرِّفُ ٱلۡأٓيَٰتِ ثُمَّ هُمۡ يَصۡدِفُونَ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮ್ಮ ಶ್ರವಣಶಕ್ತಿ ಮತ್ತು ದೃಷ್ಟಿಯನ್ನು ತೆಗೆದು, ನಿಮ್ಮ ಹೃದಯಗಳಿಗೆ ಮೊಹರು ಹಾಕಿದರೆ, ಅಲ್ಲಾಹನ ಹೊರತು ಅದನ್ನು ತಂದುಕೊಡುವ ದೇವರು ಯಾರು?” ನಾವು ಅವರಿಗೆ ನಮ್ಮ ವಚನಗಳನ್ನು ಹೇಗೆ ವಿವರಿಸಿಕೊಡುತ್ತಿದ್ದೇವೆಂದು ನೋಡಿರಿ. ಅದರ ನಂತರವೂ ಅವರು ವಿಮುಖರಾಗುತ್ತಿದ್ದಾರೆ.
೪೭
قُلۡ أَرَءَيۡتَكُمۡ إِنۡ أَتَىٰكُمۡ عَذَابُ ٱللَّهِ بَغۡتَةً أَوۡ جَهۡرَةً هَلۡ يُهۡلَكُ إِلَّا ٱلۡقَوۡمُ ٱلظَّٰلِمُونَ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ಹಠಾತ್ತನೆ ಬಂದರೆ, ಅಥವಾ ಬಹಿರಂಗವಾಗಿ ಬಂದರೆ, ಅಕ್ರಮವೆಸಗಿದ ಜನರ ಹೊರತು ಬೇರೆ ಯಾರಾದರೂ ನಾಶವಾಗುವರೇ?”
೪೮
وَمَا نُرۡسِلُ ٱلۡمُرۡسَلِينَ إِلَّا مُبَشِّرِينَ وَمُنذِرِينَۖ فَمَنۡ ءَامَنَ وَأَصۡلَحَ فَلَا خَوۡفٌ عَلَيۡهِمۡ وَلَا هُمۡ يَحۡزَنُونَ
ಶುಭವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಮಾತ್ರ ನಾವು ಸಂದೇಶವಾಹಕರನ್ನು ಕಳುಹಿಸುತ್ತೇವೆ. ಆದ್ದರಿಂದ ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸ್ವಯಂ ಸುಧಾರಿಸಿಕೊಳ್ಳುತ್ತಾನೋ—ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
೪೯
وَٱلَّذِينَ كَذَّبُواْ بِـَٔايَٰتِنَا يَمَسُّهُمُ ٱلۡعَذَابُ بِمَا كَانُواْ يَفۡسُقُونَ
ಆದರೆ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಅವಿಧೇಯತೆ ತೋರಿದ ಕಾರಣ ಶಿಕ್ಷೆಯು ಅವರನ್ನು ಸ್ಪರ್ಶಿಸಲಿದೆ.
೫೦
قُل لَّآ أَقُولُ لَكُمۡ عِندِي خَزَآئِنُ ٱللَّهِ وَلَآ أَعۡلَمُ ٱلۡغَيۡبَ وَلَآ أَقُولُ لَكُمۡ إِنِّي مَلَكٌۖ إِنۡ أَتَّبِعُ إِلَّا مَا يُوحَىٰٓ إِلَيَّۚ قُلۡ هَلۡ يَسۡتَوِي ٱلۡأَعۡمَىٰ وَٱلۡبَصِيرُۚ أَفَلَا تَتَفَكَّرُونَ
ಹೇಳಿರಿ: “ಅಲ್ಲಾಹನ ಖಜಾನೆಗಳು ನನ್ನ ವಶದಲ್ಲಿವೆಯೆಂದು ನಾನು ಹೇಳುವುದಿಲ್ಲ. ನನಗೆ ಅದೃಶ್ಯ ವಿಷಯಗಳು ತಿಳಿದಿಲ್ಲ. ನಾನೊಬ್ಬ ದೇವದೂತನೆಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ದೇವವಾಣಿಯಾಗಿ ನೀಡಲಾದುದನ್ನು ಮಾತ್ರ ನಾನು ಅನುಸರಿಸುತ್ತೇನೆ.” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರೇ? ನೀವೇಕೆ ಆಲೋಚಿಸುವುದಿಲ್ಲ?”
೫೧
وَأَنذِرۡ بِهِ ٱلَّذِينَ يَخَافُونَ أَن يُحۡشَرُوٓاْ إِلَىٰ رَبِّهِمۡ لَيۡسَ لَهُم مِّن دُونِهِۦ وَلِيّٞ وَلَا شَفِيعٞ لَّعَلَّهُمۡ يَتَّقُونَ
ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ತಮ್ಮನ್ನು ಒಟ್ಟುಗೂಡಿಸಲಾಗುವುದು ಎಂದು ಭಯಪಡುವವರಿಗೆ ಇದರ (ಕುರ್ಆನಿನ) ಮೂಲಕ ಎಚ್ಚರಿಕೆ ನೀಡಿರಿ. ಅವರಿಗೆ ಅಲ್ಲಾಹನ ಹೊರತು ಬೇರೆ ರಕ್ಷಕರು ಅಥವಾ ಶಿಫಾರಸುಗಾರರಿಲ್ಲ. ಅವರು ದೇವಭಯವುಳ್ಳವರಾಗುವುದಕ್ಕಾಗಿ.
೫೨
وَلَا تَطۡرُدِ ٱلَّذِينَ يَدۡعُونَ رَبَّهُم بِٱلۡغَدَوٰةِ وَٱلۡعَشِيِّ يُرِيدُونَ وَجۡهَهُۥۖ مَا عَلَيۡكَ مِنۡ حِسَابِهِم مِّن شَيۡءٖ وَمَا مِنۡ حِسَابِكَ عَلَيۡهِم مِّن شَيۡءٖ فَتَطۡرُدَهُمۡ فَتَكُونَ مِنَ ٱلظَّٰلِمِينَ
ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರನ್ನು ದೂರ ಮಾಡಬೇಡಿ.[1] ಅವರನ್ನು ವಿಚಾರಣೆ ಮಾಡುವ ಹೊಣೆ ನಿಮಗಿಲ್ಲ. ನಿಮ್ಮನ್ನು ವಿಚಾರಣೆ ಮಾಡುವ ಹೊಣೆ ಅವರಿಗಿಲ್ಲ. ನೀವು ಅವರನ್ನು ದೂರ ಮಾಡಿದರೆ, ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.
[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಯಾಯಿಗಳಲ್ಲಿ ಗುಲಾಮರು, ಬಡವರು ಮತ್ತು ದಬ್ಬಾಳಿಕೆಗೆ ಒಳಗಾದವರು ಇದ್ದರು. ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದುದರಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬರಲು ಕುರೈಷ್ ಮುಖಂಡರಿಗೆ ಅಸಹ್ಯವಾಗುತ್ತಿತ್ತು. ಅವರನ್ನು ದೂರ ಮಾಡಿದರೆ ನಾವು ನಿಮ್ಮ ಬಳಿಗೆ ಬರುತ್ತೇವೆಂದು ಅವರು ಹೇಳುತ್ತಿದ್ದರು.
೫೩
وَكَذَٰلِكَ فَتَنَّا بَعۡضَهُم بِبَعۡضٖ لِّيَقُولُوٓاْ أَهَٰٓؤُلَآءِ مَنَّ ٱللَّهُ عَلَيۡهِم مِّنۢ بَيۡنِنَآۗ أَلَيۡسَ ٱللَّهُ بِأَعۡلَمَ بِٱلشَّٰكِرِينَ
ಹೀಗೆ ನಾವು ಅವರಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸಿದೆವು. “ಅಲ್ಲಾಹು ನಮ್ಮ ನಡುವೆ ಅನುಗ್ರಹ ನೀಡಿ ಆಶೀರ್ವದಿಸಿದ್ದು ಇವರನ್ನೇ ಏನು?” ಎಂದು ಅವರು (ಸತ್ಯನಿಷೇಧಿಗಳು) ಹೇಳುವುದಕ್ಕಾಗಿ. ಕೃತಜ್ಞರಾಗಿರುವವರ ಬಗ್ಗೆ ಅಲ್ಲಾಹು ಅತಿಹೆಚ್ಚು ತಿಳಿದವನಲ್ಲವೇ?
೫೪
وَإِذَا جَآءَكَ ٱلَّذِينَ يُؤۡمِنُونَ بِـَٔايَٰتِنَا فَقُلۡ سَلَٰمٌ عَلَيۡكُمۡۖ كَتَبَ رَبُّكُمۡ عَلَىٰ نَفۡسِهِ ٱلرَّحۡمَةَ أَنَّهُۥ مَنۡ عَمِلَ مِنكُمۡ سُوٓءَۢا بِجَهَٰلَةٖ ثُمَّ تَابَ مِنۢ بَعۡدِهِۦ وَأَصۡلَحَ فَأَنَّهُۥ غَفُورٞ رَّحِيمٞ
ನಮ್ಮ ವಚನಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: “ನಿಮ್ಮ ಮೇಲೆ ಶಾಂತಿಯಿರಲಿ; ನಿಮ್ಮ ಪರಿಪಾಲಕನು ದಯೆ ತೋರುವುದನ್ನು ಸ್ವಯಂ ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ನಿಮ್ಮಲ್ಲಿ ಒಬ್ಬರು ಅರಿವಿಲ್ಲದೆ ಒಂದು ತಪ್ಪು ಮಾಡಿ, ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡರೆ, ನಿಶ್ಚಯವಾಗಿಯೂ ಅವನು (ಅಲ್ಲಾಹು) ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
೫೫
وَكَذَٰلِكَ نُفَصِّلُ ٱلۡأٓيَٰتِ وَلِتَسۡتَبِينَ سَبِيلُ ٱلۡمُجۡرِمِينَ
ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅಪರಾಧಿಗಳ ಮಾರ್ಗವು ನಿಚ್ಚಳವಾಗುವುದಕ್ಕಾಗಿ.
೫೬
قُلۡ إِنِّي نُهِيتُ أَنۡ أَعۡبُدَ ٱلَّذِينَ تَدۡعُونَ مِن دُونِ ٱللَّهِۚ قُل لَّآ أَتَّبِعُ أَهۡوَآءَكُمۡ قَدۡ ضَلَلۡتُ إِذٗا وَمَآ أَنَا۠ مِنَ ٱلۡمُهۡتَدِينَ
ಹೇಳಿರಿ: “ನಿಶ್ಚಯವಾಗಿಯೂ, ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರನ್ನು ಆರಾಧಿಸುವುದನ್ನು ನನಗೆ ವಿರೋಧಿಸಲಾಗಿದೆ.” ಹೇಳಿರಿ: “ನಾನು ನಿಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುವುದಿಲ್ಲ. ಹಿಂಬಾಲಿಸಿದರೆ ನಾನು ಖಂಡಿತ ದಾರಿತಪ್ಪುವೆನು ಮತ್ತು ಸನ್ಮಾರ್ಗಿಗಳಲ್ಲಿ ಸೇರದವನಾಗುವೆನು.”
೫೭
قُلۡ إِنِّي عَلَىٰ بَيِّنَةٖ مِّن رَّبِّي وَكَذَّبۡتُم بِهِۦۚ مَا عِندِي مَا تَسۡتَعۡجِلُونَ بِهِۦٓۚ إِنِ ٱلۡحُكۡمُ إِلَّا لِلَّهِۖ يَقُصُّ ٱلۡحَقَّۖ وَهُوَ خَيۡرُ ٱلۡفَٰصِلِينَ
ಹೇಳಿರಿ: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳಲ್ಲಿದ್ದೇನೆ. ಆದರೆ ನೀವು ಅದನ್ನು ನಿಷೇಧಿಸಿದ್ದೀರಿ. ನೀವು ತ್ವರೆ ಮಾಡುತ್ತಿರುವ ಶಿಕ್ಷೆ ನನ್ನ ವಶದಲ್ಲಿಲ್ಲ. ಆಜ್ಞಾಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. ಅವನು ಸತ್ಯವನ್ನು ತಿಳಿಸುತ್ತಾನೆ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”
೫೮
قُل لَّوۡ أَنَّ عِندِي مَا تَسۡتَعۡجِلُونَ بِهِۦ لَقُضِيَ ٱلۡأَمۡرُ بَيۡنِي وَبَيۡنَكُمۡۗ وَٱللَّهُ أَعۡلَمُ بِٱلظَّٰلِمِينَ
ಹೇಳಿರಿ: “ನೀವು ತ್ವರೆ ಮಾಡುವ ಶಿಕ್ಷೆ ನನ್ನ ವಶದಲ್ಲಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ವಿಷಯವು ತೀರ್ಮಾನವಾಗಿ ಬಿಡುತ್ತಿತ್ತು. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.”
೫೯
۞ وَعِندَهُۥ مَفَاتِحُ ٱلۡغَيۡبِ لَا يَعۡلَمُهَآ إِلَّا هُوَۚ وَيَعۡلَمُ مَا فِي ٱلۡبَرِّ وَٱلۡبَحۡرِۚ وَمَا تَسۡقُطُ مِن وَرَقَةٍ إِلَّا يَعۡلَمُهَا وَلَا حَبَّةٖ فِي ظُلُمَٰتِ ٱلۡأَرۡضِ وَلَا رَطۡبٖ وَلَا يَابِسٍ إِلَّا فِي كِتَٰبٖ مُّبِينٖ
ಅಗೋಚರ ವಿಷಯಗಳ ಖಜಾನೆಗಳಿರುವುದು[1] ಅಲ್ಲಾಹನ ಬಳಿ ಮಾತ್ರ. ಅವನಲ್ಲದೆ ಯಾರಿಗೂ ಅದು ತಿಳಿದಿಲ್ಲ. ನೆಲದಲ್ಲಿ ಮತ್ತು ಕಡಲಲ್ಲಿರುವುದನ್ನು ಅವನು ತಿಳಿಯುತ್ತಾನೆ. ಅವನು ತಿಳಿಯದೆ ಒಂದೇ ಒಂದು ಎಲೆಯೂ ಉದುರುವುದಿಲ್ಲ. ಭೂಮಿಯ ಗಾಢಾಂಧಕಾರಗಳಲ್ಲಿರುವ ಒಂದು ಧಾನ್ಯವಾಗಲಿ, ಹಸಿ ಅಥವಾ ಒಣಗಿದ ಯಾವುದೇ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ.”
[1] ಮಫಾತಿಹ್ ಎಂದರೆ ಖಜಾನೆಗಳು, ಕೀಲಿಕೈಗಳು ಎಂಬ ಅರ್ಥಗಳಿವೆ. ಅದೃಶ್ಯ ವಿಷಯಗಳನ್ನು ತಿಳಿದಿರುವವನು ಅಲ್ಲಾಹು ಮಾತ್ರ. ಸೃಷ್ಟಿಗಳಲ್ಲಿ ಯಾರಿಗೂ ಅದೃಶ್ಯ ಜ್ಞಾನವಿಲ್ಲ.
೬೦
وَهُوَ ٱلَّذِي يَتَوَفَّىٰكُم بِٱلَّيۡلِ وَيَعۡلَمُ مَا جَرَحۡتُم بِٱلنَّهَارِ ثُمَّ يَبۡعَثُكُمۡ فِيهِ لِيُقۡضَىٰٓ أَجَلٞ مُّسَمّٗىۖ ثُمَّ إِلَيۡهِ مَرۡجِعُكُمۡ ثُمَّ يُنَبِّئُكُم بِمَا كُنتُمۡ تَعۡمَلُونَ
ರಾತ್ರಿಯಲ್ಲಿ (ನಿದ್ರಿಸುವಾಗ) ಅವನು ನಿಮ್ಮ ಆತ್ಮಗಳನ್ನು ವಶಪಡಿಸುತ್ತಾನೆ ಮತ್ತು ನೀವು ಹಗಲಿನಲ್ಲಿ ಮಾಡಿದ ಕರ್ಮಗಳನ್ನು ತಿಳಿಯುತ್ತಾನೆ. ನಂತರ ನಿಶ್ಚಿತ ಜೀವಿತಾವಧಿಯನ್ನು ಪೂರ್ಣಗೊಳಿಸಲು ಅವನು ನಿಮ್ಮನ್ನು ಹಗಲಿನಲ್ಲಿ (ನಿದ್ದೆಯಿಂದ) ಎಬ್ಬಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೆ ಮರಳಿಸಲಾಗುತ್ತದೆ. ನಂತರ ನೀವು ಮಾಡಿದ ಕರ್ಮಗಳನ್ನು ಅವನು ನಿಮಗೆ ತಿಳಿಸುತ್ತಾನೆ.
೬೧
وَهُوَ ٱلۡقَاهِرُ فَوۡقَ عِبَادِهِۦۖ وَيُرۡسِلُ عَلَيۡكُمۡ حَفَظَةً حَتَّىٰٓ إِذَا جَآءَ أَحَدَكُمُ ٱلۡمَوۡتُ تَوَفَّتۡهُ رُسُلُنَا وَهُمۡ لَا يُفَرِّطُونَ
ಅವನಿಗೆ ಅವನ ದಾಸರ ಮೇಲೆ ಪರಮಾಧಿಕಾರವಿದೆ. ನಿಮ್ಮ ಮೇಲ್ನೋಟಕ್ಕೆ ಅವನು ಕಾವಲುಗಾರರನ್ನು (ದೇವದೂತರನ್ನು) ಕಳುಹಿಸುತ್ತಾನೆ. ಎಲ್ಲಿಯವರೆಗೆಂದರೆ, ನಿಮ್ಮಲ್ಲಿ ಒಬ್ಬನಿಗೆ ಮರಣವು ಸನ್ನಿಹಿತವಾದಾಗ, ನಮ್ಮ ದೂತರು ಅವನ ಆತ್ಮವನ್ನು ವಶಪಡಿಸುತ್ತಾರೆ. ಅವರು (ಕರ್ತವ್ಯ ನಿರ್ವಹಣೆಯಲ್ಲಿ) ಲೋಪವೆಸಗುವುದಿಲ್ಲ.
೬೨
ثُمَّ رُدُّوٓاْ إِلَى ٱللَّهِ مَوۡلَىٰهُمُ ٱلۡحَقِّۚ أَلَا لَهُ ٱلۡحُكۡمُ وَهُوَ أَسۡرَعُ ٱلۡحَٰسِبِينَ
ನಂತರ ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುತ್ತದೆ. ತಿಳಿಯಿರಿ! ಆಜ್ಞಾಧಿಕಾರವಿರುವುದು ಅವನಿಗೆ ಮಾತ್ರ. ಅವನು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
೬೩
قُلۡ مَن يُنَجِّيكُم مِّن ظُلُمَٰتِ ٱلۡبَرِّ وَٱلۡبَحۡرِ تَدۡعُونَهُۥ تَضَرُّعٗا وَخُفۡيَةٗ لَّئِنۡ أَنجَىٰنَا مِنۡ هَٰذِهِۦ لَنَكُونَنَّ مِنَ ٱلشَّٰكِرِينَ
ಹೇಳಿರಿ: “ಅಲ್ಲಾಹು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳುತ್ತಾ ನೀವು ವಿನಮ್ರತೆಯಿಂದ ಮತ್ತು ರಹಸ್ಯವಾಗಿ ಅವನನ್ನು ಕರೆದು ಪ್ರಾರ್ಥಿಸುವಾಗ, ನೆಲ ಮತ್ತು ಕಡಲಿನ ಗಾಢಾಂಧಕಾರಗಳಿಂದ ನಿಮ್ಮನ್ನು ಕಾಪಾಡುವುದು ಯಾರು?
೬೪
قُلِ ٱللَّهُ يُنَجِّيكُم مِّنۡهَا وَمِن كُلِّ كَرۡبٖ ثُمَّ أَنتُمۡ تُشۡرِكُونَ
ಹೇಳಿರಿ: “ಅದರಿಂದ ಮತ್ತು ಇತರೆಲ್ಲಾ ಅನಾಹುತಗಳಿಂದ ಅಲ್ಲಾಹನೇ ನಿಮ್ಮನ್ನು ಪಾರು ಮಾಡುತ್ತಾನೆ. ಅದರ ಬಳಿಕವೂ ನೀವು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತೀರಿ.”
೬೫
قُلۡ هُوَ ٱلۡقَادِرُ عَلَىٰٓ أَن يَبۡعَثَ عَلَيۡكُمۡ عَذَابٗا مِّن فَوۡقِكُمۡ أَوۡ مِن تَحۡتِ أَرۡجُلِكُمۡ أَوۡ يَلۡبِسَكُمۡ شِيَعٗا وَيُذِيقَ بَعۡضَكُم بَأۡسَ بَعۡضٍۗ ٱنظُرۡ كَيۡفَ نُصَرِّفُ ٱلۡأٓيَٰتِ لَعَلَّهُمۡ يَفۡقَهُونَ
ಹೇಳಿರಿ: “ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲುಗಳ ಅಡಿಭಾಗದಿಂದ ನಿಮಗೆ ಶಿಕ್ಷೆಯನ್ನು ಕಳುಹಿಸಲು, ಅಥವಾ ನಿಮ್ಮನ್ನು ವಿಭಿನ್ನ ಪಂಗಡಗಳನ್ನಾಗಿ ಮಾಡಿ ಗೊಂದಲಗೊಳಿಸಿ, ನೀವು ಪರಸ್ಪರ ಹಿಂಸೆ ಅನುಭವಿಸುವಂತೆ ಮಾಡಲು ಅವನಿಗೆ ಸಾಮರ್ಥ್ಯವಿದೆ.” ನಾವು ಹೇಗೆ ವಚನಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ಅವರು ಅರ್ಥಮಾಡಿಕೊಳ್ಳುವುದಕ್ಕಾಗಿ.
೬೬
وَكَذَّبَ بِهِۦ قَوۡمُكَ وَهُوَ ٱلۡحَقُّۚ قُل لَّسۡتُ عَلَيۡكُم بِوَكِيلٖ
ಇದು ಸತ್ಯವಾಗಿದ್ದೂ ಸಹ ನಿಮ್ಮ ಜನರು ಇದನ್ನು ನಿಷೇಧಿಸಿದ್ದಾರೆ. ಹೇಳಿರಿ: “ನಾನು ನಿಮ್ಮ ಮೇಲ್ನೋಟ ವಹಿಸುವವನಲ್ಲ.”
೬೭
لِّكُلِّ نَبَإٖ مُّسۡتَقَرّٞۚ وَسَوۡفَ تَعۡلَمُونَ
ಪ್ರತಿಯೊಂದು ಘಟನೆಗೂ ಒಂದು ನಿಶ್ಚಿತ ಸಮಯವಿದೆ. ನೀವು ಸದ್ಯವೇ ತಿಳಿಯುವಿರಿ.
೬೮
وَإِذَا رَأَيۡتَ ٱلَّذِينَ يَخُوضُونَ فِيٓ ءَايَٰتِنَا فَأَعۡرِضۡ عَنۡهُمۡ حَتَّىٰ يَخُوضُواْ فِي حَدِيثٍ غَيۡرِهِۦۚ وَإِمَّا يُنسِيَنَّكَ ٱلشَّيۡطَٰنُ فَلَا تَقۡعُدۡ بَعۡدَ ٱلذِّكۡرَىٰ مَعَ ٱلۡقَوۡمِ ٱلظَّٰلِمِينَ
ಜನರು ಅಲ್ಲಾಹನ ವಚನಗಳ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ಕಂಡರೆ, ಅವರು ಬೇರೆ ವಿಷಯಕ್ಕೆ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ. ಶೈತಾನನು ನಿಮಗೆ ಮರೆಯುವಂತೆ ಮಾಡಿದರೆ ನೆನಪಾದ ನಂತರ ಅಕ್ರಮವೆಸಗುವ ಆ ಜನರೊಡನೆ ಕುಳಿತುಕೊಳ್ಳಬೇಡಿ.
೬೯
وَمَا عَلَى ٱلَّذِينَ يَتَّقُونَ مِنۡ حِسَابِهِم مِّن شَيۡءٖ وَلَٰكِن ذِكۡرَىٰ لَعَلَّهُمۡ يَتَّقُونَ
ಅವರ ವಿಚಾರಣೆ ಮಾಡುವ ಯಾವುದೇ ಹೊಣೆ ದೇವಭಯವುಳ್ಳವರಿಗಿಲ್ಲ. ಆದರೆ ಅವರಿಗೆ ನೆನಪಿಸಿಕೊಡಬೇಕು. ಅವರು ದೇವಭಯದಿಂದ ಜೀವಿಸುವುದಕ್ಕಾಗಿ.
೭೦
وَذَرِ ٱلَّذِينَ ٱتَّخَذُواْ دِينَهُمۡ لَعِبٗا وَلَهۡوٗا وَغَرَّتۡهُمُ ٱلۡحَيَوٰةُ ٱلدُّنۡيَاۚ وَذَكِّرۡ بِهِۦٓ أَن تُبۡسَلَ نَفۡسُۢ بِمَا كَسَبَتۡ لَيۡسَ لَهَا مِن دُونِ ٱللَّهِ وَلِيّٞ وَلَا شَفِيعٞ وَإِن تَعۡدِلۡ كُلَّ عَدۡلٖ لَّا يُؤۡخَذۡ مِنۡهَآۗ أُوْلَٰٓئِكَ ٱلَّذِينَ أُبۡسِلُواْ بِمَا كَسَبُواْۖ لَهُمۡ شَرَابٞ مِّنۡ حَمِيمٖ وَعَذَابٌ أَلِيمُۢ بِمَا كَانُواْ يَكۡفُرُونَ
ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರನ್ನು ಹಾಗೂ ಇಹಲೋಕದ ಜೀವನಕ್ಕೆ ಮರುಳಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಜನರು ತಮ್ಮ ಕರ್ಮಗಳ ಕಾರಣದಿಂದ ನಾಶವಾಗದಿರುವುದಕ್ಕಾಗಿ ಇದರ (ಕುರ್ಆನಿನ) ಮೂಲಕ ಅವರಿಗೆ ಉಪದೇಶ ನೀಡಿ. ಅವರಿಗೆ ಅಲ್ಲಾಹನ ಹೊರತು ಯಾವುದೇ ರಕ್ಷಕ ಅಥವಾ ಶಿಫಾರಸುಗಾರನಿಲ್ಲ. ಅವರು ಎಲ್ಲಾ ರೀತಿಯ ಪರಿಹಾರಗಳನ್ನು ನೀಡಿದರೂ ಅದನ್ನು ಅವರಿಂದ ಸ್ವೀಕರಿಸಲಾಗುವುದಿಲ್ಲ. ಅವರೇ ತಮ್ಮ ಕರ್ಮಗಳ ಕಾರಣದಿಂದ ನಾಶವಾದವರು. ಅವರು ಸತ್ಯವನ್ನು ನಿಷೇಧಿಸುವ ಕಾರಣ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ.
೭೧
قُلۡ أَنَدۡعُواْ مِن دُونِ ٱللَّهِ مَا لَا يَنفَعُنَا وَلَا يَضُرُّنَا وَنُرَدُّ عَلَىٰٓ أَعۡقَابِنَا بَعۡدَ إِذۡ هَدَىٰنَا ٱللَّهُ كَٱلَّذِي ٱسۡتَهۡوَتۡهُ ٱلشَّيَٰطِينُ فِي ٱلۡأَرۡضِ حَيۡرَانَ لَهُۥٓ أَصۡحَٰبٞ يَدۡعُونَهُۥٓ إِلَى ٱلۡهُدَى ٱئۡتِنَاۗ قُلۡ إِنَّ هُدَى ٱللَّهِ هُوَ ٱلۡهُدَىٰۖ وَأُمِرۡنَا لِنُسۡلِمَ لِرَبِّ ٱلۡعَٰلَمِينَ
ಹೇಳಿರಿ: “ಅಲ್ಲಾಹನನ್ನು ಬಿಟ್ಟು ನಮಗೆ ಉಪಕಾರ ಅಥವಾ ತೊಂದರೆ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸಬೇಕೇ? ಅಲ್ಲಾಹು ನಮಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ನಾವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿ ಹೋಗುವಂತಾಗಬೇಕೇ? “ನಮ್ಮ ಬಳಿ ಬಾ” ಎಂದು ಸನ್ಮಾರ್ಗಕ್ಕೆ ಕರೆಯುವ ಗೆಳೆಯರಿದ್ದೂ ಸಹ, ಶೈತಾನರ ಆಮಿಷಕ್ಕೆ ಬಲಿಯಾಗಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ ಅಲೆದಾಡುವ ವ್ಯಕ್ತಿಯಂತೆ ನಾವಾಗಬೇಕೇ?” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.”
೭೨
وَأَنۡ أَقِيمُواْ ٱلصَّلَوٰةَ وَٱتَّقُوهُۚ وَهُوَ ٱلَّذِيٓ إِلَيۡهِ تُحۡشَرُونَ
“ನಮಾಝ್ ಸಂಸ್ಥಾಪಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ” ಎಂದು ಕೂಡ (ನಮಗೆ ಆಜ್ಞಾಪಿಸಲಾಗಿದೆ). ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುವುದು.
೭೩
وَهُوَ ٱلَّذِي خَلَقَ ٱلسَّمَٰوَٰتِ وَٱلۡأَرۡضَ بِٱلۡحَقِّۖ وَيَوۡمَ يَقُولُ كُن فَيَكُونُۚ قَوۡلُهُ ٱلۡحَقُّۚ وَلَهُ ٱلۡمُلۡكُ يَوۡمَ يُنفَخُ فِي ٱلصُّورِۚ عَٰلِمُ ٱلۡغَيۡبِ وَٱلشَّهَٰدَةِۚ وَهُوَ ٱلۡحَكِيمُ ٱلۡخَبِيرُ
ಭೂಮ್ಯಾಕಾಶಗಳನ್ನು ಸತ್ಯ ಸಹಿತ ಸೃಷ್ಟಿಸಿದವನು ಅವನೇ. ಅವನು “ಉಂಟಾಗು” ಎಂದು ಹೇಳುವ ದಿನ ಅದು ಉಂಟಾಗುತ್ತದೆ. ಅವನ ಮಾತು ಸತ್ಯವಾಗಿದೆ. ಕಹಳೆಯಲ್ಲಿ ಊದಲಾಗುವ ದಿನ ಆಧಿಪತ್ಯವು ಅವನದ್ದಾಗಿದೆ. ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನು. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
೭೪
۞ وَإِذۡ قَالَ إِبۡرَٰهِيمُ لِأَبِيهِ ءَازَرَ أَتَتَّخِذُ أَصۡنَامًا ءَالِهَةً إِنِّيٓ أَرَىٰكَ وَقَوۡمَكَ فِي ضَلَٰلٖ مُّبِينٖ
ಇಬ್ರಾಹೀಮರು ತಮ್ಮ ತಂದೆ ಆಝರನೊಡನೆ ಹೇಳಿದ ಸಂದರ್ಭ: “ನೀವು ವಿಗ್ರಹಗಳನ್ನು ದೇವರಾಗಿ ಸ್ವೀಕರಿಸಿದ್ದೀರಾ? ನಿಶ್ಚಯವಾಗಿಯೂ ನೀವು ಮತ್ತು ನಿಮ್ಮ ಜನರು ಸ್ಪಷ್ಟ ದುರ್ಮಾರ್ಗದಲ್ಲಿರುವುದನ್ನು ನಾನು ಕಾಣುತ್ತಿದ್ದೇನೆ.”
೭೫
وَكَذَٰلِكَ نُرِيٓ إِبۡرَٰهِيمَ مَلَكُوتَ ٱلسَّمَٰوَٰتِ وَٱلۡأَرۡضِ وَلِيَكُونَ مِنَ ٱلۡمُوقِنِينَ
ಈ ರೀತಿ ನಾವು ಇಬ್ರಾಹೀಮರಿಗೆ ಭೂಮ್ಯಾಕಾಶಗಳ ಆಧಿಪತ್ಯಗಳನ್ನು ತೋರಿಸಿಕೊಟ್ಟೆವು; ಅವರು ದೃಢವಿಶ್ವಾಸಿಗಳಲ್ಲಿ ಒಳಪಡುವುದಕ್ಕಾಗಿ.
೭೬
فَلَمَّا جَنَّ عَلَيۡهِ ٱلَّيۡلُ رَءَا كَوۡكَبٗاۖ قَالَ هَٰذَا رَبِّيۖ فَلَمَّآ أَفَلَ قَالَ لَآ أُحِبُّ ٱلۡأٓفِلِينَ
ರಾತ್ರಿಯು ಅವರನ್ನು ಆವರಿಸಿದಾಗ ಅವರು ನಕ್ಷತ್ರವನ್ನು ಕಂಡರು. ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಆದರೆ ಅದು ಕಣ್ಮರೆಯಾದಾಗ ಅವರು ಹೇಳಿದರು: “ಕಣ್ಮರೆಯಾಗುವವರನ್ನು ನಾನು ಇಷ್ಟಪಡುವುದಿಲ್ಲ.”
೭೭
فَلَمَّا رَءَا ٱلۡقَمَرَ بَازِغٗا قَالَ هَٰذَا رَبِّيۖ فَلَمَّآ أَفَلَ قَالَ لَئِن لَّمۡ يَهۡدِنِي رَبِّي لَأَكُونَنَّ مِنَ ٱلۡقَوۡمِ ٱلضَّآلِّينَ
ನಂತರ ಚಂದ್ರ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ನನ್ನ ಪರಿಪಾಲಕ ನನಗೆ ಸನ್ಮಾರ್ಗ ತೋರಿಸದಿದ್ದರೆ ನಾನು ದಾರಿತಪ್ಪಿದವರಲ್ಲಿ ಸೇರುವುದು ನಿಶ್ಚಿತ.”
೭೮
فَلَمَّا رَءَا ٱلشَّمۡسَ بَازِغَةٗ قَالَ هَٰذَا رَبِّي هَٰذَآ أَكۡبَرُۖ فَلَمَّآ أَفَلَتۡ قَالَ يَٰقَوۡمِ إِنِّي بَرِيٓءٞ مِّمَّا تُشۡرِكُونَ
ನಂತರ ಸೂರ್ಯ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ! ಇವನು ಬಹಳ ದೊಡ್ಡವನು!” ನಂತರ ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.[1]
[1] ಇಬ್ರಾಹೀಮರ (ಅವರ ಮೇಲೆ ಶಾಂತಿಯಿರಲಿ) ಕಾಲದ ಜನರು ವಿಗ್ರಹಗಳನ್ನು ಮಾತ್ರವಲ್ಲದೆ ಆಕಾಶಕಾಯಗಳನ್ನು ಕೂಡ ಪೂಜಿಸುತ್ತಿದ್ದರು. ಸೂರ್ಯ, ಚಂದ್ರ, ನಕ್ಷತ್ರಗಳು ದೇವರುಗಳೆಂದು ಅವರು ನಂಬುತ್ತಿದ್ದರು. ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ಅವರ ಈ ನಂಬಿಕೆಯು ಎಷ್ಟು ಬಾಲಿಶವೆಂದು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.
೭೯
إِنِّي وَجَّهۡتُ وَجۡهِيَ لِلَّذِي فَطَرَ ٱلسَّمَٰوَٰتِ وَٱلۡأَرۡضَ حَنِيفٗاۖ وَمَآ أَنَا۠ مِنَ ٱلۡمُشۡرِكِينَ
ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ (ಅಲ್ಲಾಹನಿಗೆ) ನಾನು ನನ್ನ ಮುಖವನ್ನು ಏಕನಿಷ್ಠೆಯಿಂದ ತಿರುಗಿಸಿದ್ದೇನೆ. ನಾನು ಸಹಭಾಗಿತ್ವ (ಶಿರ್ಕ್) ಮಾಡುವವರಲ್ಲಿ ಸೇರಿದವನಲ್ಲ.”
೮೦
وَحَآجَّهُۥ قَوۡمُهُۥۚ قَالَ أَتُحَٰٓجُّوٓنِّي فِي ٱللَّهِ وَقَدۡ هَدَىٰنِۚ وَلَآ أَخَافُ مَا تُشۡرِكُونَ بِهِۦٓ إِلَّآ أَن يَشَآءَ رَبِّي شَيۡـٔٗاۚ وَسِعَ رَبِّي كُلَّ شَيۡءٍ عِلۡمًاۚ أَفَلَا تَتَذَكَّرُونَ
ಅವರ ಜನರು ಅವರೊಂದಿಗೆ ತರ್ಕಿಸಿದರು. ಅವರು ಹೇಳಿದರು: “ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತೀರಾ? ಅವನು ನನಗೆ ಸನ್ಮಾರ್ಗವನ್ನು ತೋರಿಸಿದ್ದಾನೆ. ನೀವು ಅವನೊಡನೆ ಸಹಭಾಗಿಯಾಗಿ ಮಾಡುವ ಯಾರನ್ನೂ (ಯಾವುದೇ ದೇವರನ್ನೂ) ನಾನು ಭಯಪಡುವುದಿಲ್ಲ. ನನ್ನ ಪರಿಪಾಲಕನು (ಅಲ್ಲಾಹು) ಇಚ್ಛಿಸುವುದು ಮಾತ್ರ ಸಂಭವಿಸುತ್ತದೆ. ನನ್ನ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ. ನೀವು ಉಪದೇಶ ಪಡೆಯುವುದಿಲ್ಲವೇ?
೮೧
وَكَيۡفَ أَخَافُ مَآ أَشۡرَكۡتُمۡ وَلَا تَخَافُونَ أَنَّكُمۡ أَشۡرَكۡتُم بِٱللَّهِ مَا لَمۡ يُنَزِّلۡ بِهِۦ عَلَيۡكُمۡ سُلۡطَٰنٗاۚ فَأَيُّ ٱلۡفَرِيقَيۡنِ أَحَقُّ بِٱلۡأَمۡنِۖ إِن كُنتُمۡ تَعۡلَمُونَ
ನೀವು (ಅಲ್ಲಾಹನೊಡನೆ) ಸಹಭಾಗಿಯಾಗಿ ಮಾಡಿದವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಅವತೀರ್ಣಗೊಳಿಸದ ವಸ್ತುಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಲು ನೀವು (ಸ್ವಲ್ಪವೂ) ಭಯಪಡುವುದಿಲ್ಲ. ಹೀಗಿರುವಾಗ ಈ ಎರಡು ಪಕ್ಷಗಳಲ್ಲಿ ನಿರ್ಭಯಕ್ಕೆ ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”[1]
[1] ಅಲ್ಲಾಹನ ಸೃಷ್ಟಿಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಿ ನೀವು ಅವರನ್ನು ದೇವರೆಂದು ಕರೆದು ಆರಾಧಿಸುತ್ತೀರಿ. ಅವರು ದೇವರು ಎನ್ನುವುದಕ್ಕೆ ಅಲ್ಲಾಹು ಯಾವುದೇ ಪುರಾವೆಯನ್ನೂ ಇಳಿಸಿಲ್ಲ. ಅಲ್ಲಾಹನ ಆಜ್ಞೆಗೆ ವಿರುದ್ಧವಾಗಿ ಅವರನ್ನು ದೇವರನ್ನಾಗಿ ಮಾಡಿ ಪ್ರಾರ್ಥಿಸಲು ನೀವು ಸ್ವಲ್ಪವೂ ಭಯಪಡುವುದಿಲ್ಲ. ನಾನು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನನ್ನು ಮಾತ್ರ ಭಯಪಡುತ್ತೇನೆ. ಹೀಗಿರುವಾಗ, ಹೆಚ್ಚು ನಿರ್ಭಯರಾಗಿರುವವರು ಯಾರು? ನಾನೋ ಅಥವಾ ನೀವೋ? ಸರಿಯಾಗಿ ಆಲೋಚನೆ ಮಾಡಿ ಹೇಳಿ.
೮೨
ٱلَّذِينَ ءَامَنُواْ وَلَمۡ يَلۡبِسُوٓاْ إِيمَٰنَهُم بِظُلۡمٍ أُوْلَٰٓئِكَ لَهُمُ ٱلۡأَمۡنُ وَهُم مُّهۡتَدُونَ
ಸತ್ಯವಿಶ್ವಾಸಿಗಳು ಮತ್ತು ತಮ್ಮ ವಿಶ್ವಾಸದಲ್ಲಿ ಸಹಭಾಗಿತ್ವವನ್ನು (ಶಿರ್ಕ್) ಬೆರೆಸದವರು ಯಾರೋ—ಅವರಿಗೆ ನಿರ್ಭಯವಿದೆ. ಅವರೇ ಸನ್ಮಾರ್ಗ ಪಡೆದವರು.
೮೩
وَتِلۡكَ حُجَّتُنَآ ءَاتَيۡنَٰهَآ إِبۡرَٰهِيمَ عَلَىٰ قَوۡمِهِۦۚ نَرۡفَعُ دَرَجَٰتٖ مَّن نَّشَآءُۗ إِنَّ رَبَّكَ حَكِيمٌ عَلِيمٞ
ಇದು ನಾವು ಇಬ್ರಾಹೀಮರಿಗೆ ಅವರ ಜನರ ವಿರುದ್ಧ ತರ್ಕಿಸಲು ನೀಡಿದ ಪುರಾವೆಯಾಗಿದೆ. ನಾವು ಇಚ್ಛಿಸುವವರ ಸ್ಥಾನಮಾನಗಳನ್ನು ನಾವು ಏರಿಸುತ್ತೇವೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
೮೪
وَوَهَبۡنَا لَهُۥٓ إِسۡحَٰقَ وَيَعۡقُوبَۚ كُلًّا هَدَيۡنَاۚ وَنُوحًا هَدَيۡنَا مِن قَبۡلُۖ وَمِن ذُرِّيَّتِهِۦ دَاوُۥدَ وَسُلَيۡمَٰنَ وَأَيُّوبَ وَيُوسُفَ وَمُوسَىٰ وَهَٰرُونَۚ وَكَذَٰلِكَ نَجۡزِي ٱلۡمُحۡسِنِينَ
ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರಿಗೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಅವರಿಗಿಂತ ಮೊದಲು ನಾವು ನೂಹರಿಗೆ ಸನ್ಮಾರ್ಗವನ್ನು ತೋರಿಸಿದೆವು. ಅವರ ಸಂತಾನದಲ್ಲಿ ಸೇರಿದ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನರಿಗೂ ಕೂಡ. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
೮೫
وَزَكَرِيَّا وَيَحۡيَىٰ وَعِيسَىٰ وَإِلۡيَاسَۖ كُلّٞ مِّنَ ٱلصَّٰلِحِينَ
ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸರಿಗೂ ಕೂಡ. ಅವರೆಲ್ಲರೂ ನೀತಿವಂತರಲ್ಲಿ ಸೇರಿದವರು.
೮೬
وَإِسۡمَٰعِيلَ وَٱلۡيَسَعَ وَيُونُسَ وَلُوطٗاۚ وَكُلّٗا فَضَّلۡنَا عَلَى ٱلۡعَٰلَمِينَ
ಇಸ್ಮಾಈಲ್, ಅಲ್ಯಸಅ್, ಯೂನುಸ್ ಮತ್ತು ಲೂತರಿಗೂ ಕೂಡ. ಅವರೆಲ್ಲರನ್ನೂ ನಾವು ಸರ್ವಲೋಕದವರಲ್ಲಿ ಶ್ರೇಷ್ಠಗೊಳಿಸಿದೆವು.
೮೭
وَمِنۡ ءَابَآئِهِمۡ وَذُرِّيَّٰتِهِمۡ وَإِخۡوَٰنِهِمۡۖ وَٱجۡتَبَيۡنَٰهُمۡ وَهَدَيۡنَٰهُمۡ إِلَىٰ صِرَٰطٖ مُّسۡتَقِيمٖ
ಅವರ ಪೂರ್ವಜರು, ಅವರ ಮಕ್ಕಳು ಮತ್ತು ಸಹೋದರರಿಗೂ ಕೂಡ. ಅವರನ್ನು ನಾವು ವಿಶೇಷವಾಗಿ ಆರಿಸಿದೆವು ಮತ್ತು ನೇರಮಾರ್ಗಕ್ಕೆ ಮುನ್ನಡೆಸಿದೆವು.
೮೮
ذَٰلِكَ هُدَى ٱللَّهِ يَهۡدِي بِهِۦ مَن يَشَآءُ مِنۡ عِبَادِهِۦۚ وَلَوۡ أَشۡرَكُواْ لَحَبِطَ عَنۡهُم مَّا كَانُواْ يَعۡمَلُونَ
ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅದನ್ನು ತೋರಿಸುತ್ತಾನೆ. ಅವರು (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಿದ್ದರೆ ಅವರು ಮಾಡಿದ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.
೮೯
أُوْلَٰٓئِكَ ٱلَّذِينَ ءَاتَيۡنَٰهُمُ ٱلۡكِتَٰبَ وَٱلۡحُكۡمَ وَٱلنُّبُوَّةَۚ فَإِن يَكۡفُرۡ بِهَا هَٰٓؤُلَآءِ فَقَدۡ وَكَّلۡنَا بِهَا قَوۡمٗا لَّيۡسُواْ بِهَا بِكَٰفِرِينَ
ಇವರಿಗೇ ನಾವು ಗ್ರಂಥ, ವಿವೇಕ ಮತ್ತು ಪ್ರವಾದಿತ್ವಗಳನ್ನು ನೀಡಿದ್ದು. ಇವರು (ಸತ್ಯನಿಷೇಧಿಗಳು) ಅವುಗಳನ್ನು ನಿಷೇಧಿಸಿದರೆ, ಅವುಗಳನ್ನು ನಿಷೇಧಿಸದ ಜನರಿಗೆ ನಾವು ಅದನ್ನು ವಹಿಸಿಕೊಟ್ಟಿದ್ದೇವೆ.
೯೦
أُوْلَٰٓئِكَ ٱلَّذِينَ هَدَى ٱللَّهُۖ فَبِهُدَىٰهُمُ ٱقۡتَدِهۡۗ قُل لَّآ أَسۡـَٔلُكُمۡ عَلَيۡهِ أَجۡرًاۖ إِنۡ هُوَ إِلَّا ذِكۡرَىٰ لِلۡعَٰلَمِينَ
ಇವರಿಗೇ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದ್ದು. ಆದ್ದರಿಂದ ಅವರ ಸನ್ಮಾರ್ಗವನ್ನು ಅನುಸರಿಸಿರಿ. ಹೇಳಿರಿ: “ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲ ಕೇಳುವುದಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶ ಮಾತ್ರವಾಗಿದೆ.”
೯೧
وَمَا قَدَرُواْ ٱللَّهَ حَقَّ قَدۡرِهِۦٓ إِذۡ قَالُواْ مَآ أَنزَلَ ٱللَّهُ عَلَىٰ بَشَرٖ مِّن شَيۡءٖۗ قُلۡ مَنۡ أَنزَلَ ٱلۡكِتَٰبَ ٱلَّذِي جَآءَ بِهِۦ مُوسَىٰ نُورٗا وَهُدٗى لِّلنَّاسِۖ تَجۡعَلُونَهُۥ قَرَاطِيسَ تُبۡدُونَهَا وَتُخۡفُونَ كَثِيرٗاۖ وَعُلِّمۡتُم مَّا لَمۡ تَعۡلَمُوٓاْ أَنتُمۡ وَلَآ ءَابَآؤُكُمۡۖ قُلِ ٱللَّهُۖ ثُمَّ ذَرۡهُمۡ فِي خَوۡضِهِمۡ يَلۡعَبُونَ
“ಅಲ್ಲಾಹು ಮನುಷ್ಯನಿಗೆ (ಪ್ರವಾದಿಗೆ) ಏನೂ ಅವತೀರ್ಣಗೊಳಿಸಿಲ್ಲ” ಎಂದು ಅವರು ಹೇಳಿದಾಗ, ಅವರು ಅಲ್ಲಾಹನಿಗೆ ಮಹತ್ವ ನೀಡಬೇಕಾದ ರೀತಿಯಲ್ಲಿ ಮಹತ್ವ ನೀಡಲಿಲ್ಲ. ಕೇಳಿರಿ: “ಜನರಿಗೆ ಬೆಳಕು ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ನೀವು ಅದನ್ನು ಕಾಗದದ ತುಂಡುಗಳಾಗಿ ಮಾಡಿ, ಅದರ ಕೆಲವು ಭಾಗವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನದ್ದನ್ನು ಮುಚ್ಚಿಡುತ್ತೀರಿ. ನಿಮಗೆ ಮತ್ತು ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು (ಆ ಗ್ರಂಥದ ಮೂಲಕ) ಕಲಿಸಿಕೊಡಲಾಗಿತ್ತು.” ಹೇಳಿರಿ: “(ಅದನ್ನು ಅವತೀರ್ಣಗೊಳಿಸಿದ್ದು) ಅಲ್ಲಾಹು.” ನಂತರ ಅವರನ್ನು ಅವರ ವ್ಯರ್ಥ ಮಾತುಗಳಲ್ಲಿ ಆಟವಾಡಲು ಬಿಟ್ಟುಬಿಡಿ.
೯೨
وَهَٰذَا كِتَٰبٌ أَنزَلۡنَٰهُ مُبَارَكٞ مُّصَدِّقُ ٱلَّذِي بَيۡنَ يَدَيۡهِ وَلِتُنذِرَ أُمَّ ٱلۡقُرَىٰ وَمَنۡ حَوۡلَهَاۚ وَٱلَّذِينَ يُؤۡمِنُونَ بِٱلۡأٓخِرَةِ يُؤۡمِنُونَ بِهِۦۖ وَهُمۡ عَلَىٰ صَلَاتِهِمۡ يُحَافِظُونَ
ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಇದು ಇದಕ್ಕಿಂತ ಮೊದಲಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನ ಜನರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ). ಪರಲೋಕದಲ್ಲಿ ವಿಶ್ವಾಸವಿಡುವವರು ಈ ಗ್ರಂಥದಲ್ಲಿ ವಿಶ್ವಾಸವಿಡುತ್ತಾರೆ. ಅವರು ತಮ್ಮ ನಮಾಝ್ಗಳನ್ನು ಸಂರಕ್ಷಿಸುತ್ತಾರೆ.
೯೩
وَمَنۡ أَظۡلَمُ مِمَّنِ ٱفۡتَرَىٰ عَلَى ٱللَّهِ كَذِبًا أَوۡ قَالَ أُوحِيَ إِلَيَّ وَلَمۡ يُوحَ إِلَيۡهِ شَيۡءٞ وَمَن قَالَ سَأُنزِلُ مِثۡلَ مَآ أَنزَلَ ٱللَّهُۗ وَلَوۡ تَرَىٰٓ إِذِ ٱلظَّٰلِمُونَ فِي غَمَرَٰتِ ٱلۡمَوۡتِ وَٱلۡمَلَٰٓئِكَةُ بَاسِطُوٓاْ أَيۡدِيهِمۡ أَخۡرِجُوٓاْ أَنفُسَكُمُۖ ٱلۡيَوۡمَ تُجۡزَوۡنَ عَذَابَ ٱلۡهُونِ بِمَا كُنتُمۡ تَقُولُونَ عَلَى ٱللَّهِ غَيۡرَ ٱلۡحَقِّ وَكُنتُمۡ عَنۡ ءَايَٰتِهِۦ تَسۡتَكۡبِرُونَ
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ತನಗೆ ದೇವವಾಣಿ ಅವತೀರ್ಣವಾಗದಿದ್ದರೂ ಅವತೀರ್ಣವಾಗಿದೆಯೆಂದು ಹೇಳುವವನಿಗಿಂತ, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ನಾನು ಕೂಡ ಅವತೀರ್ಣಗೊಳಿಸುತ್ತೇನೆ ಎಂದು ಹೇಳುವವನಿಗಿಂತ ದೊಡ್ಡ ಅಕ್ರಮಿ ಯಾರು? ಅಕ್ರಮಿಗಳು ಮರಣ ಯಾತನೆ ಅನುಭವಿಸುವ ಭಯಾನಕ ದೃಶ್ಯವನ್ನು ನೀವೇನಾದರೂ ನೋಡಿರುತ್ತಿದ್ದರೆ! ದೇವದೂತರುಗಳು ಅವರ ಬಳಿಗೆ ತಮ್ಮ ಕೈಗಳನ್ನು ಚಾಚುತ್ತಾ ಹೇಳುತ್ತಾರೆ: “ನಿಮ್ಮ ಆತ್ಮಗಳನ್ನು ಹೊರಹಾಕಿರಿ; ನೀವು ಅಲ್ಲಾಹನ ಮೇಲೆ ಸತ್ಯಕ್ಕೆ ದೂರವಾದುದನ್ನು ಹೇಳಿದ ಕಾರಣ ಮತ್ತು ಅಹಂಕಾರದಿಂದ ಅವನ ವಚನಗಳನ್ನು ನಿಷೇಧಿಸಿದ ಕಾರಣ ಇಂದು ನಿಮಗೆ ಹೀನಾಯ ಶಿಕ್ಷೆ ನೀಡಲಾಗುವುದು.”
೯೪
وَلَقَدۡ جِئۡتُمُونَا فُرَٰدَىٰ كَمَا خَلَقۡنَٰكُمۡ أَوَّلَ مَرَّةٖ وَتَرَكۡتُم مَّا خَوَّلۡنَٰكُمۡ وَرَآءَ ظُهُورِكُمۡۖ وَمَا نَرَىٰ مَعَكُمۡ شُفَعَآءَكُمُ ٱلَّذِينَ زَعَمۡتُمۡ أَنَّهُمۡ فِيكُمۡ شُرَكَٰٓؤُاْۚ لَقَد تَّقَطَّعَ بَيۡنَكُمۡ وَضَلَّ عَنكُم مَّا كُنتُمۡ تَزۡعُمُونَ
(ಅವರೊಡನೆ ಹೇಳಲಾಗುವುದು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆ, ನೀವು ಒಬ್ಬೊಬ್ಬರಾಗಿ ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ನೀಡಿದ ಸವಲತ್ತುಗಳನ್ನು ನಿಮ್ಮ ಬೆನ್ನ ಹಿಂದೆ ಬಿಟ್ಟು ಬಂದಿದ್ದೀರಿ. ನೀವು (ಅಲ್ಲಾಹನ) ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸುಗಾರರನ್ನು ನಾವು ನಿಮ್ಮ ಜೊತೆಗೆ ಕಾಣುತ್ತಿಲ್ಲ. ನಿಮ್ಮ ಆ ಸಂಬಂಧಗಳು ಮುರಿದು ಬಿದ್ದಿವೆ. ನೀವು (ದೇವರುಗಳೆಂದು) ವಾದಿಸುತ್ತಿದ್ದವರೆಲ್ಲರೂ ನಿಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ.”[1]
[1] ಅಲ್ಲಾಹನ ಬಳಿ ಶಿಫಾರಸು ಮಾಡುತ್ತಾರೆ ಮತ್ತು ಅಲ್ಲಾಹನಿಗೆ ಸಮೀಪಗೊಳಿಸುತ್ತಾರೆಂಬ ನಂಬಿಕೆಯಿಂದ ಸತ್ಯನಿಷೇಧಿಗಳು ಅನೇಕ ದೇವರುಗಳನ್ನು ಆರಾಧಿಸುತ್ತಿದ್ದರು. ಆದರೆ ಅವರು ಪರಲೋಕಕ್ಕೆ ಬರುವಾಗ ಈ ದೇವರುಗಳೆಲ್ಲರೂ ಕಣ್ಮರೆಯಾಗಿರುತ್ತಾರೆ.
೯೫
۞ إِنَّ ٱللَّهَ فَالِقُ ٱلۡحَبِّ وَٱلنَّوَىٰۖ يُخۡرِجُ ٱلۡحَيَّ مِنَ ٱلۡمَيِّتِ وَمُخۡرِجُ ٱلۡمَيِّتِ مِنَ ٱلۡحَيِّۚ ذَٰلِكُمُ ٱللَّهُۖ فَأَنَّىٰ تُؤۡفَكُونَ
ನಿಶ್ಚಯವಾಗಿಯೂ ಅಲ್ಲಾಹು ಧಾನ್ಯವನ್ನು ಮತ್ತು ಖರ್ಜೂರದ ಬೀಜವನ್ನು ಸೀಳುತ್ತಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಅವನೇ ಅಲ್ಲಾಹು. ಹೀಗಿದ್ದೂ ನೀವು ದಾರಿತಪ್ಪುತ್ತಿರುವುದು ಹೇಗೆ?
೯೬
فَالِقُ ٱلۡإِصۡبَاحِ وَجَعَلَ ٱلَّيۡلَ سَكَنٗا وَٱلشَّمۡسَ وَٱلۡقَمَرَ حُسۡبَانٗاۚ ذَٰلِكَ تَقۡدِيرُ ٱلۡعَزِيزِ ٱلۡعَلِيمِ
ಅವನು ಪ್ರಭಾತವನ್ನು ಸೀಳುತ್ತಾನೆ. ಅವನು ರಾತ್ರಿಯನ್ನು ವಿಶ್ರಾಂತಿಯನ್ನಾಗಿ ಮಾಡಿದ್ದಾನೆ ಮತ್ತು ಸೂರ್ಯ-ಚಂದ್ರರನ್ನು ಕಾಲಗಣನೆಗೆ ಆಧಾರವಾಗಿ ಮಾಡಿದ್ದಾನೆ ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.
೯೭
وَهُوَ ٱلَّذِي جَعَلَ لَكُمُ ٱلنُّجُومَ لِتَهۡتَدُواْ بِهَا فِي ظُلُمَٰتِ ٱلۡبَرِّ وَٱلۡبَحۡرِۗ قَدۡ فَصَّلۡنَا ٱلۡأٓيَٰتِ لِقَوۡمٖ يَعۡلَمُونَ
ನೆಲ ಮತ್ತು ಕಡಲಿನ ಗಾಢಾಂಧಕಾರದಲ್ಲಿ ನೀವು ದಾರಿಯನ್ನು ಕಾಣಲು ಅವನು ನಕ್ಷತ್ರಗಳನ್ನು ಉಂಟು ಮಾಡಿದನು. ತಿಳಿಯುವ ಜನರಿಗಾಗಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
೯೮
وَهُوَ ٱلَّذِيٓ أَنشَأَكُم مِّن نَّفۡسٖ وَٰحِدَةٖ فَمُسۡتَقَرّٞ وَمُسۡتَوۡدَعٞۗ قَدۡ فَصَّلۡنَا ٱلۡأٓيَٰتِ لِقَوۡمٖ يَفۡقَهُونَ
ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ವಾಸ್ತವ್ಯ ಮತ್ತು ಸಂಗ್ರಹ ಸ್ಥಳವನ್ನು[1] ಮಾಡಿದನು ಅರ್ಥಮಾಡಿಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
[1] ವಾಸ್ತವ್ಯ ಎಂದರೆ ಗರ್ಭಾಶಯ ಮತ್ತು ಸಂಗ್ರಹ ಸ್ಥಳವೆಂದರೆ ಪುರುಷರ ಬೆನ್ನೆಲುಬು.
೯೯
وَهُوَ ٱلَّذِيٓ أَنزَلَ مِنَ ٱلسَّمَآءِ مَآءٗ فَأَخۡرَجۡنَا بِهِۦ نَبَاتَ كُلِّ شَيۡءٖ فَأَخۡرَجۡنَا مِنۡهُ خَضِرٗا نُّخۡرِجُ مِنۡهُ حَبّٗا مُّتَرَاكِبٗا وَمِنَ ٱلنَّخۡلِ مِن طَلۡعِهَا قِنۡوَانٞ دَانِيَةٞ وَجَنَّٰتٖ مِّنۡ أَعۡنَابٖ وَٱلزَّيۡتُونَ وَٱلرُّمَّانَ مُشۡتَبِهٗا وَغَيۡرَ مُتَشَٰبِهٍۗ ٱنظُرُوٓاْ إِلَىٰ ثَمَرِهِۦٓ إِذَآ أَثۡمَرَ وَيَنۡعِهِۦٓۚ إِنَّ فِي ذَٰلِكُمۡ لَأٓيَٰتٖ لِّقَوۡمٖ يُؤۡمِنُونَ
ಆಕಾಶದಿಂದ ಮಳೆ ಸುರಿಸುವವನು ಅವನೇ. ನಂತರ ನಾವು ಅದರಿಂದ ಎಲ್ಲಾ ರೀತಿಯ ಬೆಳೆಗಳನ್ನು ಉತ್ಪಾದಿಸಿದೆವು. ನಾವು ಅದರಿಂದ ಹಸಿರು ಸಸ್ಯಗಳನ್ನು ಉತ್ಪಾದಿಸಿದೆವು. ಆ ಸಸ್ಯಗಳಿಂದ ನಾವು ತುಂಬಿ ತುಳುಕುವ ಧಾನ್ಯಗಳನ್ನು ಉತ್ಪಾದಿಸುತ್ತೇವೆ. ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗು ಹಾಕಲಾದ ಗೊಂಚಲುಗಳು ಹೊರಹೊಮ್ಮುತ್ತವೆ. ನಾವು ದ್ರಾಕ್ಷಿ ತೋಟಗಳನ್ನು ಮತ್ತು ಪರಸ್ಪರ ಹೋಲಿಕೆಯಿದ್ದರೂ ವಿಭಿನ್ನವಾಗಿರುವ ಆಲಿವ್ ಮತ್ತು ದಾಳಿಂಬೆಯನ್ನು ಉತ್ಪಾದಿಸಿದೆವು. ಅವು ಕಾಯಿಬಿಡುವಾಗ ಮತ್ತು ಹಣ್ಣಾಗುವಾಗ ಅವುಗಳನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಾಂತಗಳಿವೆ.
೧೦೦
وَجَعَلُواْ لِلَّهِ شُرَكَآءَ ٱلۡجِنَّ وَخَلَقَهُمۡۖ وَخَرَقُواْ لَهُۥ بَنِينَ وَبَنَٰتِۭ بِغَيۡرِ عِلۡمٖۚ سُبۡحَٰنَهُۥ وَتَعَٰلَىٰ عَمَّا يَصِفُونَ
ಅವರು ಜಿನ್ನ್ಗಳನ್ನು ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಆದರೆ ವಾಸ್ತವವಾಗಿ ಅವರನ್ನು ಸೃಷ್ಟಿಸಿದ್ದು ಅವನೇ. ಅವರು ಯಾವುದೇ ಜ್ಞಾನವಿಲ್ಲದೆ ಅಲ್ಲಾಹನಿಗೆ ಗಂಡು ಮತ್ತು ಹೆಣ್ಣುಮಕ್ಕಳಿದ್ದಾರೆಂದು ಆರೋಪಿಸಿದರು. ಅವರ ಈ ವರ್ಣನೆಗಳಿಗಿಂತ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ.
೧೦೧
بَدِيعُ ٱلسَّمَٰوَٰتِ وَٱلۡأَرۡضِۖ أَنَّىٰ يَكُونُ لَهُۥ وَلَدٞ وَلَمۡ تَكُن لَّهُۥ صَٰحِبَةٞۖ وَخَلَقَ كُلَّ شَيۡءٖۖ وَهُوَ بِكُلِّ شَيۡءٍ عَلِيمٞ
ಅವನು ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನಿಗೆ ಹೆಂಡತಿಯೇ ಇಲ್ಲದಿರುವಾಗ ಮಕ್ಕಳಿರುವುದು ಹೇಗೆ? ಅವನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿದನು. ಅವನು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
೧೦೨
ذَٰلِكُمُ ٱللَّهُ رَبُّكُمۡۖ لَآ إِلَٰهَ إِلَّا هُوَۖ خَٰلِقُ كُلِّ شَيۡءٖ فَٱعۡبُدُوهُۚ وَهُوَ عَلَىٰ كُلِّ شَيۡءٖ وَكِيلٞ
ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿದ್ದಾನೆ.
೧೦೩
لَّا تُدۡرِكُهُ ٱلۡأَبۡصَٰرُ وَهُوَ يُدۡرِكُ ٱلۡأَبۡصَٰرَۖ وَهُوَ ٱللَّطِيفُ ٱلۡخَبِيرُ
ದೃಷ್ಟಿಗಳು ಅವನನ್ನು ತಲುಪುವುದಿಲ್ಲ. ಆದರೆ ಅವನು ದೃಷ್ಟಿಗಳನ್ನು ತಲುಪುತ್ತಾನೆ.[1] ಅವನು ಸೂಕ್ಷ್ಮಗ್ರಾಹಿ ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
[1] ಭೂಲೋಕದಲ್ಲಿ ಯಾರಿಗೂ ಅಲ್ಲಾಹನನ್ನು ನೋಡಲು ಸಾಧ್ಯವಿಲ್ಲ. ಆದರೆ ಪರಲೋಕದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೋಡುತ್ತಾರೆ.
೧೦೪
قَدۡ جَآءَكُم بَصَآئِرُ مِن رَّبِّكُمۡۖ فَمَنۡ أَبۡصَرَ فَلِنَفۡسِهِۦۖ وَمَنۡ عَمِيَ فَعَلَيۡهَاۚ وَمَآ أَنَا۠ عَلَيۡكُم بِحَفِيظٖ
ನಿಮಗೆ ನಿಮ್ಮ ಪರಿಪಾಲಕನಿಂದ ಕಣ್ತೆರೆಸುವಂತಹ ಪುರಾವೆಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಒಳಿತು ಅವನಿಗೇ ಆಗಿದೆ. ಯಾರು ಕುರುಡನಾಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. (ಹೇಳಿರಿ): “ನಾನು ನಿಮ್ಮ ಕಾವಲುಗಾರನಲ್ಲ.”
೧೦೫
وَكَذَٰلِكَ نُصَرِّفُ ٱلۡأٓيَٰتِ وَلِيَقُولُواْ دَرَسۡتَ وَلِنُبَيِّنَهُۥ لِقَوۡمٖ يَعۡلَمُونَ
ಈ ರೀತಿ ನಾವು ನಾನಾ ವಿಧಗಳಲ್ಲಿ ವಚನಗಳನ್ನು ವಿವರಿಸಿಕೊಡುತ್ತೇವೆ. “ನೀವು (ಯಹೂದಿ-ಕ್ರೈಸ್ತರಿಂದ) ಕಲಿತು ಬಂದಿದ್ದೀರಿ” ಎಂದು ಸತ್ಯನಿಷೇಧಿಗಳು ಹೇಳುವುದಕ್ಕಾಗಿ ಮತ್ತು ತಿಳುವಳಿಕೆಯಿರುವ ಜನರಿಗೆ ಇದನ್ನು ವಿವರಿಸಿಕೊಡುವುದಕ್ಕಾಗಿ.[1]
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಹೂದಿ-ಕ್ರೈಸ್ತರಿಂದ ಕಲಿತು ಬಂದು ಪ್ರವಚನ ಮಾಡುತ್ತಾರೆಂದು ಸತ್ಯನಿಷೇಧಿಗಳು ಆರೋಪಿಸುತ್ತಿದ್ದರು.
೧೦೬
ٱتَّبِعۡ مَآ أُوحِيَ إِلَيۡكَ مِن رَّبِّكَۖ لَآ إِلَٰهَ إِلَّا هُوَۖ وَأَعۡرِضۡ عَنِ ٱلۡمُشۡرِكِينَ
ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವನ್ನು ಹಿಂಬಾಲಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಬಹುದೇವಾರಾಧಕರಿಂದ ವಿಮುಖರಾಗಿರಿ.
೧೦೭
وَلَوۡ شَآءَ ٱللَّهُ مَآ أَشۡرَكُواْۗ وَمَا جَعَلۡنَٰكَ عَلَيۡهِمۡ حَفِيظٗاۖ وَمَآ أَنتَ عَلَيۡهِم بِوَكِيلٖ
ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರಿಗೆ ಕಾವಲುಗಾರನಾಗಿ ಮಾಡಿಲ್ಲ. ನೀವು ಅವರ ಮೇಲ್ನೋಟ ವಹಿಸಬೇಕಾದವರೂ ಅಲ್ಲ.
೧೦೮
وَلَا تَسُبُّواْ ٱلَّذِينَ يَدۡعُونَ مِن دُونِ ٱللَّهِ فَيَسُبُّواْ ٱللَّهَ عَدۡوَۢا بِغَيۡرِ عِلۡمٖۗ كَذَٰلِكَ زَيَّنَّا لِكُلِّ أُمَّةٍ عَمَلَهُمۡ ثُمَّ إِلَىٰ رَبِّهِم مَّرۡجِعُهُمۡ فَيُنَبِّئُهُم بِمَا كَانُواْ يَعۡمَلُونَ
ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಆ ದೇವರುಗಳನ್ನು ದೂಷಿಸಬೇಡಿ. ಇದರಿಂದ ಅವರು ತಿಳುವಳಿಕೆಯಿಲ್ಲದೆ ದ್ವೇಷದಿಂದ ಅಲ್ಲಾಹನನ್ನು ದೂಷಿಸಬಹುದು. ಈ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ್ದೇವೆ. ನಂತರ ಅವರನ್ನು ಅವರ ಪರಿಪಾಲಕನ ಬಳಿಗೆ ಮರಳಿಸಲಾಗುವುದು. ಆಗ ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು.
೧೦೯
وَأَقۡسَمُواْ بِٱللَّهِ جَهۡدَ أَيۡمَٰنِهِمۡ لَئِن جَآءَتۡهُمۡ ءَايَةٞ لَّيُؤۡمِنُنَّ بِهَاۚ قُلۡ إِنَّمَا ٱلۡأٓيَٰتُ عِندَ ٱللَّهِۖ وَمَا يُشۡعِرُكُمۡ أَنَّهَآ إِذَا جَآءَتۡ لَا يُؤۡمِنُونَ
ಅವರಿಗೆ ಒಂದು ದೃಷ್ಟಾಂತವು ಬಂದರೆ ಅವರು ಅದರಲ್ಲಿ ಖಂಡಿತ ವಿಶ್ವಾಸವಿಡುತ್ತಾರೆಂದು ಅವರು ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳಿದರು. ಹೇಳಿರಿ: “ದೃಷ್ಟಾಂತಗಳು ಅಲ್ಲಾಹನ ಬಳಿ ಮಾತ್ರವಿದೆ.” ನಿಮಗೇನು ಗೊತ್ತು? ಅದು ಬಂದರೂ ಕೂಡ ಅವರು ವಿಶ್ವಾಸವಿಡಲಾರರು.
೧೧೦
وَنُقَلِّبُ أَفۡـِٔدَتَهُمۡ وَأَبۡصَٰرَهُمۡ كَمَا لَمۡ يُؤۡمِنُواْ بِهِۦٓ أَوَّلَ مَرَّةٖ وَنَذَرُهُمۡ فِي طُغۡيَٰنِهِمۡ يَعۡمَهُونَ
ಅವರು ಇದರಲ್ಲಿ (ಈ ಕುರ್ಆನ್ನಲ್ಲಿ) ಪ್ರಥಮ ಬಾರಿ ವಿಶ್ವಾಸವಿಡದಂತೆಯೇ (ಈಗಲೂ) ನಾವು ಅವರ ಹೃದಯಗಳನ್ನು ಮತ್ತು ಕಣ್ಣುಗಳನ್ನು ತಿರುಗಿಸಿಬಿಡುವೆವು. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ನಾವು ಅವರನ್ನು ಬಿಟ್ಟುಬಿಡುವೆವು.
೧೧೧
۞ وَلَوۡ أَنَّنَا نَزَّلۡنَآ إِلَيۡهِمُ ٱلۡمَلَٰٓئِكَةَ وَكَلَّمَهُمُ ٱلۡمَوۡتَىٰ وَحَشَرۡنَا عَلَيۡهِمۡ كُلَّ شَيۡءٖ قُبُلٗا مَّا كَانُواْ لِيُؤۡمِنُوٓاْ إِلَّآ أَن يَشَآءَ ٱللَّهُ وَلَٰكِنَّ أَكۡثَرَهُمۡ يَجۡهَلُونَ
ನಾವು ಅವರ ಬಳಿಗೆ ದೇವದೂತರುಗಳನ್ನು ಇಳಿಸಿದರೂ, ಸತ್ತವರು (ಎದ್ದು ಬಂದು) ಅವರೊಡನೆ ಮಾತನಾಡಿದರೂ, ನಾವು ಎಲ್ಲಾ ವಸ್ತುಗಳನ್ನು ಅವರ ಮುಂದೆ ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ಹೊರತು. ಆದರೆ ಅವರಲ್ಲಿ ಹೆಚ್ಚಿನವರು ಅವಿವೇಕಿಗಳಾಗಿದ್ದಾರೆ.
೧೧೨
وَكَذَٰلِكَ جَعَلۡنَا لِكُلِّ نَبِيٍّ عَدُوّٗا شَيَٰطِينَ ٱلۡإِنسِ وَٱلۡجِنِّ يُوحِي بَعۡضُهُمۡ إِلَىٰ بَعۡضٖ زُخۡرُفَ ٱلۡقَوۡلِ غُرُورٗاۚ وَلَوۡ شَآءَ رَبُّكَ مَا فَعَلُوهُۖ فَذَرۡهُمۡ وَمَا يَفۡتَرُونَ
ಈ ರೀತಿ ನಾವು ಪ್ರತಿಯೊಬ್ಬ ಸಂದೇಶವಾಹಕರಿಗೂ ಮನುಷ್ಯರಲ್ಲಿ ಮತ್ತು ಜಿನ್ನ್ಗಳಲ್ಲಿ ಸೇರಿದ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರು ವಂಚನಾತ್ಮಕವಾದ ಆಕರ್ಷಕ ಮಾತುಗಳನ್ನು ಪರಸ್ಪರ ದುರ್ಬೋಧನೆ ಮಾಡುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನು ಅವರು ಆರೋಪಿಸುತ್ತಿರುವ ವಿಷಯಗಳೊಂದಿಗೆ ಬಿಟ್ಟುಬಿಡಿ.
೧೧೩
وَلِتَصۡغَىٰٓ إِلَيۡهِ أَفۡـِٔدَةُ ٱلَّذِينَ لَا يُؤۡمِنُونَ بِٱلۡأٓخِرَةِ وَلِيَرۡضَوۡهُ وَلِيَقۡتَرِفُواْ مَا هُم مُّقۡتَرِفُونَ
ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳು ಅದರ (ಅವರ ಮಾತುಗಳ) ಕಡೆಗೆ ಆಕರ್ಷಿತವಾಗುವುದಕ್ಕಾಗಿ, ಅವರು ಅದರಲ್ಲಿ ಸಂತೃಪ್ತರಾಗುವುದಕ್ಕಾಗಿ ಮತ್ತು ಅವರು ಮಾಡುವ ಪಾಪಗಳೆಲ್ಲವನ್ನೂ ಮಾಡುವುದಕ್ಕಾಗಿ (ಅವರು ಹಾಗೆ ಮಾಡುತ್ತಿದ್ದಾರೆ).
೧೧೪
أَفَغَيۡرَ ٱللَّهِ أَبۡتَغِي حَكَمٗا وَهُوَ ٱلَّذِيٓ أَنزَلَ إِلَيۡكُمُ ٱلۡكِتَٰبَ مُفَصَّلٗاۚ وَٱلَّذِينَ ءَاتَيۡنَٰهُمُ ٱلۡكِتَٰبَ يَعۡلَمُونَ أَنَّهُۥ مُنَزَّلٞ مِّن رَّبِّكَ بِٱلۡحَقِّۖ فَلَا تَكُونَنَّ مِنَ ٱلۡمُمۡتَرِينَ
ಈ ವಿವರಣಾತ್ಮಕ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದು ಅಲ್ಲಾಹನಾಗಿರುವಾಗ ನಾನು ಅವನ ಹೊರತಾದವರನ್ನು ತೀರ್ಪುಗಾರರನ್ನಾಗಿ ಹುಡುಕಬೇಕೇ? ನಾವು ಯಾರಿಗೆ ಗ್ರಂಥ ನೀಡಿದ್ದೇವೆಯೋ ಅವರೆಲ್ಲರೂ ಇದು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯ ಸಹಿತ ಅವತೀರ್ಣವಾದ ಗ್ರಂಥವೆಂದು ತಿಳಿದಿದ್ದಾರೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಬೇಡಿ.
೧೧೫
وَتَمَّتۡ كَلِمَتُ رَبِّكَ صِدۡقٗا وَعَدۡلٗاۚ لَّا مُبَدِّلَ لِكَلِمَٰتِهِۦۚ وَهُوَ ٱلسَّمِيعُ ٱلۡعَلِيمُ
ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯದಲ್ಲಿ ಮತ್ತು ನ್ಯಾಯದಲ್ಲಿ ಪರಿಪೂರ್ಣವಾಗಿದೆ. ಅವನ ವಚನಗಳನ್ನು ಬದಲಾಯಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
೧೧೬
وَإِن تُطِعۡ أَكۡثَرَ مَن فِي ٱلۡأَرۡضِ يُضِلُّوكَ عَن سَبِيلِ ٱللَّهِۚ إِن يَتَّبِعُونَ إِلَّا ٱلظَّنَّ وَإِنۡ هُمۡ إِلَّا يَخۡرُصُونَ
ನೀವು ಭೂಮಿಯಲ್ಲಿರುವ ಬಹುಸಂಖ್ಯಾತರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾರೆ. ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಅನುಸರಿಸುತ್ತಾರೆ. ಅವರು ಕೇವಲ ಸುಳ್ಳನ್ನು ಮಾತ್ರ ಹೇಳುತ್ತಾರೆ.
೧೧೭
إِنَّ رَبَّكَ هُوَ أَعۡلَمُ مَن يَضِلُّ عَن سَبِيلِهِۦۖ وَهُوَ أَعۡلَمُ بِٱلۡمُهۡتَدِينَ
ತನ್ನ ಮಾರ್ಗದಿಂದ ತಪ್ಪಿಹೋದವನು ಯಾರೆಂದು ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂಬ ಬಗ್ಗೆಯೂ ಅವನಿಗೆ ತಿಳಿದಿದೆ.
೧೧೮
فَكُلُواْ مِمَّا ذُكِرَ ٱسۡمُ ٱللَّهِ عَلَيۡهِ إِن كُنتُم بِـَٔايَٰتِهِۦ مُؤۡمِنِينَ
ಆದ್ದರಿಂದ ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ)ಲಾದ ಪ್ರಾಣಿಗಳನ್ನು ತಿನ್ನಿರಿ. ನೀವು ಅವನ ವಚನಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ!
೧೧೯
وَمَا لَكُمۡ أَلَّا تَأۡكُلُواْ مِمَّا ذُكِرَ ٱسۡمُ ٱللَّهِ عَلَيۡهِ وَقَدۡ فَصَّلَ لَكُم مَّا حَرَّمَ عَلَيۡكُمۡ إِلَّا مَا ٱضۡطُرِرۡتُمۡ إِلَيۡهِۗ وَإِنَّ كَثِيرٗا لَّيُضِلُّونَ بِأَهۡوَآئِهِم بِغَيۡرِ عِلۡمٍۚ إِنَّ رَبَّكَ هُوَ أَعۡلَمُ بِٱلۡمُعۡتَدِينَ
ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ) ಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನಿಮಗೆ ನಿಷೇಧಿಸಲಾದ ವಸ್ತುಗಳನ್ನು ಅವನು ಈಗಾಗಲೇ ನಿಮಗೆ ವಿವರಿಸಿಕೊಟ್ಟಿದ್ದಾನೆ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಅದು ಕೂಡ ನಿಮಗೆ ಅನುಮತಿಸಲಾಗಿದೆ. ಹೆಚ್ಚಿನ ಜನರು ಯಾವುದೇ ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ನಿಶ್ಚಯವಾಗಿಯೂ ಅತಿರೇಕಿಗಳ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.
೧೨೦
وَذَرُواْ ظَٰهِرَ ٱلۡإِثۡمِ وَبَاطِنَهُۥٓۚ إِنَّ ٱلَّذِينَ يَكۡسِبُونَ ٱلۡإِثۡمَ سَيُجۡزَوۡنَ بِمَا كَانُواْ يَقۡتَرِفُونَ
ಬಹಿರಂಗವಾಗಿ ಮಾಡುವ ಪಾಪಗಳನ್ನು ಮತ್ತು ರಹಸ್ಯವಾಗಿ ಮಾಡುವ ಪಾಪಗಳನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ಪಾಪ ಮಾಡುವವರು ಯಾರೋ—ಅವರು ಮಾಡಿದ ಪಾಪಕ್ಕೆ ತಕ್ಕ ಪ್ರತಿಫಲವನ್ನು ನೀಡಲಾಗುವುದು.
೧೨೧
وَلَا تَأۡكُلُواْ مِمَّا لَمۡ يُذۡكَرِ ٱسۡمُ ٱللَّهِ عَلَيۡهِ وَإِنَّهُۥ لَفِسۡقٞۗ وَإِنَّ ٱلشَّيَٰطِينَ لَيُوحُونَ إِلَىٰٓ أَوۡلِيَآئِهِمۡ لِيُجَٰدِلُوكُمۡۖ وَإِنۡ أَطَعۡتُمُوهُمۡ إِنَّكُمۡ لَمُشۡرِكُونَ
ಅಲ್ಲಾಹನ ಹೆಸರನ್ನು ಉಚ್ಛರಿಸದಿರುವ ಪ್ರಾಣಿಗಳನ್ನು ತಿನ್ನಬೇಡಿ. ನಿಶ್ಚಯವಾಗಿಯೂ ಅದು ಅವಿಧೇಯತೆಯಾಗಿದೆ. ನಿಮ್ಮೊಂದಿಗೆ ತರ್ಕಿಸಲು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ಮಾಡುತ್ತಾರೆ. ನೀವೇನಾದರೂ ಅವರನ್ನು ಅನುಸರಿಸಿದರೆ ನಿಶ್ಚಯವಾಗಿಯೂ ನೀವು ಸಹಭಾಗಿತ್ವ (ಶಿರ್ಕ್) ಮಾಡಿದವರಾಗುವಿರಿ.
೧೨೨
أَوَمَن كَانَ مَيۡتٗا فَأَحۡيَيۡنَٰهُ وَجَعَلۡنَا لَهُۥ نُورٗا يَمۡشِي بِهِۦ فِي ٱلنَّاسِ كَمَن مَّثَلُهُۥ فِي ٱلظُّلُمَٰتِ لَيۡسَ بِخَارِجٖ مِّنۡهَاۚ كَذَٰلِكَ زُيِّنَ لِلۡكَٰفِرِينَ مَا كَانُواْ يَعۡمَلُونَ
ನಿರ್ಜೀವ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಗೆ ನಾವು ಜೀವವನ್ನು ನೀಡಿ, ಅವನಿಗೆ ಒಂದು ಬೆಳಕನ್ನು ಸಹ ದಯಪಾಲಿಸಿದೆವು. ಅವನು ಆ ಬೆಳಕಿನೊಂದಿಗೆ ಜನರ ಮಧ್ಯೆ ಓಡಾಡುತ್ತಾನೆ. ಇಂತಹವನು ಹೊರಬರಲಾಗದ ಸ್ಥಿತಿಯಲ್ಲಿ ಗಾಢಾಂಧಕಾರಗಳಲ್ಲಿ ಬಿದ್ದಿರುವ ವ್ಯಕ್ತಿಯಂತಾಗುವನೇ? ಈ ರೀತಿ ಸತ್ಯನಿಷೇಧಿಗಳಿಗೆ ಅವರು ಮಾಡುತ್ತಿರುವ ದುಷ್ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ.
೧೨೩
وَكَذَٰلِكَ جَعَلۡنَا فِي كُلِّ قَرۡيَةٍ أَكَٰبِرَ مُجۡرِمِيهَا لِيَمۡكُرُواْ فِيهَاۖ وَمَا يَمۡكُرُونَ إِلَّا بِأَنفُسِهِمۡ وَمَا يَشۡعُرُونَ
ಇದೇ ರೀತಿ ನಾವು ಪ್ರತಿಯೊಂದು ಊರಿನಲ್ಲೂ ಅಲ್ಲಿನ ಅಪರಾಧಿಗಳ ಮುಖಂಡರನ್ನು ಪಿತೂರಿಗಳಲ್ಲಿ ಮಗ್ನರಾಗುವಂತೆ ಮಾಡಿದ್ದೇವೆ. ವಾಸ್ತವದಲ್ಲಿ, ಅವರು ಅವರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರಿಯುವುದಿಲ್ಲ.[1]
[1] ಅಂದರೆ ಅವರು ಮಾಡುವ ಎಲ್ಲಾ ಪಿತೂರಿಗಳ ದುಷ್ಪರಿಣಾಮಗಳನ್ನು ಸ್ವತಃ ಅವರೇ ಅನುಭವಿಸುವರು.
೧೨೪
وَإِذَا جَآءَتۡهُمۡ ءَايَةٞ قَالُواْ لَن نُّؤۡمِنَ حَتَّىٰ نُؤۡتَىٰ مِثۡلَ مَآ أُوتِيَ رُسُلُ ٱللَّهِۘ ٱللَّهُ أَعۡلَمُ حَيۡثُ يَجۡعَلُ رِسَالَتَهُۥۗ سَيُصِيبُ ٱلَّذِينَ أَجۡرَمُواْ صَغَارٌ عِندَ ٱللَّهِ وَعَذَابٞ شَدِيدُۢ بِمَا كَانُواْ يَمۡكُرُونَ
ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗ, “ಅಲ್ಲಾಹನ ಸಂದೇಶವಾಹಕರುಗಳಿಗೆ ನೀಡಲಾದ ವಸ್ತುವನ್ನು ನಮಗೂ ನೀಡಲಾಗುವ ತನಕ ನಾವು ಖಂಡಿತ ವಿಶ್ವಾಸವಿಡುವುದಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಸ್ಥಾಪಿಸಬೇಕೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅಪರಾಧಿಗಳಿಗೆ, ಅವರ ಮಾಡುವ ಪಿತೂರಿಗಳಿಂದಾಗಿ ಅಲ್ಲಾಹನ ಬಳಿ ಅಪಮಾನ ಮತ್ತು ಕಠಿಣವಾದ ಶಿಕ್ಷೆಯನ್ನು ಸದ್ಯವೇ ಅನುಭವಿಸಬೇಕಾಗಿ ಬರುವುದು.
೧೨೫
فَمَن يُرِدِ ٱللَّهُ أَن يَهۡدِيَهُۥ يَشۡرَحۡ صَدۡرَهُۥ لِلۡإِسۡلَٰمِۖ وَمَن يُرِدۡ أَن يُضِلَّهُۥ يَجۡعَلۡ صَدۡرَهُۥ ضَيِّقًا حَرَجٗا كَأَنَّمَا يَصَّعَّدُ فِي ٱلسَّمَآءِۚ كَذَٰلِكَ يَجۡعَلُ ٱللَّهُ ٱلرِّجۡسَ عَلَى ٱلَّذِينَ لَا يُؤۡمِنُونَ
ಯಾರಿಗೆ ಸನ್ಮಾರ್ಗ ತೋರಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ತೆರೆದುಕೊಡುತ್ತಾನೆ. ಯಾರನ್ನು ದಾರಿತಪ್ಪಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಬಿಗಿಯಾಗಿ ಮತ್ತು ಇಕ್ಕಟ್ಟಾಗಿ ಮಾಡುತ್ತಾನೆ. ಅವನು ಆಕಾಶಕ್ಕೆ ಏರಿ ಹೋಗುತ್ತಿದ್ದಾನೋ ಎಂಬಂತೆ! ಈ ರೀತಿ ಅಲ್ಲಾಹು ವಿಶ್ವಾಸವಿಡದವರ ಮೇಲೆ ಶಿಕ್ಷೆಯನ್ನು ಹಾಕುತ್ತಾನೆ.
೧೨೬
وَهَٰذَا صِرَٰطُ رَبِّكَ مُسۡتَقِيمٗاۗ قَدۡ فَصَّلۡنَا ٱلۡأٓيَٰتِ لِقَوۡمٖ يَذَّكَّرُونَ
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ನೇರಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ಈಗಾಗಲೇ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
೧೨೭
۞ لَهُمۡ دَارُ ٱلسَّلَٰمِ عِندَ رَبِّهِمۡۖ وَهُوَ وَلِيُّهُم بِمَا كَانُواْ يَعۡمَلُونَ
ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶಾಂತಿಯ ಭವನವಿದೆ (ಸ್ವರ್ಗವಿದೆ). ಅವರು ಮಾಡುತ್ತಿರುವ ಕರ್ಮಗಳ ಕಾರಣದಿಂದ ಅವನು ಅವರ ಮಿತ್ರನಾಗಿದ್ದಾನೆ.
೧೨೮
وَيَوۡمَ يَحۡشُرُهُمۡ جَمِيعٗا يَٰمَعۡشَرَ ٱلۡجِنِّ قَدِ ٱسۡتَكۡثَرۡتُم مِّنَ ٱلۡإِنسِۖ وَقَالَ أَوۡلِيَآؤُهُم مِّنَ ٱلۡإِنسِ رَبَّنَا ٱسۡتَمۡتَعَ بَعۡضُنَا بِبَعۡضٖ وَبَلَغۡنَآ أَجَلَنَا ٱلَّذِيٓ أَجَّلۡتَ لَنَاۚ قَالَ ٱلنَّارُ مَثۡوَىٰكُمۡ خَٰلِدِينَ فِيهَآ إِلَّا مَا شَآءَ ٱللَّهُۚ إِنَّ رَبَّكَ حَكِيمٌ عَلِيمٞ
ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. (ಅವನು ಹೇಳುವನು): “ಓ ಜಿನ್ನ್ಗಳೇ! ನೀವು ಮನುಷ್ಯರಲ್ಲಿ ಬಹುಸಂಖ್ಯಾತರನ್ನು ದಾರಿ ತಪ್ಪಿಸಿದ್ದೀರಿ.” ಮನುಷ್ಯರಲ್ಲಿ ಸೇರಿದ ಅವರ ಆಪ್ತಮಿತ್ರರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನ ಪಡೆದರು. ಹೀಗೆ ನೀನು ನಮಗೆ ನಿಶ್ಚಯಿಸಿದ ಜೀವಿತಾವಧಿಯನ್ನು ನಾವು ತಲುಪಿದೆವು.” ಅಲ್ಲಾಹು ಹೇಳುವನು: “ನರಕಾಗ್ನಿಯೇ ನಿಮ್ಮ ವಾಸಸ್ಥಳ! ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.”
೧೨೯
وَكَذَٰلِكَ نُوَلِّي بَعۡضَ ٱلظَّٰلِمِينَ بَعۡضَۢا بِمَا كَانُواْ يَكۡسِبُونَ
ಈ ರೀತಿ ನಾವು ಅಕ್ರಮಿಗಳನ್ನು ಪರಸ್ಪರ ಆಪ್ತರನ್ನಾಗಿ ಮಾಡುವೆವು. ಅವರು ಮಾಡುತ್ತಿರುವ ದುಷ್ಕರ್ಮಗಳ ಕಾರಣದಿಂದ.
೧೩೦
يَٰمَعۡشَرَ ٱلۡجِنِّ وَٱلۡإِنسِ أَلَمۡ يَأۡتِكُمۡ رُسُلٞ مِّنكُمۡ يَقُصُّونَ عَلَيۡكُمۡ ءَايَٰتِي وَيُنذِرُونَكُمۡ لِقَآءَ يَوۡمِكُمۡ هَٰذَاۚ قَالُواْ شَهِدۡنَا عَلَىٰٓ أَنفُسِنَاۖ وَغَرَّتۡهُمُ ٱلۡحَيَوٰةُ ٱلدُّنۡيَا وَشَهِدُواْ عَلَىٰٓ أَنفُسِهِمۡ أَنَّهُمۡ كَانُواْ كَٰفِرِينَ
“ಓ ಜಿನ್ನ್ ಮತ್ತು ಮನುಷ್ಯರೇ! ನಿಮಗೆ ನನ್ನ ವಚನಗಳನ್ನು ವಿವರಿಸಿಕೊಡುವ ಮತ್ತು ನಿಮ್ಮ ಈ ದಿನದ ಭೇಟಿಯ ಬಗ್ಗೆ ನಿಮಗೆ ಎಚ್ಚರಿಕೆ ನೀಡುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದಿಲ್ಲವೇ?” ಅವರು ಉತ್ತರಿಸುವರು: “ನಾವು ನಮ್ಮ ವಿರುದ್ಧವೇ ಸಾಕ್ಷಿಗಳಾಗಿದ್ದೇವೆ.” ಇಹಲೋಕ ಜೀವನವು ಅವರನ್ನು ಮರುಳುಗೊಳಿಸಿದೆ. ಅವರು ಸತ್ಯನಿಷೇಧಿಗಳಾಗಿದ್ದರು ಎಂದು ಅವರೇ ಅವರ ವಿರುದ್ಧ ಸಾಕ್ಷಿ ಹೇಳಿದ್ದಾರೆ.
೧೩೧
ذَٰلِكَ أَن لَّمۡ يَكُن رَّبُّكَ مُهۡلِكَ ٱلۡقُرَىٰ بِظُلۡمٖ وَأَهۡلُهَا غَٰفِلُونَ
ಅದು (ಸಂದೇಶವಾಹಕರನ್ನು ಕಳುಹಿಸಿರುವುದು) ನಿಮ್ಮ ಪರಿಪಾಲಕನು (ಅಲ್ಲಾಹು) ಊರುಗಳನ್ನು—ಅವುಗಳ ನಿವಾಸಿಗಳು (ಸತ್ಯದ ಬಗ್ಗೆ) ಅಜ್ಞರಾಗಿರುವಾಗ ಮಾಡಿದ ಅಕ್ರಮದ ನಿಮಿತ್ತ ನಾಶ ಮಾಡುವುದಿಲ್ಲ ಎಂಬ ಕಾರಣದಿಂದಾಗಿದೆ.[1]
[1] ಜೀವನದಲ್ಲಿ ಒಮ್ಮೆಯೂ ಸತ್ಯವನ್ನು ತಿಳಿಯುವ ಅವಕಾಶ ಸಿಗದವರನ್ನು ಅಲ್ಲಾಹು ಶಿಕ್ಷಿಸುವುದಿಲ್ಲವೆಂದು ಇದರಿಂದ ಅರ್ಥಮಾಡಿಕೊಳ್ಳಬಹುದು.
೧೩೨
وَلِكُلّٖ دَرَجَٰتٞ مِّمَّا عَمِلُواْۚ وَمَا رَبُّكَ بِغَٰفِلٍ عَمَّا يَعۡمَلُونَ
ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಅನುಗುಣವಾಗಿ ಅನೇಕ ಪದವಿಗಳಿವೆ. ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನೇನಲ್ಲ.
೧೩೩
وَرَبُّكَ ٱلۡغَنِيُّ ذُو ٱلرَّحۡمَةِۚ إِن يَشَأۡ يُذۡهِبۡكُمۡ وَيَسۡتَخۡلِفۡ مِنۢ بَعۡدِكُم مَّا يَشَآءُ كَمَآ أَنشَأَكُم مِّن ذُرِّيَّةِ قَوۡمٍ ءَاخَرِينَ
ನಿಮ್ಮ ಪರಿಪಾಲಕನು (ಅಲ್ಲಾಹು) ನಿರಪೇಕ್ಷನು ಮತ್ತು ದಯಾಳುವಾಗಿದ್ದಾನೆ. ಅವನು ಇಚ್ಛಿಸಿದರೆ ನಿಮ್ಮನ್ನು ನಿವಾರಿಸಿ, ನಿಮ್ಮ ಸ್ಥಾನದಲ್ಲಿ ಅವನು ಇಚ್ಛಿಸುವ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ಮಾಡುವನು. ನಿಮ್ಮನ್ನು ಬೇರೆ ಜನರ ವಂಶಸ್ಥರನ್ನಾಗಿ ಮಾಡಿದಂತೆ.
೧೩೪
إِنَّ مَا تُوعَدُونَ لَأٓتٖۖ وَمَآ أَنتُم بِمُعۡجِزِينَ
ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ಸಂಗತಿಯು ಬಂದೇ ಬರುತ್ತದೆ. ನಿಮಗೆ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ.
೧೩೫
قُلۡ يَٰقَوۡمِ ٱعۡمَلُواْ عَلَىٰ مَكَانَتِكُمۡ إِنِّي عَامِلٞۖ فَسَوۡفَ تَعۡلَمُونَ مَن تَكُونُ لَهُۥ عَٰقِبَةُ ٱلدَّارِۚ إِنَّهُۥ لَا يُفۡلِحُ ٱلظَّٰلِمُونَ
ಹೇಳಿರಿ: “ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರಿ. ನಾನೂ ಕಾರ್ಯ ನಿರ್ವಹಿಸುತ್ತೇನೆ. ಇಹಲೋಕದ ಅಂತಿಮ ವಿಜಯವು ಯಾರಿಗೆ ಎಂದು ನೀವು ಸದ್ಯವೇ ತಿಳಿಯುವಿರಿ. ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.”
೧೩೬
وَجَعَلُواْ لِلَّهِ مِمَّا ذَرَأَ مِنَ ٱلۡحَرۡثِ وَٱلۡأَنۡعَٰمِ نَصِيبٗا فَقَالُواْ هَٰذَا لِلَّهِ بِزَعۡمِهِمۡ وَهَٰذَا لِشُرَكَآئِنَاۖ فَمَا كَانَ لِشُرَكَآئِهِمۡ فَلَا يَصِلُ إِلَى ٱللَّهِۖ وَمَا كَانَ لِلَّهِ فَهُوَ يَصِلُ إِلَىٰ شُرَكَآئِهِمۡۗ سَآءَ مَا يَحۡكُمُونَ
ಅಲ್ಲಾಹು ಸೃಷ್ಟಿಸಿದ ಕೃಷಿ ಮತ್ತು ಜಾನುವಾರುಗಳಿಂದ ಅವರು ಅವನಿಗೆ ಒಂದು ಪಾಲನ್ನು ನಿಶ್ಚಯಿಸಿದರು. ನಂತರ ತಮ್ಮ ದಾವೆಗೆ ಅನುಗುಣವಾಗಿ, “ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ದೇವರುಗಳಿಗೆ” ಎಂದು ಅವರು ಹೇಳಿದರು. ಅವರ ದೇವರುಗಳಿಗೆ ಮೀಸಲಿಟ್ಟಿರುವುದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅಲ್ಲಾಹನಿಗೆ ಮೀಸಲಿಟ್ಟಿರುವುದು ಅವರ ದೇವರುಗಳಿಗೆ ತಲುಪುತ್ತದೆ. ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.[1]
[1] ಅವರು ತಮ್ಮ ಕೃಷಿ ಮತ್ತು ಜಾನುವಾರುಗಳಲ್ಲಿ ಒಂದಂಶವನ್ನು ಅಲ್ಲಾಹನಿಗೆ ಮೀಸಲಿಡುತ್ತಿದ್ದರು. ಅಂದರೆ ಅದನ್ನು ಅತಿಥಿಗಳಿಗೆ, ಬಡವರಿಗೆ, ಪ್ರಯಾಣಿಕರಿಗೆ ಖರ್ಚು ಮಾಡುತ್ತಿದ್ದರು. ಇನ್ನೊಂದು ಅಂಶವನ್ನು ಅವರು ತಮ್ಮ ವಿಗ್ರಹಗಳಿಗೆ ಮೀಸಲಿಡುತ್ತಿದ್ದರು. ಇದನ್ನು ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಅವರು ಅಲ್ಲಾಹನಿಗೆ ಮೀಸಲಿಟ್ಟದ್ದನ್ನು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಆದರೆ ವಿಗ್ರಹಗಳಿಗೆ ಮೀಸಲಿಟ್ಟದ್ದನ್ನು ಅಲ್ಲಾಹನಿಗೆ, ಅಂದರೆ ಅತಿಥಿಗಳಿಗೆ, ಬಡವರಿಗೆ ನೀಡುತ್ತಿರಲಿಲ್ಲ.
೧೩೭
وَكَذَٰلِكَ زَيَّنَ لِكَثِيرٖ مِّنَ ٱلۡمُشۡرِكِينَ قَتۡلَ أَوۡلَٰدِهِمۡ شُرَكَآؤُهُمۡ لِيُرۡدُوهُمۡ وَلِيَلۡبِسُواْ عَلَيۡهِمۡ دِينَهُمۡۖ وَلَوۡ شَآءَ ٱللَّهُ مَا فَعَلُوهُۖ فَذَرۡهُمۡ وَمَا يَفۡتَرُونَ
ಹೀಗೆ ಬಹುದೇವಾರಾಧಕರಲ್ಲಿ ಹೆಚ್ಚಿನವರಿಗೂ ಅವರ ಮಕ್ಕಳನ್ನು ಕೊಲ್ಲುವುದನ್ನು ಅವರ ದೇವರುಗಳು ಅಲಂಕರಿಸಿಕೊಟ್ಟಿದ್ದಾರೆ.[1] ಅವರನ್ನು ನಾಶ ಮಾಡುವುದಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಗೊಂದಲಗೊಳಿಸುವುದಕ್ಕಾಗಿ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಆರೋಪಿಸುವ ವಿಷಯಗಳೊಂದಿಗೆ ಅವರನ್ನು ಬಿಟ್ಟುಬಿಡಿ.
[1] ಅರೇಬಿಯಾದಲ್ಲಿ ಶಿಶುಹತ್ಯೆ ಸಾಮಾನ್ಯವಾಗಿತ್ತು. ಅವರು ಮಕ್ಕಳನ್ನು ವಿಗ್ರಹಗಳಿಗೆ ಬಲಿ ನೀಡುತ್ತಿದ್ದರು. ಬಡತನದ ಭಯದಿಂದ ಮಕ್ಕಳನ್ನು ಕೊಲ್ಲುತ್ತಿದ್ದರು. ಹೆಣ್ಣು ಮಗು ಹುಟ್ಟಿದರೆ ಅಪಮಾನದಿಂದ ಅದನ್ನು ಜೀವಂತ ದಫನ ಮಾಡುತ್ತಿದ್ದರು. ಇವುಗಳನ್ನು ಅವರು ತಪ್ಪೆಂದು ಭಾವಿಸುತ್ತಿರಲಿಲ್ಲ.
೧೩೮
وَقَالُواْ هَٰذِهِۦٓ أَنۡعَٰمٞ وَحَرۡثٌ حِجۡرٞ لَّا يَطۡعَمُهَآ إِلَّا مَن نَّشَآءُ بِزَعۡمِهِمۡ وَأَنۡعَٰمٌ حُرِّمَتۡ ظُهُورُهَا وَأَنۡعَٰمٞ لَّا يَذۡكُرُونَ ٱسۡمَ ٱللَّهِ عَلَيۡهَا ٱفۡتِرَآءً عَلَيۡهِۚ سَيَجۡزِيهِم بِمَا كَانُواْ يَفۡتَرُونَ
ಅವರು ಹೇಳುತ್ತಾರೆ: “ಈ ಜಾನುವಾರುಗಳು ಮತ್ತು ಕೃಷಿಗಳನ್ನು ನಿಷೇಧಿಸಲಾಗಿದೆ. ನಾವು ಇಚ್ಛಿಸುವವರ ಹೊರತು ಯಾರೂ ಇವುಗಳನ್ನು ತಿನ್ನಬಾರದು.” ಇದು ಅವರ ದಾವೆಯಾಗಿದೆ. “ಕೆಲವು ಜಾನುವಾರುಗಳ ಬೆನ್ನ ಮೇಲೆ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಜಾನುವಾರುಗಳನ್ನು ಕೊಯ್ಯುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಬೇಕಾಗಿಲ್ಲ” (ಎಂದು ಅವರು ಹೇಳುತ್ತಾರೆ) ಇವೆಲ್ಲವೂ ಅವರು ಅಲ್ಲಾಹನ ಬಗ್ಗೆ ಆರೋಪಿಸುವ ಸುಳ್ಳುಗಳಾಗಿವೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು.
೧೩೯
وَقَالُواْ مَا فِي بُطُونِ هَٰذِهِ ٱلۡأَنۡعَٰمِ خَالِصَةٞ لِّذُكُورِنَا وَمُحَرَّمٌ عَلَىٰٓ أَزۡوَٰجِنَاۖ وَإِن يَكُن مَّيۡتَةٗ فَهُمۡ فِيهِ شُرَكَآءُۚ سَيَجۡزِيهِمۡ وَصۡفَهُمۡۚ إِنَّهُۥ حَكِيمٌ عَلِيمٞ
ಅವರು ಹೇಳುತ್ತಾರೆ: “ಈ ಜಾನುವಾರುಗಳ ಹೊಟ್ಟೆಯಲ್ಲಿರುವುದು ನಮ್ಮ ಪುರುಷರಿಗೆ ಮಾತ್ರ ಇರುವಂತದ್ದು. ಅದು ನಮ್ಮ ಪತ್ನಿಯರಿಗೆ ನಿಷಿದ್ಧವಾಗಿವೆ.” ಆದರೆ ಅದು ಸತ್ತ ಪ್ರಾಣಿಯಾದರೆ ಅವರು ಅದನ್ನು ಸಮಾನವಾಗಿ ಪಾಲು ಮಾಡುತ್ತಾರೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
೧೪೦
قَدۡ خَسِرَ ٱلَّذِينَ قَتَلُوٓاْ أَوۡلَٰدَهُمۡ سَفَهَۢا بِغَيۡرِ عِلۡمٖ وَحَرَّمُواْ مَا رَزَقَهُمُ ٱللَّهُ ٱفۡتِرَآءً عَلَى ٱللَّهِۚ قَدۡ ضَلُّواْ وَمَا كَانُواْ مُهۡتَدِينَ
ಅಜ್ಞಾನದಿಂದ ಅವಿವೇಕಿಗಳಾಗಿ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುತ್ತಾ ಅಲ್ಲಾಹು ದಯಪಾಲಿಸಿದ ವಸ್ತುಗಳನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ದಾರಿತಪ್ಪಿ ಹೋದರು. ಅವರು ಸನ್ಮಾರ್ಗದಲ್ಲಿ ಸೇರಲಿಲ್ಲ.
೧೪೧
۞ وَهُوَ ٱلَّذِيٓ أَنشَأَ جَنَّٰتٖ مَّعۡرُوشَٰتٖ وَغَيۡرَ مَعۡرُوشَٰتٖ وَٱلنَّخۡلَ وَٱلزَّرۡعَ مُخۡتَلِفًا أُكُلُهُۥ وَٱلزَّيۡتُونَ وَٱلرُّمَّانَ مُتَشَٰبِهٗا وَغَيۡرَ مُتَشَٰبِهٖۚ كُلُواْ مِن ثَمَرِهِۦٓ إِذَآ أَثۡمَرَ وَءَاتُواْ حَقَّهُۥ يَوۡمَ حَصَادِهِۦۖ وَلَا تُسۡرِفُوٓاْۚ إِنَّهُۥ لَا يُحِبُّ ٱلۡمُسۡرِفِينَ
ಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಹೋಲಿಕೆಯಿರುವ ಮತ್ತು ಹೋಲಿಕೆಯಿಲ್ಲದ ಆಲಿವ್ ಮತ್ತು ದಾಳಿಂಬೆಗಳನ್ನು ಸೃಷ್ಟಿಸಿದ್ದು ಅವನೇ. ಅವು ಹಣ್ಣು ಬಿಟ್ಟರೆ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಅವುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು (ಝಕಾತನ್ನು) ನೀಡಿರಿ. ದುರ್ವ್ಯಯ ಮಾಡಬೇಡಿ. ನಿಶ್ಚಯವಾಗಿಯೂ ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
೧೪೨
وَمِنَ ٱلۡأَنۡعَٰمِ حَمُولَةٗ وَفَرۡشٗاۚ كُلُواْ مِمَّا رَزَقَكُمُ ٱللَّهُ وَلَا تَتَّبِعُواْ خُطُوَٰتِ ٱلشَّيۡطَٰنِۚ إِنَّهُۥ لَكُمۡ عَدُوّٞ مُّبِينٞ
ಭಾರ ಹೊರುವ ಜಾನುವಾರುಗಳನ್ನು ಮತ್ತು (ಆಹಾರಕ್ಕಾಗಿ) ಕೊಯ್ಯುವ ಜಾನುವಾರುಗಳನ್ನು (ಅವನು ಸೃಷ್ಟಿಸಿದ್ದಾನೆ). ಅಲ್ಲಾಹು ನಿಮಗೆ ಆಹಾರವಾಗಿ ನೀಡಿದ ವಸ್ತುಗಳಿಂದ ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ.
೧೪೩
ثَمَٰنِيَةَ أَزۡوَٰجٖۖ مِّنَ ٱلضَّأۡنِ ٱثۡنَيۡنِ وَمِنَ ٱلۡمَعۡزِ ٱثۡنَيۡنِۗ قُلۡ ءَآلذَّكَرَيۡنِ حَرَّمَ أَمِ ٱلۡأُنثَيَيۡنِ أَمَّا ٱشۡتَمَلَتۡ عَلَيۡهِ أَرۡحَامُ ٱلۡأُنثَيَيۡنِۖ نَبِّـُٔونِي بِعِلۡمٍ إِن كُنتُمۡ صَٰدِقِينَ
ಎಂಟು ಜೋಡಿಗಳನ್ನು (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣುಗಳನ್ನು ಅವನು ಸೃಷ್ಟಿಸಿದ್ದಾನೆ). ಕುರಿಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು) ಹಾಗೂ ಮೇಕೆಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿಕೊಡಿ.”
೧೪೪
وَمِنَ ٱلۡإِبِلِ ٱثۡنَيۡنِ وَمِنَ ٱلۡبَقَرِ ٱثۡنَيۡنِۗ قُلۡ ءَآلذَّكَرَيۡنِ حَرَّمَ أَمِ ٱلۡأُنثَيَيۡنِ أَمَّا ٱشۡتَمَلَتۡ عَلَيۡهِ أَرۡحَامُ ٱلۡأُنثَيَيۡنِۖ أَمۡ كُنتُمۡ شُهَدَآءَ إِذۡ وَصَّىٰكُمُ ٱللَّهُ بِهَٰذَاۚ فَمَنۡ أَظۡلَمُ مِمَّنِ ٱفۡتَرَىٰ عَلَى ٱللَّهِ كَذِبٗا لِّيُضِلَّ ٱلنَّاسَ بِغَيۡرِ عِلۡمٍۚ إِنَّ ٱللَّهَ لَا يَهۡدِي ٱلۡقَوۡمَ ٱلظَّٰلِمِينَ
ಒಂಟೆಯಿಂದ ಎರಡು (ಗಂಡು ಮತ್ತು ಹೆಣ್ಣು) ಮತ್ತು ಹಸುವಿನಿಂದ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ಅಲ್ಲಾಹು ಇದನ್ನು ಆದೇಶಿಸುವಾಗ ನೀವು ಉಪಸ್ಥಿತರಿದ್ದಿರಾ? ಯಾವುದೇ ಜ್ಞಾನವಿಲ್ಲದೆ, ಜನರನ್ನು ದಾರಿ ತಪ್ಪಿಸುವುದಕ್ಕಾಗಿ ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”
೧೪೫
قُل لَّآ أَجِدُ فِي مَآ أُوحِيَ إِلَيَّ مُحَرَّمًا عَلَىٰ طَاعِمٖ يَطۡعَمُهُۥٓ إِلَّآ أَن يَكُونَ مَيۡتَةً أَوۡ دَمٗا مَّسۡفُوحًا أَوۡ لَحۡمَ خِنزِيرٖ فَإِنَّهُۥ رِجۡسٌ أَوۡ فِسۡقًا أُهِلَّ لِغَيۡرِ ٱللَّهِ بِهِۦۚ فَمَنِ ٱضۡطُرَّ غَيۡرَ بَاغٖ وَلَا عَادٖ فَإِنَّ رَبَّكَ غَفُورٞ رَّحِيمٞ
ಹೇಳಿರಿ: “ಆಹಾರ ಸೇವಿಸುವವನಿಗೆ ನಿಷೇಧಿಸಲಾದ ಏನನ್ನೂ ನನಗೆ ನೀಡಲಾದ ದೇವವಾಣಿಯಲ್ಲಿ ನಾನು ಕಾಣುವುದಿಲ್ಲ. ಅದು ಶವ, ಅಥವಾ ಹರಿಯುವ ರಕ್ತ, ಅಥವಾ ಹಂದಿ ಮಾಂಸವಾಗಿದ್ದರೆ ಹೊರತು. ಏಕೆಂದರೆ ಅದು ಹೊಲಸಾಗಿದೆ. ಅಥವಾ ಅಲ್ಲಾಹೇತರರ ಹೆಸರಲ್ಲಿ (ಹರಕೆಯಾಗಿ) ಘೋಷಿಸಲಾದ ಕಾರಣ ನಿಷಿದ್ಧವಾದ ವಸ್ತುಗಳ ಹೊರತು. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”
೧೪೬
وَعَلَى ٱلَّذِينَ هَادُواْ حَرَّمۡنَا كُلَّ ذِي ظُفُرٖۖ وَمِنَ ٱلۡبَقَرِ وَٱلۡغَنَمِ حَرَّمۡنَا عَلَيۡهِمۡ شُحُومَهُمَآ إِلَّا مَا حَمَلَتۡ ظُهُورُهُمَآ أَوِ ٱلۡحَوَايَآ أَوۡ مَا ٱخۡتَلَطَ بِعَظۡمٖۚ ذَٰلِكَ جَزَيۡنَٰهُم بِبَغۡيِهِمۡۖ وَإِنَّا لَصَٰدِقُونَ
ನಾವು ಯಹೂದಿಗಳಿಗೆ ಉಗುರುಗಳಿರುವ ಎಲ್ಲಾ ಪ್ರಾಣಿಗಳನ್ನು ನಿಷೇಧಿಸಿದ್ದೆವು. ಹಸು, ಮೇಕೆ ಮುಂತಾದ ಪ್ರಾಣಿಗಳ ಕೊಬ್ಬುಗಳನ್ನು ನಾವು ಅವರಿಗೆ ನಿಷೇಧಿಸಿದ್ದೆವು. ಆದರೆ ಅವುಗಳ ಬೆನ್ನಲ್ಲಿರುವ ಅಥವಾ ಕರುಳುಗಳಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊಂಡಿರುವ ಕೊಬ್ಬುಗಳ ಹೊರತು. ಇದು ಅವರ ಅತಿರೇಕಕ್ಕೆ ನಾವು ನೀಡಿದ ಶಿಕ್ಷೆಯಾಗಿದೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.
೧೪೭
فَإِن كَذَّبُوكَ فَقُل رَّبُّكُمۡ ذُو رَحۡمَةٖ وَٰسِعَةٖ وَلَا يُرَدُّ بَأۡسُهُۥ عَنِ ٱلۡقَوۡمِ ٱلۡمُجۡرِمِينَ
ಅವರು ನಿಮ್ಮನ್ನು ನಿಷೇಧಿಸಿದರೆ, ಹೇಳಿರಿ: “ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲ ದಯೆಯುಳ್ಳವನು. ಆದರೆ ಅಕ್ರಮವೆಸಗಿದ ಜನರಿಂದ ಅವನ ಶಿಕ್ಷೆಯು ನಿವಾರಣೆಯಾಗುವುದಿಲ್ಲ.”
೧೪೮
سَيَقُولُ ٱلَّذِينَ أَشۡرَكُواْ لَوۡ شَآءَ ٱللَّهُ مَآ أَشۡرَكۡنَا وَلَآ ءَابَآؤُنَا وَلَا حَرَّمۡنَا مِن شَيۡءٖۚ كَذَٰلِكَ كَذَّبَ ٱلَّذِينَ مِن قَبۡلِهِمۡ حَتَّىٰ ذَاقُواْ بَأۡسَنَاۗ قُلۡ هَلۡ عِندَكُم مِّنۡ عِلۡمٖ فَتُخۡرِجُوهُ لَنَآۖ إِن تَتَّبِعُونَ إِلَّا ٱلظَّنَّ وَإِنۡ أَنتُمۡ إِلَّا تَخۡرُصُونَ
ಬಹುದೇವಾರಾಧಕರು ಹೇಳುವರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ ಮತ್ತು ಯಾವುದೇ ವಸ್ತುವನ್ನು ನಿಷೇಧಿಸುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು—ನಮ್ಮ ಶಿಕ್ಷೆಯ ರುಚಿಯನ್ನು ನೋಡುವವರೆಗೆ. ಹೇಳಿರಿ: “ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ಇದ್ದರೆ ಅದನ್ನು ತೋರಿಸಿ. ನೀವು ಊಹಾ-ಪೋಹಗಳನ್ನು ಹಿಂಬಾಲಿಸುತ್ತಿದ್ದೀರಿ. ನೀವು ಕೇವಲ ಸುಳ್ಳನ್ನು ಹೇಳುತ್ತಿದ್ದೀರಿ.”
೧೪೯
قُلۡ فَلِلَّهِ ٱلۡحُجَّةُ ٱلۡبَٰلِغَةُۖ فَلَوۡ شَآءَ لَهَدَىٰكُمۡ أَجۡمَعِينَ
ಹೇಳಿರಿ: “ನಿರ್ಣಾಯಕ ಪುರಾವೆಯಿರುವುದು ಅಲ್ಲಾಹನಲ್ಲಿ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನು.”
೧೫೦
قُلۡ هَلُمَّ شُهَدَآءَكُمُ ٱلَّذِينَ يَشۡهَدُونَ أَنَّ ٱللَّهَ حَرَّمَ هَٰذَاۖ فَإِن شَهِدُواْ فَلَا تَشۡهَدۡ مَعَهُمۡۚ وَلَا تَتَّبِعۡ أَهۡوَآءَ ٱلَّذِينَ كَذَّبُواْ بِـَٔايَٰتِنَا وَٱلَّذِينَ لَا يُؤۡمِنُونَ بِٱلۡأٓخِرَةِ وَهُم بِرَبِّهِمۡ يَعۡدِلُونَ
ಹೇಳಿರಿ: “ಅಲ್ಲಾಹು ಇವುಗಳನ್ನು ನಿಷೇಧಿಸಿದ್ದಾನೆಂದು ಸಾಕ್ಷಿ ನುಡಿಯುವ ನಿಮ್ಮ ಸಾಕ್ಷಿಗಳನ್ನು ಕರೆತನ್ನಿರಿ.” ಅವರೇನಾದರೂ ಸಾಕ್ಷಿ ನುಡಿದರೆ ನೀವು ಅವರೊಂದಿಗೆ ಸಾಕ್ಷಿ ನುಡಿಯಬೇಡಿ. ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಪರಲೋಕದಲ್ಲಿ ವಿಶ್ವಾಸವಿಡದ ಜನರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಾಟಿಗಳನ್ನು ಕಲ್ಪಿಸುವವರಾಗಿದ್ದಾರೆ.
೧೫೧
۞ قُلۡ تَعَالَوۡاْ أَتۡلُ مَا حَرَّمَ رَبُّكُمۡ عَلَيۡكُمۡۖ أَلَّا تُشۡرِكُواْ بِهِۦ شَيۡـٔٗاۖ وَبِٱلۡوَٰلِدَيۡنِ إِحۡسَٰنٗاۖ وَلَا تَقۡتُلُوٓاْ أَوۡلَٰدَكُم مِّنۡ إِمۡلَٰقٖ نَّحۡنُ نَرۡزُقُكُمۡ وَإِيَّاهُمۡۖ وَلَا تَقۡرَبُواْ ٱلۡفَوَٰحِشَ مَا ظَهَرَ مِنۡهَا وَمَا بَطَنَۖ وَلَا تَقۡتُلُواْ ٱلنَّفۡسَ ٱلَّتِي حَرَّمَ ٱللَّهُ إِلَّا بِٱلۡحَقِّۚ ذَٰلِكُمۡ وَصَّىٰكُم بِهِۦ لَعَلَّكُمۡ تَعۡقِلُونَ
ಹೇಳಿರಿ: “ಬನ್ನಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಏನು ನಿಷೇಧಿಸಿದ್ದಾನೆಂದು ನಾನು ನಿಮಗೆ ಓದಿಕೊಡುವೆನು. (ಅವು ಏನೆಂದರೆ) ನೀವು ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡಬೇಡಿ, ಮಾತಾಪಿತರಿಗೆ ಒಳಿತು ಮಾಡಿರಿ, ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ—ನಿಮಗೂ, ಅವರಿಗೂ ನಾವು ಆಹಾರ ನೀಡುತ್ತೇವೆ—ಬಹಿರಂಗವಾಗಿರುವ ಮತ್ತು ರಹಸ್ಯವಾಗಿರುವ ಯಾವುದೇ ಅಶ್ಲೀಲತೆಗಳ ಬಳಿಗೆ ಹೋಗಬೇಡಿ ಮತ್ತು ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.”
೧೫೨
وَلَا تَقۡرَبُواْ مَالَ ٱلۡيَتِيمِ إِلَّا بِٱلَّتِي هِيَ أَحۡسَنُ حَتَّىٰ يَبۡلُغَ أَشُدَّهُۥۚ وَأَوۡفُواْ ٱلۡكَيۡلَ وَٱلۡمِيزَانَ بِٱلۡقِسۡطِۖ لَا نُكَلِّفُ نَفۡسًا إِلَّا وُسۡعَهَاۖ وَإِذَا قُلۡتُمۡ فَٱعۡدِلُواْ وَلَوۡ كَانَ ذَا قُرۡبَىٰۖ وَبِعَهۡدِ ٱللَّهِ أَوۡفُواْۚ ذَٰلِكُمۡ وَصَّىٰكُم بِهِۦ لَعَلَّكُمۡ تَذَكَّرُونَ
ಒಳಿತು ಮಾಡುವ ಉದ್ದೇಶದಿಂದಲೇ ಹೊರತು ನೀವು ಅನಾಥರ ಆಸ್ತಿಯನ್ನು ಮುಟ್ಟಬೇಡಿ. ಅವರು ಪ್ರೌಢರಾಗುವ ತನಕ (ಅವರ ಸಂರಕ್ಷಣೆಯನ್ನು ವಹಿಸಿಕೊಳ್ಳಿ). ಅಳತೆ ಮತ್ತು ತೂಕ ಮಾಡುವಾಗ ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ಮಾಡಿರಿ. ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಹೊರಿಸುವುದಿಲ್ಲ. ಮಾತನಾಡುವಾಗ (ಸಾಕ್ಷಿ ನುಡಿಯುವಾಗ) ನ್ಯಾಯದಿಂದ ಮಾತನಾಡಿರಿ. ಅದು ನಿಕಟ ಸಂಬಂಧಿಕನಿಗೆ ಸಂಬಂಧಿಸಿದ ವಿಷಯವಾದರೂ ಸಹ. ಅಲ್ಲಾಹನ ಕರಾರನ್ನು ನೆರವೇರಿಸಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ನೆನಪಿಟ್ಟುಕೊಳ್ಳುವುದಕ್ಕಾಗಿ.
೧೫೩
وَأَنَّ هَٰذَا صِرَٰطِي مُسۡتَقِيمٗا فَٱتَّبِعُوهُۖ وَلَا تَتَّبِعُواْ ٱلسُّبُلَ فَتَفَرَّقَ بِكُمۡ عَن سَبِيلِهِۦۚ ذَٰلِكُمۡ وَصَّىٰكُم بِهِۦ لَعَلَّكُمۡ تَتَّقُونَ
ನಿಶ್ಚಯವಾಗಿಯೂ ಇದು ನನ್ನ ನೇರ ಮಾರ್ಗವಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ನಡೆಯಿರಿ. ಇತರ ಮಾರ್ಗಗಳಲ್ಲಿ ನಡೆಯಬೇಡಿ. ಅವು ನಿಮ್ಮನ್ನು ಅವನ ಮಾರ್ಗದಿಂದ ಬೇರ್ಪಡಿಸುತ್ತವೆ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.
೧೫೪
ثُمَّ ءَاتَيۡنَا مُوسَى ٱلۡكِتَٰبَ تَمَامًا عَلَى ٱلَّذِيٓ أَحۡسَنَ وَتَفۡصِيلٗا لِّكُلِّ شَيۡءٖ وَهُدٗى وَرَحۡمَةٗ لَّعَلَّهُم بِلِقَآءِ رَبِّهِمۡ يُؤۡمِنُونَ
ಒಳಿತು ಮಾಡುವವರಿಗೆ ಅನುಗ್ರಹದ ಪೂರ್ತೀಕರಣವಾಗಿ, ಮತ್ತು ಎಲ್ಲಾ ವಿಷಯಗಳ ವಿವರಣೆಯಾಗಿ ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದರಲ್ಲಿ ವಿಶ್ವಾಸವಿಡುವುದಕ್ಕಾಗಿ.
೧೫೫
وَهَٰذَا كِتَٰبٌ أَنزَلۡنَٰهُ مُبَارَكٞ فَٱتَّبِعُوهُ وَٱتَّقُواْ لَعَلَّكُمۡ تُرۡحَمُونَ
ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.
೧೫೬
أَن تَقُولُوٓاْ إِنَّمَآ أُنزِلَ ٱلۡكِتَٰبُ عَلَىٰ طَآئِفَتَيۡنِ مِن قَبۡلِنَا وَإِن كُنَّا عَن دِرَاسَتِهِمۡ لَغَٰفِلِينَ
"ನಮಗಿಂತ ಮೊದಲಿನ ಎರಡು ಸಮುದಾಯಗಳಿಗೆ ಮಾತ್ರ ಗ್ರಂಥವು ಅವತೀರ್ಣವಾಗಿದೆ; ಅವರು ಮಾಡುತ್ತಿದ್ದ ಅಧ್ಯಯನದ ಬಗ್ಗೆ ನಮಗೇನೂ ತಿಳಿದಿರಲಿಲ್ಲ” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ).
೧೫೭
أَوۡ تَقُولُواْ لَوۡ أَنَّآ أُنزِلَ عَلَيۡنَا ٱلۡكِتَٰبُ لَكُنَّآ أَهۡدَىٰ مِنۡهُمۡۚ فَقَدۡ جَآءَكُم بَيِّنَةٞ مِّن رَّبِّكُمۡ وَهُدٗى وَرَحۡمَةٞۚ فَمَنۡ أَظۡلَمُ مِمَّن كَذَّبَ بِـَٔايَٰتِ ٱللَّهِ وَصَدَفَ عَنۡهَاۗ سَنَجۡزِي ٱلَّذِينَ يَصۡدِفُونَ عَنۡ ءَايَٰتِنَا سُوٓءَ ٱلۡعَذَابِ بِمَا كَانُواْ يَصۡدِفُونَ
ಅಥವಾ, “ನಮಗೊಂದು ಗ್ರಂಥವು ಅವತೀರ್ಣವಾಗುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆಯುತ್ತಿದ್ದೆವು” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). ಈಗ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರ, ಮಾರ್ಗದರ್ಶನ ಮತ್ತು ದಯೆಯು ಬಂದಿದೆ. ಇದರ ಬಳಿಕವೂ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರು? ನಮ್ಮ ವಚನಗಳಿಂದ ವಿಮುಖರಾಗುವವರು ಯಾರೋ—ಅವರು ವಿಮುಖರಾದ ಕಾರಣ ನಾವು ಅವರಿಗೆ ಅತಿ ಹೀನ ಶಿಕ್ಷೆಯನ್ನು ನೀಡುವೆವು.
೧೫೮
هَلۡ يَنظُرُونَ إِلَّآ أَن تَأۡتِيَهُمُ ٱلۡمَلَٰٓئِكَةُ أَوۡ يَأۡتِيَ رَبُّكَ أَوۡ يَأۡتِيَ بَعۡضُ ءَايَٰتِ رَبِّكَۗ يَوۡمَ يَأۡتِي بَعۡضُ ءَايَٰتِ رَبِّكَ لَا يَنفَعُ نَفۡسًا إِيمَٰنُهَا لَمۡ تَكُنۡ ءَامَنَتۡ مِن قَبۡلُ أَوۡ كَسَبَتۡ فِيٓ إِيمَٰنِهَا خَيۡرٗاۗ قُلِ ٱنتَظِرُوٓاْ إِنَّا مُنتَظِرُونَ
ಅವರ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ಅವರ ಪರಿಪಾಲಕನು (ಅಲ್ಲಾಹು) ಬರುವುದನ್ನು ಅಥವಾ ಅವರ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವುದನ್ನಲ್ಲದೆ ಅವರು ಬೇರೆ ಏನನ್ನು ಕಾಯುತ್ತಿದ್ದಾರೆ? ನಿಮ್ಮ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವ ದಿನದಂದು, ಅದಕ್ಕಿಂತ ಮೊದಲು ಸತ್ಯವಿಶ್ವಾಸಿಯಾದವನು ಅಥವಾ ಸತ್ಯವಿಶ್ವಾಸದಿಂದ ಏನಾದರೂ ಒಳಿತು ಮಾಡಿದವನ ಹೊರತು ಬೇರೆ ಯಾರಿಗೂ ಅವನ ವಿಶ್ವಾಸವು ಉಪಕಾರ ಮಾಡುವುದಿಲ್ಲ. ಹೇಳಿರಿ: “ನೀವು ಕಾಯಿರಿ, ನಿಶ್ಚಯವಾಗಿಯೂ ನಾವು ಕೂಡ ಕಾಯುತ್ತೇವೆ.”
೧೫೯
إِنَّ ٱلَّذِينَ فَرَّقُواْ دِينَهُمۡ وَكَانُواْ شِيَعٗا لَّسۡتَ مِنۡهُمۡ فِي شَيۡءٍۚ إِنَّمَآ أَمۡرُهُمۡ إِلَى ٱللَّهِ ثُمَّ يُنَبِّئُهُم بِمَا كَانُواْ يَفۡعَلُونَ
ತಮ್ಮ ಧರ್ಮವನ್ನು ಒಡೆದು ವಿವಿಧ ಪಂಗಡಗಳಾಗಿ ಬೇರ್ಪಟ್ಟವರು ಯಾರೋ—ಅವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದು. ಅವರು ಮಾಡುತ್ತಿದ್ದ ಕರ್ಮಗಳನ್ನು ನಂತರ ಅವನು ಅವರಿಗೆ ತಿಳಿಸಿಕೊಡುವನು.
೧೬೦
مَن جَآءَ بِٱلۡحَسَنَةِ فَلَهُۥ عَشۡرُ أَمۡثَالِهَاۖ وَمَن جَآءَ بِٱلسَّيِّئَةِ فَلَا يُجۡزَىٰٓ إِلَّا مِثۡلَهَا وَهُمۡ لَا يُظۡلَمُونَ
ಯಾರು ಒಂದು ಒಳಿತನ್ನು ತರುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಒಂದು ಕೆಡುಕನ್ನು ತರುತ್ತಾನೋ ಅವನಿಗೆ ಅದಕ್ಕೆ ಸಮಾನವಾದ ಶಿಕ್ಷೆಯನ್ನು ಮಾತ್ರ ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
೧೬೧
قُلۡ إِنَّنِي هَدَىٰنِي رَبِّيٓ إِلَىٰ صِرَٰطٖ مُّسۡتَقِيمٖ دِينٗا قِيَمٗا مِّلَّةَ إِبۡرَٰهِيمَ حَنِيفٗاۚ وَمَا كَانَ مِنَ ٱلۡمُشۡرِكِينَ
ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನನಗೆ ನೇರಮಾರ್ಗವನ್ನು—ಏಕನಿಷ್ಠರಾದ ಇಬ್ರಾಹೀಮರ ನೇರ ಧರ್ಮವನ್ನು ತೋರಿಸಿದ್ದಾನೆ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
೧೬೨
قُلۡ إِنَّ صَلَاتِي وَنُسُكِي وَمَحۡيَايَ وَمَمَاتِي لِلَّهِ رَبِّ ٱلۡعَٰلَمِينَ
ಹೇಳಿರಿ: “ನಿಶ್ಚಯವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು.
೧೬೩
لَا شَرِيكَ لَهُۥۖ وَبِذَٰلِكَ أُمِرۡتُ وَأَنَا۠ أَوَّلُ ٱلۡمُسۡلِمِينَ
ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆಜ್ಞಾಪಿಸಲಾಗಿದೆ. ನಾನು ಮುಸಲ್ಮಾನರಲ್ಲಿ (ಶರಣಾದವರಲ್ಲಿ) ಮೊದಲಿಗನಾಗಿದ್ದೇನೆ.”
೧೬೪
قُلۡ أَغَيۡرَ ٱللَّهِ أَبۡغِي رَبّٗا وَهُوَ رَبُّ كُلِّ شَيۡءٖۚ وَلَا تَكۡسِبُ كُلُّ نَفۡسٍ إِلَّا عَلَيۡهَاۚ وَلَا تَزِرُ وَازِرَةٞ وِزۡرَ أُخۡرَىٰۚ ثُمَّ إِلَىٰ رَبِّكُم مَّرۡجِعُكُمۡ فَيُنَبِّئُكُم بِمَا كُنتُمۡ فِيهِ تَخۡتَلِفُونَ
ಹೇಳಿರಿ: “ಅಲ್ಲಾಹು ಸರ್ವ ವಸ್ತುಗಳ ಪರಿಪಾಲಕನಾಗಿರುವಾಗ, ನಾನು ಅವನ ಹೊರತು ಬೇರೆ ಪರಿಪಾಲಕರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಕ್ಕೆ ಉತ್ತರದಾಯಿಯಾಗಿದ್ದಾನೆ. ಪಾಪಗಳ ಭಾರವನ್ನು ಹೊರುವ ಯಾರೂ ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ನಂತರ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವಿರಿ. ಆಗ ನೀವು ಯಾವ ವಿಷಯದಲ್ಲಿ ಭಿನ್ನಮತ ತಳೆದಿರೋ ಅದನ್ನು ಅವನು ನಿಮಗೆ ತಿಳಿಸಿಕೊಡುವನು.”
೧೬೫
وَهُوَ ٱلَّذِي جَعَلَكُمۡ خَلَٰٓئِفَ ٱلۡأَرۡضِ وَرَفَعَ بَعۡضَكُمۡ فَوۡقَ بَعۡضٖ دَرَجَٰتٖ لِّيَبۡلُوَكُمۡ فِي مَآ ءَاتَىٰكُمۡۗ إِنَّ رَبَّكَ سَرِيعُ ٱلۡعِقَابِ وَإِنَّهُۥ لَغَفُورٞ رَّحِيمُۢ
ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು ಅವನೇ. ಅವನು ನಿಮಗೆ ನೀಡಿದ ಅನುಗ್ರಹಗಳಲ್ಲಿ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಶ್ರೇಷ್ಠ ಸ್ಥಾನಮಾನಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.