Surah Ash-Shuara in Kannada

    الشعراء

    Surah Ash-Shuara in Kannada

    Read Surah Ash-Shuara in Kannada (الشعراء) with Arabic text, Kannada translation, and audio recitation. Chapter 26 of the Holy Quran, 227 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    طسٓمٓ

    ತ್ವಾ ಸೀನ್ ಮೀಮ್.

    تِلۡكَ ءَايَٰتُ ٱلۡكِتَٰبِ ٱلۡمُبِينِ

    ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ.

    لَعَلَّكَ بَٰخِعٞ نَّفۡسَكَ أَلَّا يَكُونُواْ مُؤۡمِنِينَ

    ಅವರು ಸತ್ಯವಿಶ್ವಾಸಿಗಳಾಗದ ಕಾರಣ ಬಹುಶಃ ನೀವು ನಿಮ್ಮ ಪ್ರಾಣವನ್ನೇ ಕಳಕೊಳ್ಳುತ್ತಿದ್ದೀರಿ.

    إِن نَّشَأۡ نُنَزِّلۡ عَلَيۡهِم مِّنَ ٱلسَّمَآءِ ءَايَةٗ فَظَلَّتۡ أَعۡنَٰقُهُمۡ لَهَا خَٰضِعِينَ

    ನಾವು ಇಚ್ಛಿಸಿದರೆ ಅವರಿಗೆ ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸಿಕೊಡುವೆವು. ಅದರ ಮುಂದೆ ಅವರ ಕೊರಳುಗಳು ವಿನಮ್ರವಾಗುವುವು.

    وَمَا يَأۡتِيهِم مِّن ذِكۡرٖ مِّنَ ٱلرَّحۡمَٰنِ مُحۡدَثٍ إِلَّا كَانُواْ عَنۡهُ مُعۡرِضِينَ

    ಅವರ ಬಳಿಗೆ ಪರಮ ದಯಾಮಯನ (ಅಲ್ಲಾಹನ) ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇದ್ದರು.

    فَقَدۡ كَذَّبُواْ فَسَيَأۡتِيهِمۡ أَنۢبَٰٓؤُاْ مَا كَانُواْ بِهِۦ يَسۡتَهۡزِءُونَ

    ಅವರು ನಿಷೇಧಿಸಿದರು. ಆದ್ದರಿಂದ ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದರ ಸಮಾಚಾರವು ಸದ್ಯವೇ ಅವರ ಬಳಿಗೆ ಬರುವುದು.

    أَوَلَمۡ يَرَوۡاْ إِلَى ٱلۡأَرۡضِ كَمۡ أَنۢبَتۡنَا فِيهَا مِن كُلِّ زَوۡجٖ كَرِيمٍ

    ಅವರು ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳಿಂದ ಎಷ್ಟೆಲ್ಲಾ ಬೆಳೆಸಿದ್ದೇವೆಂದು.

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೦

    وَإِذۡ نَادَىٰ رَبُّكَ مُوسَىٰٓ أَنِ ٱئۡتِ ٱلۡقَوۡمَ ٱلظَّٰلِمِينَ

    ನಿಮ್ಮ ಪರಿಪಾಲಕನು (ಅಲ್ಲಾಹು) ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅತಿರೇಕಿಗಳಾದ ಆ ಜನರ ಬಳಿಗೆ ಹೋಗಿರಿ.

    ೧೧

    قَوۡمَ فِرۡعَوۡنَۚ أَلَا يَتَّقُونَ

    ಫರೋಹ‍ನ ಜನರ ಬಳಿಗೆ.” ಅವರು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೨

    قَالَ رَبِّ إِنِّيٓ أَخَافُ أَن يُكَذِّبُونِ

    ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನ್ನನ್ನು ನಿಷೇಧಿಸುವರೆಂದು ನನಗೆ ಭಯವಾಗುತ್ತಿದೆ.

    ೧೩

    وَيَضِيقُ صَدۡرِي وَلَا يَنطَلِقُ لِسَانِي فَأَرۡسِلۡ إِلَىٰ هَٰرُونَ

    ನನಗೆ ಹೃದಯದಲ್ಲಿ ಇಕ್ಕಟ್ಟು ಅನುಭವವಾಗುತ್ತದೆ ಮತ್ತು ನನ್ನ ನಾಲಗೆ ಸರಿಯಾಗಿ ಚಲಿಸುವುದಿಲ್ಲ. ಆದ್ದರಿಂದ ನೀನು ಹಾರೂನರಿಗೂ ಸಂದೇಶ ಕಳುಹಿಸು.

    ೧೪

    وَلَهُمۡ عَلَيَّ ذَنۢبٞ فَأَخَافُ أَن يَقۡتُلُونِ

    ಅವರಿಗೆ ನನ್ನ ಮೇಲೆ ಒಂದು ಅಪರಾಧ ಮಾಡಿದ ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.”

    ೧೫

    قَالَ كَلَّاۖ فَٱذۡهَبَا بِـَٔايَٰتِنَآۖ إِنَّا مَعَكُم مُّسۡتَمِعُونَ

    ಅಲ್ಲಾಹು ಹೇಳಿದನು: “ಸಾಧ್ಯವೇ ಇಲ್ಲ. ನೀವಿಬ್ಬರೂ ನಮ್ಮ ದೃಷ್ಟಾಂತಗಳೊಂದಿಗೆ ಹೋಗಿರಿ. ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಕೇಳುತ್ತಾ ನಿಮ್ಮ ಜೊತೆಗಿದ್ದೇವೆ.”

    ೧೬

    فَأۡتِيَا فِرۡعَوۡنَ فَقُولَآ إِنَّا رَسُولُ رَبِّ ٱلۡعَٰلَمِينَ

    ನೀವು ಫರೋಹ‍ನ ಬಳಿಗೆ ಹೋಗಿರಿ. ನಂತರ ಹೇಳಿರಿ: “ನಾವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ.

    ೧೭

    أَنۡ أَرۡسِلۡ مَعَنَا بَنِيٓ إِسۡرَٰٓءِيلَ

    ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕು (ಎಂಬ ಆದೇಶದೊಂದಿಗೆ ಬಂದಿದ್ದೇವೆ).”

    ೧೮

    قَالَ أَلَمۡ نُرَبِّكَ فِينَا وَلِيدٗا وَلَبِثۡتَ فِينَا مِنۡ عُمُرِكَ سِنِينَ

    ಫರೋಹ ಹೇಳಿದನು: “ನೀನು ಮಗುವಾಗಿದ್ದಾಗ ನಾವು ನಿನ್ನನ್ನು ಸಾಕಲಿಲ್ಲವೇ? ನೀನಂತೂ ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನಮ್ಮ ಜೊತೆಗೇ ಕಳೆದಿರುವೆ.

    ೧೯

    وَفَعَلۡتَ فَعۡلَتَكَ ٱلَّتِي فَعَلۡتَ وَأَنتَ مِنَ ٱلۡكَٰفِرِينَ

    ನಂತರ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು ಮಾಡಿದೆ. ನಿಜಕ್ಕೂ ನೀನು ಕೃತಜ್ಞತೆಯಿಲ್ಲದವನಾಗಿದ್ದೆ.”

    ೨೦

    قَالَ فَعَلۡتُهَآ إِذٗا وَأَنَا۠ مِنَ ٱلضَّآلِّينَ

    ಮೂಸಾ ಹೇಳಿದರು: “ನಾನು ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಆಗ ನಾನು ಸರಿದಾರಿಯನ್ನು ತಿಳಿಯದ ಜನರಲ್ಲಿ ಸೇರಿದ್ದೆನು.

    ೨೧

    فَفَرَرۡتُ مِنكُمۡ لَمَّا خِفۡتُكُمۡ فَوَهَبَ لِي رَبِّي حُكۡمٗا وَجَعَلَنِي مِنَ ٱلۡمُرۡسَلِينَ

    ನಂತರ ನಿಮ್ಮ ಭಯದಿಂದ ನಾನು ನಿಮ್ಮಿಂದ ದೂರ ಓಡಿದೆನು. ನಂತರ ನನ್ನ ಪರಿಪಾಲಕನು (ಅಲ್ಲಾಹು) ನನಗೆ ವಿವೇಕವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು.

    ೨೨

    وَتِلۡكَ نِعۡمَةٞ تَمُنُّهَا عَلَيَّ أَنۡ عَبَّدتَّ بَنِيٓ إِسۡرَٰٓءِيلَ

    ನೀನು ನನ್ನನ್ನು ಸಾಕಿ ಸಲಹಿದ್ದನ್ನು ನೀನು ನನಗೆ ಮಾಡಿದ ಉಪಕಾರವೆಂದು ಹೇಳುತ್ತಿರುವೆಯಾ? ಆದರೆ ವಾಸ್ತವವಾಗಿ, ನೀನು ಇಸ್ರಾಯೇಲ್ ಮಕ್ಕಳನ್ನು ನಿನ್ನ ಗುಲಾಮರನ್ನಾಗಿ ಮಾಡಿಕೊಂಡಿರುವೆ.”

    ೨೩

    قَالَ فِرۡعَوۡنُ وَمَا رَبُّ ٱلۡعَٰلَمِينَ

    ಫರೋಹ ಕೇಳಿದನು: “ಸರ್ವಲೋಕಗಳ ಪರಿಪಾಲಕ ಎಂದರೇನು?”

    ೨೪

    قَالَ رَبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَآۖ إِن كُنتُم مُّوقِنِينَ

    ಮೂಸಾ ಹೇಳಿದರು: “ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.”

    ೨೫

    قَالَ لِمَنۡ حَوۡلَهُۥٓ أَلَا تَسۡتَمِعُونَ

    ಫರೋಹ ತನ್ನ ಸುತ್ತಮುತ್ತಲಿರುವ ಜನರೊಡನೆ ಕೇಳಿದನು: “ಏನು? ನೀವು ಕಿವಿಗೊಡುವುದಿಲ್ಲವೇ?”

    ೨೬

    قَالَ رَبُّكُمۡ وَرَبُّ ءَابَآئِكُمُ ٱلۡأَوَّلِينَ

    ಮೂಸಾ ಹೇಳಿದರು: “ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕ.”

    ೨೭

    قَالَ إِنَّ رَسُولَكُمُ ٱلَّذِيٓ أُرۡسِلَ إِلَيۡكُمۡ لَمَجۡنُونٞ

    ಫರೋಹ ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ಈ ನಿಮ್ಮ ಸಂದೇಶವಾಹಕ ನಿಜಕ್ಕೂ ಒಬ್ಬ ಮಾನಸಿಕ ಅಸ್ವಸ್ಥ.”

    ೨೮

    قَالَ رَبُّ ٱلۡمَشۡرِقِ وَٱلۡمَغۡرِبِ وَمَا بَيۡنَهُمَآۖ إِن كُنتُمۡ تَعۡقِلُونَ

    ಮೂಸಾ ಹೇಳಿದರು: “ಅವನೇ ಪೂರ್ವ, ಪಶ್ಚಿಮ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ಆಲೋಚಿಸುವವರಾಗಿದ್ದರೆ.”

    ೨೯

    قَالَ لَئِنِ ٱتَّخَذۡتَ إِلَٰهًا غَيۡرِي لَأَجۡعَلَنَّكَ مِنَ ٱلۡمَسۡجُونِينَ

    ಫರೋಹ ಹೇಳಿದನು: “ನೀನು ನನ್ನನ್ನು ಬಿಟ್ಟು ಬೇರೊಬ್ಬನನ್ನು ದೇವರೆಂದು ಸ್ವೀಕರಿಸಿದರೆ ನಾನು ನಿನ್ನನ್ನು ಖಂಡಿತ ಸೆರೆಮನೆಗೆ ತಳ್ಳುವೆನು.”

    ೩೦

    قَالَ أَوَلَوۡ جِئۡتُكَ بِشَيۡءٖ مُّبِينٖ

    ಮೂಸಾ ಹೇಳಿದರು: “ಒಂದು ವೇಳೆ ನಾನು ನಿಮ್ಮ ಬಳಿಗೆ ಒಂದು ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿದರೆ (ನೀವು ನನ್ನ ಮಾತನ್ನು ನಂಬುವಿರಾ)?”

    ೩೧

    قَالَ فَأۡتِ بِهِۦٓ إِن كُنتَ مِنَ ٱلصَّٰدِقِينَ

    ಫರೋಹ ಹೇಳಿದನು: “ಸರಿ! ತಂದು ತೋರಿಸು. ನೀನು ಸತ್ಯವಂತನಾಗಿದ್ದರೆ.”

    ೩೨

    فَأَلۡقَىٰ عَصَاهُ فَإِذَا هِيَ ثُعۡبَانٞ مُّبِينٞ

    ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಅದು ತಕ್ಷಣ ಒಂದು ಸರ್ಪವಾಗಿ ಮಾರ್ಪಟ್ಟಿತು.

    ೩೩

    وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ

    ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಎಳೆದರು. ಆಗ ಅದು ನೋಡುಗರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.

    ೩೪

    قَالَ لِلۡمَلَإِ حَوۡلَهُۥٓ إِنَّ هَٰذَا لَسَٰحِرٌ عَلِيمٞ

    ಫರೋಹ ತನ್ನ ಸುತ್ತಮುತ್ತಲಿದ್ದ ಮುಖಂಡರೊಂದಿಗೆ ಹೇಳಿದನು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.

    ೩೫

    يُرِيدُ أَن يُخۡرِجَكُم مِّنۡ أَرۡضِكُم بِسِحۡرِهِۦ فَمَاذَا تَأۡمُرُونَ

    ತನ್ನ ಮಾಟಗಾರಿಕೆಯಿಂದ ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಹೇಳಿ, ನೀವೇನು ಆದೇಶಿಸುತ್ತೀರಿ?”

    ೩೬

    قَالُوٓاْ أَرۡجِهۡ وَأَخَاهُ وَٱبۡعَثۡ فِي ٱلۡمَدَآئِنِ حَٰشِرِينَ

    ಮುಖಂಡರು ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.

    ೩೭

    يَأۡتُوكَ بِكُلِّ سَحَّارٍ عَلِيمٖ

    ಅವರು ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಕರೆದುಕೊಂಡು ಬರಲಿ.”

    ೩೮

    فَجُمِعَ ٱلسَّحَرَةُ لِمِيقَٰتِ يَوۡمٖ مَّعۡلُومٖ

    ನಂತರ ಒಂದು ಸುಪರಿಚಿತ ದಿನದ ನಿಶ್ಚಿತ ಸಮಯದಲ್ಲಿ ಮಾಟಗಾರರನ್ನು ಒಟ್ಟು ಸೇರಿಸಲಾಯಿತು.

    ೩೯

    وَقِيلَ لِلنَّاسِ هَلۡ أَنتُم مُّجۡتَمِعُونَ

    ಪ್ರಜೆಗಳೊಡನೆ ಕೇಳಲಾಯಿತು: “ನೀವು ಕೂಡ ಒಟ್ಟುಗೂಡುತ್ತೀರಲ್ಲವೇ?

    ೪೦

    لَعَلَّنَا نَتَّبِعُ ٱلسَّحَرَةَ إِن كَانُواْ هُمُ ٱلۡغَٰلِبِينَ

    ಮಾಟಗಾರರು ಗೆದ್ದರೆ ನಮಗೆ ಅವರನ್ನೇ ಹಿಂಬಾಲಿಸಬಹುದು.”

    ೪೧

    فَلَمَّا جَآءَ ٱلسَّحَرَةُ قَالُواْ لِفِرۡعَوۡنَ أَئِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ

    ನಂತರ ಮಾಟಗಾರರು ಬಂದಾಗ, ಅವರು ಫರೋಹ‍ನೊಡನೆ ಕೇಳಿದರು: “ನಾವು ಗೆದ್ದರೆ ನಮಗೆ ಖಂಡಿತ ಪ್ರತಿಫಲವಿದೆಯಲ್ಲವೇ?”

    ೪೨

    قَالَ نَعَمۡ وَإِنَّكُمۡ إِذٗا لَّمِنَ ٱلۡمُقَرَّبِينَ

    ಫರೋಹ ಹೇಳಿದನು: “ಹೌದು! ನೀವು ಖಂಡಿತ ನನ್ನ ಆಪ್ತರಾಗಿ ಬಿಡುವಿರಿ.”

    ೪೩

    قَالَ لَهُم مُّوسَىٰٓ أَلۡقُواْ مَآ أَنتُم مُّلۡقُونَ

    ಮೂಸಾ ಅವರೊಡನೆ ಹೇಳಿದರು: “ನಿಮಗೆ ಎಸೆಯಲಿರುವುದನ್ನು ಎಸೆಯಿರಿ.”

    ೪೪

    فَأَلۡقَوۡاْ حِبَالَهُمۡ وَعِصِيَّهُمۡ وَقَالُواْ بِعِزَّةِ فِرۡعَوۡنَ إِنَّا لَنَحۡنُ ٱلۡغَٰلِبُونَ

    ಆಗ ಅವರು ಅವರ ಹಗ್ಗಗಳನ್ನು ಮತ್ತು ಕೋಲುಗಳನ್ನು ಎಸೆದರು. ಅವರು ಹೇಳಿದರು: “ಫರೋಹ‍ನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾವೇ ಗೆಲ್ಲುವೆವು.”

    ೪೫

    فَأَلۡقَىٰ مُوسَىٰ عَصَاهُ فَإِذَا هِيَ تَلۡقَفُ مَا يَأۡفِكُونَ

    ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಆಗ ಅಗೋ! ಅವರು ಕಣ್ಕಟ್ಟಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು.

    ೪೬

    فَأُلۡقِيَ ٱلسَّحَرَةُ سَٰجِدِينَ

    ಆಗ ಮಾಟಗಾರರು ಸಾಷ್ಟಾಂಗ ಬಿದ್ದರು.

    ೪೭

    قَالُوٓاْ ءَامَنَّا بِرَبِّ ٱلۡعَٰلَمِينَ

    ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.

    ೪೮

    رَبِّ مُوسَىٰ وَهَٰرُونَ

    ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”

    ೪೯

    قَالَ ءَامَنتُمۡ لَهُۥ قَبۡلَ أَنۡ ءَاذَنَ لَكُمۡۖ إِنَّهُۥ لَكَبِيرُكُمُ ٱلَّذِي عَلَّمَكُمُ ٱلسِّحۡرَ فَلَسَوۡفَ تَعۡلَمُونَۚ لَأُقَطِّعَنَّ أَيۡدِيَكُمۡ وَأَرۡجُلَكُم مِّنۡ خِلَٰفٖ وَلَأُصَلِّبَنَّكُمۡ أَجۡمَعِينَ

    ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ನೀವು ಸದ್ಯವೇ ತಿಳಿಯುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.

    ೫೦

    قَالُواْ لَا ضَيۡرَۖ إِنَّآ إِلَىٰ رَبِّنَا مُنقَلِبُونَ

    ಮಾಟಗಾರರು ಹೇಳಿದರು: “ಪರವಾಗಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.

    ೫೧

    إِنَّا نَطۡمَعُ أَن يَغۡفِرَ لَنَا رَبُّنَا خَطَٰيَٰنَآ أَن كُنَّآ أَوَّلَ ٱلۡمُؤۡمِنِينَ

    ನಾವು ಮೊತ್ತಮೊದಲು ವಿಶ್ವಾಸವಿಟ್ಟ ಜನರಾಗಿರುವುದರಿಂದ ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮ ಪಾಪಗಳನ್ನು ಕ್ಷಮಿಸುವನೆಂದು ನಮಗೆ ಭರವಸೆಯಿದೆ.”

    ೫೨

    ۞ وَأَوۡحَيۡنَآ إِلَىٰ مُوسَىٰٓ أَنۡ أَسۡرِ بِعِبَادِيٓ إِنَّكُم مُّتَّبَعُونَ

    ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಖಂಡಿತವಾಗಿಯೂ ಅವರು ನಿಮ್ಮನ್ನು ಹಿಂಬಾಲಿಸಿ ಬರುವರು.”

    ೫೩

    فَأَرۡسَلَ فِرۡعَوۡنُ فِي ٱلۡمَدَآئِنِ حَٰشِرِينَ

    ಆಗ ಫರೋಹ ಎಲ್ಲಾ ಪಟ್ಟಣಗಳಿಗೂ ಸೈನಿಕರನ್ನು ಕಳುಹಿಸಿದನು.

    ೫೪

    إِنَّ هَٰٓؤُلَآءِ لَشِرۡذِمَةٞ قَلِيلُونَ

    “ನಿಜಕ್ಕೂ ಇವರೊಂದು ಚಿಕ್ಕ ಸಂಖ್ಯೆಯ ಜನರು.

    ೫೫

    وَإِنَّهُمۡ لَنَا لَغَآئِظُونَ

    ಆದರೂ ಇವರು ನಮ್ಮನ್ನೇ ರೇಗಿಸುತ್ತಿದ್ದಾರೆ.

    ೫೬

    وَإِنَّا لَجَمِيعٌ حَٰذِرُونَ

    ನಿಶ್ಚಯವಾಗಿಯೂ ನಾವು ದೊಡ್ಡ ಸಂಖ್ಯೆಯಲ್ಲಿದ್ದು (ಇವರ ಪಿತೂರಿಯನ್ನು ಸೋಲಿಸಲು) ಸದಾ ಎಚ್ಚರವಾಗಿರಬೇಕಾಗಿದೆ.”

    ೫೭

    فَأَخۡرَجۡنَٰهُم مِّن جَنَّٰتٖ وَعُيُونٖ

    ಕೊನೆಗೆ ನಾವು ಅವರನ್ನು ತೋಟಗಳಿಂದ ಮತ್ತು ನೀರಿನ ತೊರೆಗಳಿಂದ ಹೊರಹಾಕಿದೆವು.

    ೫೮

    وَكُنُوزٖ وَمَقَامٖ كَرِيمٖ

    ಖಜಾನೆಗಳಿಂದ ಮತ್ತು ಉನ್ನತ ಸ್ಥಾನಮಾನಗಳಿಂದ.

    ೫೯

    كَذَٰلِكَۖ وَأَوۡرَثۡنَٰهَا بَنِيٓ إِسۡرَٰٓءِيلَ

    ಇದೇ ರೀತಿ. ನಂತರ ನಾವು ಇಸ್ರಾಯೇಲ್ ಮಕ್ಕಳನ್ನು ಆ ಎಲ್ಲಾ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು.

    ೬೦

    فَأَتۡبَعُوهُم مُّشۡرِقِينَ

    ಫರೋಹ ಮತ್ತು ಸೈನ್ಯವು ಸೂರ್ಯೋದಯವಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿದರು.

    ೬೧

    فَلَمَّا تَرَٰٓءَا ٱلۡجَمۡعَانِ قَالَ أَصۡحَٰبُ مُوسَىٰٓ إِنَّا لَمُدۡرَكُونَ

    ನಂತರ ಎರಡು ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಮೂಸಾರ ಜೊತೆಗಿದ್ದವರು ಹೇಳಿದರು: “ಅಯ್ಯೋ! ನಾವು ಸಿಕ್ಕಿಬಿದ್ದೆವು.”

    ೬೨

    قَالَ كَلَّآۖ إِنَّ مَعِيَ رَبِّي سَيَهۡدِينِ

    ಮೂಸಾ ಹೇಳಿದರು: “ಸಾಧ್ಯವೇ ಇಲ್ಲ. ನನ್ನ ಪರಿಪಾಲಕ (ಅಲ್ಲಾಹು) ನನ್ನ ಜೊತೆಯಲ್ಲೇ ಇದ್ದಾನೆ. ಅವನು ನನಗೆ ಖಂಡಿತ ದಾರಿ ತೋರಿಸುತ್ತಾನೆ.”

    ೬೩

    فَأَوۡحَيۡنَآ إِلَىٰ مُوسَىٰٓ أَنِ ٱضۡرِب بِّعَصَاكَ ٱلۡبَحۡرَۖ فَٱنفَلَقَ فَكَانَ كُلُّ فِرۡقٖ كَٱلطَّوۡدِ ٱلۡعَظِيمِ

    ಆಗ ನಾವು ಮೂಸಾರಿಗೆ, “ನಿಮ್ಮ ಕೋಲಿನಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದೇವವಾಣಿ ನೀಡಿದೆವು. ಆಗ ಸಮುದ್ರವು ಇಬ್ಭಾಗವಾಯಿತು. ಅದರ ಒಂದೊಂದು ಭಾಗವು ಬೃಹತ್ ಪರ್ವತದಂತೆ ನಿಂತಿತು.

    ೬೪

    وَأَزۡلَفۡنَا ثَمَّ ٱلۡأٓخَرِينَ

    ನಾವು ಇತರರನ್ನು (ಫರೋಹ‍ನ ಜನರನ್ನು) ಕೂಡ ಅದರ ಸಮೀಪಕ್ಕೆ ತಂದೆವು.

    ೬೫

    وَأَنجَيۡنَا مُوسَىٰ وَمَن مَّعَهُۥٓ أَجۡمَعِينَ

    ನಾವು ಮೂಸಾ ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.

    ೬೬

    ثُمَّ أَغۡرَقۡنَا ٱلۡأٓخَرِينَ

    ನಂತರ ಇತರರನ್ನು (ಫರೋಹ‍ ಮತ್ತು ಅವನ ಜನರನ್ನು) ಮುಳುಗಿಸಿ ಬಿಟ್ಟೆವು.

    ೬೭

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೬೮

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೬೯

    وَٱتۡلُ عَلَيۡهِمۡ نَبَأَ إِبۡرَٰهِيمَ

    ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ.

    ೭೦

    إِذۡ قَالَ لِأَبِيهِ وَقَوۡمِهِۦ مَا تَعۡبُدُونَ

    ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ.

    ೭೧

    قَالُواْ نَعۡبُدُ أَصۡنَامٗا فَنَظَلُّ لَهَا عَٰكِفِينَ

    ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.”

    ೭೨

    قَالَ هَلۡ يَسۡمَعُونَكُمۡ إِذۡ تَدۡعُونَ

    ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ?

    ೭೩

    أَوۡ يَنفَعُونَكُمۡ أَوۡ يَضُرُّونَ

    ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?”

    ೭೪

    قَالُواْ بَلۡ وَجَدۡنَآ ءَابَآءَنَا كَذَٰلِكَ يَفۡعَلُونَ

    ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.”

    ೭೫

    قَالَ أَفَرَءَيۡتُم مَّا كُنتُمۡ تَعۡبُدُونَ

    ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ?

    ೭೬

    أَنتُمۡ وَءَابَآؤُكُمُ ٱلۡأَقۡدَمُونَ

    ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು?

    ೭೭

    فَإِنَّهُمۡ عَدُوّٞ لِّيٓ إِلَّا رَبَّ ٱلۡعَٰلَمِينَ

    ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು.

    ೭೮

    ٱلَّذِي خَلَقَنِي فَهُوَ يَهۡدِينِ

    ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು.

    ೭೯

    وَٱلَّذِي هُوَ يُطۡعِمُنِي وَيَسۡقِينِ

    ನನಗೆ ಆಹಾರ-ಪಾನೀಯಗಳನ್ನು ನೀಡುವವನು.

    ೮೦

    وَإِذَا مَرِضۡتُ فَهُوَ يَشۡفِينِ

    ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ.

    ೮೧

    وَٱلَّذِي يُمِيتُنِي ثُمَّ يُحۡيِينِ

    ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ.

    ೮೨

    وَٱلَّذِيٓ أَطۡمَعُ أَن يَغۡفِرَ لِي خَطِيٓـَٔتِي يَوۡمَ ٱلدِّينِ

    ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು.

    ೮೩

    رَبِّ هَبۡ لِي حُكۡمٗا وَأَلۡحِقۡنِي بِٱلصَّٰلِحِينَ

    ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು.

    ೮೪

    وَٱجۡعَل لِّي لِسَانَ صِدۡقٖ فِي ٱلۡأٓخِرِينَ

    ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು.

    ೮೫

    وَٱجۡعَلۡنِي مِن وَرَثَةِ جَنَّةِ ٱلنَّعِيمِ

    ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು.

    ೮೬

    وَٱغۡفِرۡ لِأَبِيٓ إِنَّهُۥ كَانَ مِنَ ٱلضَّآلِّينَ

    ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ.

    ೮೭

    وَلَا تُخۡزِنِي يَوۡمَ يُبۡعَثُونَ

    ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ.

    ೮೮

    يَوۡمَ لَا يَنفَعُ مَالٞ وَلَا بَنُونَ

    ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ!

    ೮೯

    إِلَّا مَنۡ أَتَى ٱللَّهَ بِقَلۡبٖ سَلِيمٖ

    ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು.

    ೯೦

    وَأُزۡلِفَتِ ٱلۡجَنَّةُ لِلۡمُتَّقِينَ

    ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು.

    ೯೧

    وَبُرِّزَتِ ٱلۡجَحِيمُ لِلۡغَاوِينَ

    ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು.

    ೯೨

    وَقِيلَ لَهُمۡ أَيۡنَ مَا كُنتُمۡ تَعۡبُدُونَ

    ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು?

    ೯೩

    مِن دُونِ ٱللَّهِ هَلۡ يَنصُرُونَكُمۡ أَوۡ يَنتَصِرُونَ

    ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?”

    ೯೪

    فَكُبۡكِبُواْ فِيهَا هُمۡ وَٱلۡغَاوُۥنَ

    ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು.

    ೯೫

    وَجُنُودُ إِبۡلِيسَ أَجۡمَعُونَ

    ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು.

    ೯೬

    قَالُواْ وَهُمۡ فِيهَا يَخۡتَصِمُونَ

    ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು:

    ೯೭

    تَٱللَّهِ إِن كُنَّا لَفِي ضَلَٰلٖ مُّبِينٍ

    “ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು.

    ೯೮

    إِذۡ نُسَوِّيكُم بِرَبِّ ٱلۡعَٰلَمِينَ

    ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ.

    ೯೯

    وَمَآ أَضَلَّنَآ إِلَّا ٱلۡمُجۡرِمُونَ

    ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು.

    ೧೦೦

    فَمَا لَنَا مِن شَٰفِعِينَ

    ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ.

    ೧೦೧

    وَلَا صَدِيقٍ حَمِيمٖ

    ಆತ್ಮೀಯ ಮಿತ್ರರೂ ಇಲ್ಲ.

    ೧೦೨

    فَلَوۡ أَنَّ لَنَا كَرَّةٗ فَنَكُونَ مِنَ ٱلۡمُؤۡمِنِينَ

    ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.”

    ೧೦೩

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೦೪

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೦೫

    كَذَّبَتۡ قَوۡمُ نُوحٍ ٱلۡمُرۡسَلِينَ

    ನೂಹರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

    ೧೦೬

    إِذۡ قَالَ لَهُمۡ أَخُوهُمۡ نُوحٌ أَلَا تَتَّقُونَ

    ಅವರೊಡನೆ ಅವರ ಸಹೋದರ ನೂಹ್ ಹೇಳಿದ ಸಂದರ್ಭ.“ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೦೭

    إِنِّي لَكُمۡ رَسُولٌ أَمِينٞ

    ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

    ೧೦೮

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೦೯

    وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ

    ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

    ೧೧೦

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.”

    ೧೧೧

    ۞ قَالُوٓاْ أَنُؤۡمِنُ لَكَ وَٱتَّبَعَكَ ٱلۡأَرۡذَلُونَ

    ಅವರು ಹೇಳಿದರು: “ನಾವು ನಿನ್ನನ್ನು ಅನುಸರಿಸಬೇಕೇ? ನಿನ್ನ ಹಿಂದೆಯಿರುವುದು ಕೆಳವರ್ಗದ ಜನರು ಮಾತ್ರ.”

    ೧೧೨

    قَالَ وَمَا عِلۡمِي بِمَا كَانُواْ يَعۡمَلُونَ

    ನೂಹ್ ಹೇಳಿದರು: “ಅವರು ಮೊದಲು ಏನು ಮಾಡುತ್ತಿದ್ದರೆಂದು ನನಗೇನು ಗೊತ್ತು?

    ೧೧೩

    إِنۡ حِسَابُهُمۡ إِلَّا عَلَىٰ رَبِّيۖ لَوۡ تَشۡعُرُونَ

    ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ನನ್ನ ಪರಿಪಾಲಕನದ್ದು (ಅಲ್ಲಾಹನದ್ದು). ನಿಮಗೆ ಹಾಗೆ ಅನ್ನಿಸುತ್ತಿದ್ದರೆ!

    ೧೧೪

    وَمَآ أَنَا۠ بِطَارِدِ ٱلۡمُؤۡمِنِينَ

    ನಾನು ಸತ್ಯವಿಶ್ವಾಸಿಗಳನ್ನು ದೂರ ತಳ್ಳುವುದಿಲ್ಲ.

    ೧೧೫

    إِنۡ أَنَا۠ إِلَّا نَذِيرٞ مُّبِينٞ

    ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.”

    ೧೧೬

    قَالُواْ لَئِن لَّمۡ تَنتَهِ يَٰنُوحُ لَتَكُونَنَّ مِنَ ٱلۡمَرۡجُومِينَ

    ಅವರು ಹೇಳಿದರು: “ಓ ನೂಹ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುವೆವು.”

    ೧೧೭

    قَالَ رَبِّ إِنَّ قَوۡمِي كَذَّبُونِ

    ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿದ್ದಾರೆ.

    ೧೧೮

    فَٱفۡتَحۡ بَيۡنِي وَبَيۡنَهُمۡ فَتۡحٗا وَنَجِّنِي وَمَن مَّعِيَ مِنَ ٱلۡمُؤۡمِنِينَ

    ಆದ್ದರಿಂದ ನನ್ನ ಮತ್ತು ಅವರ ನಡುವೆ ನಿರ್ಣಾಯಕವಾದ ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು.”

    ೧೧೯

    فَأَنجَيۡنَٰهُ وَمَن مَّعَهُۥ فِي ٱلۡفُلۡكِ ٱلۡمَشۡحُونِ

    ಆಗ ನಾವು ಅವರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ತುಂಬಿ ತುಳುಕುವ ನಾವೆಯಲ್ಲಿ ರಕ್ಷಿಸಿದೆವು.

    ೧೨೦

    ثُمَّ أَغۡرَقۡنَا بَعۡدُ ٱلۡبَاقِينَ

    ನಂತರ, ಉಳಿದವರನ್ನು ಮುಳುಗಿಸಿ ಕೊಂದೆವು.

    ೧೨೧

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೨೨

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೨೩

    كَذَّبَتۡ عَادٌ ٱلۡمُرۡسَلِينَ

    ಆದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

    ೧೨೪

    إِذۡ قَالَ لَهُمۡ أَخُوهُمۡ هُودٌ أَلَا تَتَّقُونَ

    ಅವರೊಡನೆ ಅವರ ಸಹೋದರ ಹೂದ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೨೫

    إِنِّي لَكُمۡ رَسُولٌ أَمِينٞ

    ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

    ೧೨೬

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೨೭

    وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ

    ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

    ೧೨೮

    أَتَبۡنُونَ بِكُلِّ رِيعٍ ءَايَةٗ تَعۡبَثُونَ

    ನೀವು ಎಲ್ಲಾ ಗುಡ್ಡಗಳಲ್ಲೂ ಮೋಜು ಮಸ್ತಿಗಾಗಿ ನಿಶಾನಿಗಳನ್ನು (ಕಟ್ಟಡಗಳನ್ನು) ನಿರ್ಮಿಸುತ್ತಿದ್ದೀರಾ?

    ೧೨೯

    وَتَتَّخِذُونَ مَصَانِعَ لَعَلَّكُمۡ تَخۡلُدُونَ

    ನೀವು ಮಹಾ ರಚನೆಗಳನ್ನು (ಭವ್ಯ ಸೌಧಗಳನ್ನು) ನಿರ್ಮಿಸುತ್ತಿದ್ದೀರಾ? ನೀವು ಇಲ್ಲೇ ಶಾಶ್ವತವಾಗಿ ವಾಸಿಸುವಿರಿ ಎಂಬ ಕಲ್ಪನೆಯಲ್ಲಿ?

    ೧೩೦

    وَإِذَا بَطَشۡتُم بَطَشۡتُمۡ جَبَّارِينَ

    ನೀವು ಯಾರನ್ನಾದರೂ ಹಿಡಿಯುವಾಗ ಬಹಳ ಕಠೋರವಾಗಿ ಹಿಡಿಯುತ್ತೀರಿ.

    ೧೩೧

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೩೨

    وَٱتَّقُواْ ٱلَّذِيٓ أَمَدَّكُم بِمَا تَعۡلَمُونَ

    ನಿಮಗೆ ತಿಳಿದೇ ಇರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದವನನ್ನು (ಅಲ್ಲಾಹನನ್ನು) ಭಯಪಡಿರಿ.

    ೧೩೩

    أَمَدَّكُم بِأَنۡعَٰمٖ وَبَنِينَ

    ಅವನು ನಿಮಗೆ ಜಾನುವಾರುಗಳು ಮತ್ತು ಮಕ್ಕಳು-ಮರಿಗಳನ್ನು ನೀಡಿ ಸಹಾಯ ಮಾಡಿದ್ದಾನೆ.

    ೧೩೪

    وَجَنَّٰتٖ وَعُيُونٍ

    ತೋಟಗಳು ಮತ್ತು ಚಿಲುಮೆಗಳನ್ನು ನೀಡಿ.

    ೧೩೫

    إِنِّيٓ أَخَافُ عَلَيۡكُمۡ عَذَابَ يَوۡمٍ عَظِيمٖ

    ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.”

    ೧೩೬

    قَالُواْ سَوَآءٌ عَلَيۡنَآ أَوَعَظۡتَ أَمۡ لَمۡ تَكُن مِّنَ ٱلۡوَٰعِظِينَ

    ಅವರು ಹೇಳಿದರು: “ನೀನು ನಮಗೆ ಉಪದೇಶ ಮಾಡಿದರೂ ಅಥವಾ ಉಪದೇಶ ಮಾಡದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ.

    ೧೩೭

    إِنۡ هَٰذَآ إِلَّا خُلُقُ ٱلۡأَوَّلِينَ

    ಇದು ಪ್ರಾಚೀನ ಕಾಲದ ಜನರ ವರ್ತನೆಯಾಗಿದೆ.

    ೧೩೮

    وَمَا نَحۡنُ بِمُعَذَّبِينَ

    ನಾವು ಎಂದಿಗೂ ಶಿಕ್ಷೆಗೆ ಗುರಿಯಾಗುವುದಿಲ್ಲ.”

    ೧೩೯

    فَكَذَّبُوهُ فَأَهۡلَكۡنَٰهُمۡۚ إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ಅವರು ಹೂದರನ್ನು ನಿಷೇಧಿಸಿದರು. ಆದ್ದರಿಂದ ನಾವು ಅವರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೪೦

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೪೧

    كَذَّبَتۡ ثَمُودُ ٱلۡمُرۡسَلِينَ

    ಸಮೂದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

    ೧೪೨

    إِذۡ قَالَ لَهُمۡ أَخُوهُمۡ صَٰلِحٌ أَلَا تَتَّقُونَ

    ಅವರೊಡನೆ ಅವರ ಸಹೋದರ ಸಾಲಿಹ್ ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೪೩

    إِنِّي لَكُمۡ رَسُولٌ أَمِينٞ

    ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

    ೧೪೪

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೪೫

    وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ

    ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

    ೧೪೬

    أَتُتۡرَكُونَ فِي مَا هَٰهُنَآ ءَامِنِينَ

    ಇಲ್ಲಿರುವ ವಸ್ತುಗಳೊಂದಿಗೆ ನಿರ್ಭಯದಿಂದ ಜೀವಿಸಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ?

    ೧೪೭

    فِي جَنَّٰتٖ وَعُيُونٖ

    ಅಂದರೆ ಈ ತೋಟಗಳು ಮತ್ತು ಕಾಲುವೆಗಳೊಂದಿಗೆ.

    ೧೪೮

    وَزُرُوعٖ وَنَخۡلٖ طَلۡعُهَا هَضِيمٞ

    ಈ ಹೊಲಗಳು ಮತ್ತು ಮೃದು ಹಾಗೂ ರುಚಿಯಾದ ಹಣ್ಣುಗಳಿರುವ ಖರ್ಜೂರದ ಮರಗಳೊಂದಿಗೆ.

    ೧೪೯

    وَتَنۡحِتُونَ مِنَ ٱلۡجِبَالِ بُيُوتٗا فَٰرِهِينَ

    ನೀವು ಕೌಶಲ್ಯದಿಂದ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.

    ೧೫೦

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೫೧

    وَلَا تُطِيعُوٓاْ أَمۡرَ ٱلۡمُسۡرِفِينَ

    ಹದ್ದು ಮೀರಿದವರ ಆಜ್ಞೆಗಳನ್ನು ಅನುಸರಿಸಬೇಡಿ.

    ೧೫೨

    ٱلَّذِينَ يُفۡسِدُونَ فِي ٱلۡأَرۡضِ وَلَا يُصۡلِحُونَ

    ಅವರು ಯಾರೆಂದರೆ, ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು; ಸುಧಾರಣೆ ಮಾಡದವರು.”

    ೧೫೩

    قَالُوٓاْ إِنَّمَآ أَنتَ مِنَ ٱلۡمُسَحَّرِينَ

    ಅವರು ಹೇಳಿದರು: “ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.

    ೧೫೪

    مَآ أَنتَ إِلَّا بَشَرٞ مِّثۡلُنَا فَأۡتِ بِـَٔايَةٍ إِن كُنتَ مِنَ ٱلصَّٰدِقِينَ

    ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನೀನು ಸತ್ಯವನ್ನೇ ಹೇಳುತ್ತಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಂದು ತೋರಿಸು.”

    ೧೫೫

    قَالَ هَٰذِهِۦ نَاقَةٞ لَّهَا شِرۡبٞ وَلَكُمۡ شِرۡبُ يَوۡمٖ مَّعۡلُومٖ

    ಸಾಲಿಹ್ ಹೇಳಿದರು: “ನೋಡಿ! ಇದು ಒಂಟೆ. ಇದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಕೂಡ ನೀರು ಕುಡಿಯುವ ಒಂದು ನಿಶ್ಚಿತ ದಿನವಿದೆ.

    ೧೫೬

    وَلَا تَمَسُّوهَا بِسُوٓءٖ فَيَأۡخُذَكُمۡ عَذَابُ يَوۡمٍ عَظِيمٖ

    ಆದ್ದರಿಂದ ಇದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಭಯಾನಕ ದಿನದ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.”

    ೧೫೭

    فَعَقَرُوهَا فَأَصۡبَحُواْ نَٰدِمِينَ

    ಆದರೂ ಅವರು ಅದರ ಕಾಲುಗಳನ್ನು ಕಡಿದು ಸಾಯಿಸಿದರು. ನಂತರ (ಶಿಕ್ಷೆಯನ್ನು ಕಂಡಾಗ) ಅವರು ಮರುಗಿದರು.

    ೧೫೮

    فَأَخَذَهُمُ ٱلۡعَذَابُۚ إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ಶಿಕ್ಷೆಯು ಅವರನ್ನು ಹಿಡಿದು ಬಿಟ್ಟಿತು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೫೯

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೬೦

    كَذَّبَتۡ قَوۡمُ لُوطٍ ٱلۡمُرۡسَلِينَ

    ಲೂತರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.

    ೧೬೧

    إِذۡ قَالَ لَهُمۡ أَخُوهُمۡ لُوطٌ أَلَا تَتَّقُونَ

    ಅವರೊಡನೆ ಅವರ ಸಹೋದರ ಲೂತ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೬೨

    إِنِّي لَكُمۡ رَسُولٌ أَمِينٞ

    ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

    ೧೬೩

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೬೪

    وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ

    ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

    ೧೬೫

    أَتَأۡتُونَ ٱلذُّكۡرَانَ مِنَ ٱلۡعَٰلَمِينَ

    ನೀವು (ತೆವಲು ತೀರಿಸಿಕೊಳ್ಳಲು) ಸರ್ವಲೋಕದವರ ಪೈಕಿ ಕೇವಲ ಪುರುಷರ ಬಳಿಗೆ ಹೋಗುತ್ತೀರಾ?

    ೧೬೬

    وَتَذَرُونَ مَا خَلَقَ لَكُمۡ رَبُّكُم مِّنۡ أَزۡوَٰجِكُمۚ بَلۡ أَنتُمۡ قَوۡمٌ عَادُونَ

    ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ಬಿಟ್ಟುಬಿಡುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಹದ್ದು ಮೀರಿದ ಜನರಾಗಿದ್ದೀರಿ.”

    ೧೬೭

    قَالُواْ لَئِن لَّمۡ تَنتَهِ يَٰلُوطُ لَتَكُونَنَّ مِنَ ٱلۡمُخۡرَجِينَ

    ಅವರು ಹೇಳಿದರು: “ಓ ಲೂತ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಖಂಡಿತ ಊರಿನಿಂದ ಓಡಿಸುವೆವು.”

    ೧೬೮

    قَالَ إِنِّي لِعَمَلِكُم مِّنَ ٱلۡقَالِينَ

    ಲೂತ್ ಹೇಳಿದರು: “ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಈ ಕೃತ್ಯವನ್ನು ನಾನು ಬಹಳ ದ್ವೇಷಿಸುತ್ತೇನೆ.

    ೧೬೯

    رَبِّ نَجِّنِي وَأَهۡلِي مِمَّا يَعۡمَلُونَ

    ಓ ನನ್ನ ಪರಿಪಾಲಕನೇ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುವ ಈ ಕೃತ್ಯದಿಂದ ರಕ್ಷಿಸು.”

    ೧೭೦

    فَنَجَّيۡنَٰهُ وَأَهۡلَهُۥٓ أَجۡمَعِينَ

    ಆದ್ದರಿಂದ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು.

    ೧೭೧

    إِلَّا عَجُوزٗا فِي ٱلۡغَٰبِرِينَ

    ಒಬ್ಬ ಮುದುಕಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದಳು.

    ೧೭೨

    ثُمَّ دَمَّرۡنَا ٱلۡأٓخَرِينَ

    ನಂತರ ನಾವು ಅವರೆಲ್ಲರನ್ನೂ ನಾಶ ಮಾಡಿದೆವು.

    ೧೭೩

    وَأَمۡطَرۡنَا عَلَيۡهِم مَّطَرٗاۖ فَسَآءَ مَطَرُ ٱلۡمُنذَرِينَ

    ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ.

    ೧೭೪

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೭೫

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೭೬

    كَذَّبَ أَصۡحَٰبُ لۡـَٔيۡكَةِ ٱلۡمُرۡسَلِينَ

    ಐಕತ್‌ನ ಜನರು (ಮದ್ಯನ್ ದೇಶದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.

    ೧೭೭

    إِذۡ قَالَ لَهُمۡ شُعَيۡبٌ أَلَا تَتَّقُونَ

    ಅವರೊಡನೆ ಶುಐಬರು ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

    ೧೭೮

    إِنِّي لَكُمۡ رَسُولٌ أَمِينٞ

    ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.

    ೧೭೯

    فَٱتَّقُواْ ٱللَّهَ وَأَطِيعُونِ

    ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

    ೧೮೦

    وَمَآ أَسۡـَٔلُكُمۡ عَلَيۡهِ مِنۡ أَجۡرٍۖ إِنۡ أَجۡرِيَ إِلَّا عَلَىٰ رَبِّ ٱلۡعَٰلَمِينَ

    ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.

    ೧೮೧

    ۞ أَوۡفُواْ ٱلۡكَيۡلَ وَلَا تَكُونُواْ مِنَ ٱلۡمُخۡسِرِينَ

    ಅಳತೆಯನ್ನು ಪೂರ್ತಿಯಾಗಿ ಕೊಡಿ. ಜನರಿಗೆ ನಷ್ಟ ಮಾಡುವವರಲ್ಲಿ ಸೇರಬೇಡಿ.

    ೧೮೨

    وَزِنُواْ بِٱلۡقِسۡطَاسِ ٱلۡمُسۡتَقِيمِ

    ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ.

    ೧೮೩

    وَلَا تَبۡخَسُواْ ٱلنَّاسَ أَشۡيَآءَهُمۡ وَلَا تَعۡثَوۡاْ فِي ٱلۡأَرۡضِ مُفۡسِدِينَ

    ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಬೇಡಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ.

    ೧೮೪

    وَٱتَّقُواْ ٱلَّذِي خَلَقَكُمۡ وَٱلۡجِبِلَّةَ ٱلۡأَوَّلِينَ

    ನಿಮ್ಮನ್ನು ಮತ್ತು ನಿಮಗಿಂತ ಮೊದಲಿನ ಜನರನ್ನು ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ.”

    ೧೮೫

    قَالُوٓاْ إِنَّمَآ أَنتَ مِنَ ٱلۡمُسَحَّرِينَ

    ಅವರು ಹೇಳಿದರು: “ನಿಶ್ಚಯವಾಗಿಯೂ ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.

    ೧೮೬

    وَمَآ أَنتَ إِلَّا بَشَرٞ مِّثۡلُنَا وَإِن نَّظُنُّكَ لَمِنَ ٱلۡكَٰذِبِينَ

    ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀಯೆಂದೇ ನಾವು ಭಾವಿಸುತ್ತೇವೆ.

    ೧೮೭

    فَأَسۡقِطۡ عَلَيۡنَا كِسَفٗا مِّنَ ٱلسَّمَآءِ إِن كُنتَ مِنَ ٱلصَّٰدِقِينَ

    ನೀನು ಹೇಳುವುದು ನಿಜವೇ ಆಗಿದ್ದರೆ ಆಕಾಶದಿಂದ (ನಮ್ಮ ಮೇಲೆ) ತುಣುಕುಗಳು ಬೀಳುವಂತೆ ಮಾಡು.”

    ೧೮೮

    قَالَ رَبِّيٓ أَعۡلَمُ بِمَا تَعۡمَلُونَ

    ಶುಐಬ್ ಹೇಳಿದರು: “ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.”

    ೧೮೯

    فَكَذَّبُوهُ فَأَخَذَهُمۡ عَذَابُ يَوۡمِ ٱلظُّلَّةِۚ إِنَّهُۥ كَانَ عَذَابَ يَوۡمٍ عَظِيمٍ

    ಅವರು ಶುಐಬರನ್ನು ನಿಷೇಧಿಸಿದರು. ಆದ್ದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು. ನಿಜಕ್ಕೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು.

    ೧೯೦

    إِنَّ فِي ذَٰلِكَ لَأٓيَةٗۖ وَمَا كَانَ أَكۡثَرُهُم مُّؤۡمِنِينَ

    ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.

    ೧೯೧

    وَإِنَّ رَبَّكَ لَهُوَ ٱلۡعَزِيزُ ٱلرَّحِيمُ

    ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.

    ೧೯೨

    وَإِنَّهُۥ لَتَنزِيلُ رَبِّ ٱلۡعَٰلَمِينَ

    ನಿಶ್ಚಯವಾಗಿಯೂ ಈ ಕುರ್‌ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.

    ೧೯೩

    نَزَلَ بِهِ ٱلرُّوحُ ٱلۡأَمِينُ

    ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ.

    ೧೯೪

    عَلَىٰ قَلۡبِكَ لِتَكُونَ مِنَ ٱلۡمُنذِرِينَ

    ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು.

    ೧೯೫

    بِلِسَانٍ عَرَبِيّٖ مُّبِينٖ

    ಸ್ಪಷ್ಟ ಅರಬ್ಬಿ ಭಾಷೆಯಲ್ಲಿ.

    ೧೯೬

    وَإِنَّهُۥ لَفِي زُبُرِ ٱلۡأَوَّلِينَ

    ನಿಶ್ಚಯವಾಗಿಯೂ ಪೂರ್ವಕಾಲದವರ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ.

    ೧೯೭

    أَوَلَمۡ يَكُن لَّهُمۡ ءَايَةً أَن يَعۡلَمَهُۥ عُلَمَٰٓؤُاْ بَنِيٓ إِسۡرَٰٓءِيلَ

    ಇಸ್ರಾಯೇಲ್ ಮಕ್ಕಳಲ್ಲಿರುವ ವಿದ್ವಾಂಸರು ಕೂಡ ಇದರ ಸತ್ಯತೆಯನ್ನು ತಿಳಿದಿದ್ದಾರೆ ಎನ್ನುವುದು ಇವರಿಗೆ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಾಗುವುದಿಲ್ಲವೇ?

    ೧೯೮

    وَلَوۡ نَزَّلۡنَٰهُ عَلَىٰ بَعۡضِ ٱلۡأَعۡجَمِينَ

    ನಾವು ಅದನ್ನು ಅರಬ್ಬೇತರ ವ್ಯಕ್ತಿಗೆ ಅವತೀರ್ಣಗೊಳಿಸಿ,

    ೧೯೯

    فَقَرَأَهُۥ عَلَيۡهِم مَّا كَانُواْ بِهِۦ مُؤۡمِنِينَ

    ನಂತರ ಆತ ಅದನ್ನು ಇವರಿಗೆ ಓದಿಕೊಟ್ಟರೂ ಇವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.

    ೨೦೦

    كَذَٰلِكَ سَلَكۡنَٰهُ فِي قُلُوبِ ٱلۡمُجۡرِمِينَ

    ಈ ರೀತಿ ನಾವು ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಸತ್ಯನಿಷೇಧವನ್ನು) ತೂರಿಸಿದ್ದೇವೆ.

    ೨೦೧

    لَا يُؤۡمِنُونَ بِهِۦ حَتَّىٰ يَرَوُاْ ٱلۡعَذَابَ ٱلۡأَلِيمَ

    ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.

    ೨೦೨

    فَيَأۡتِيَهُم بَغۡتَةٗ وَهُمۡ لَا يَشۡعُرُونَ

    ಅದು ಹಠಾತ್ತನೆ ಅವರ ಬಳಿಗೆ ಬರುತ್ತದೆ. ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.

    ೨೦೩

    فَيَقُولُواْ هَلۡ نَحۡنُ مُنظَرُونَ

    ಅವರು ಕೇಳುತ್ತಾರೆ: “ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?”

    ೨೦೪

    أَفَبِعَذَابِنَا يَسۡتَعۡجِلُونَ

    ಹಾಗಾದರೆ ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?

    ೨೦೫

    أَفَرَءَيۡتَ إِن مَّتَّعۡنَٰهُمۡ سِنِينَ

    ನೀವು ಆಲೋಚಿಸಿ ನೋಡಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸವಲತ್ತುಗಳನ್ನು ನೀಡಿ,

    ೨೦೬

    ثُمَّ جَآءَهُم مَّا كَانُواْ يُوعَدُونَ

    ನಂತರ ಅವರಿಗೆ ವಾಗ್ದಾನ ಮಾಡಲಾದ ಶಿಕ್ಷೆಯು ಅವರ ಬಳಿಗೆ ಬಂದರೆ,

    ೨೦೭

    مَآ أَغۡنَىٰ عَنۡهُم مَّا كَانُواْ يُمَتَّعُونَ

    ಅವರಿಗೆ ನೀಡಲಾದ ಯಾವುದೇ ಸವಲತ್ತುಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ.

    ೨೦೮

    وَمَآ أَهۡلَكۡنَا مِن قَرۡيَةٍ إِلَّا لَهَا مُنذِرُونَ

    ನಾವು ಯಾವುದೇ ಊರನ್ನು, ಅದಕ್ಕೆ ಮುನ್ನೆಚ್ಚರಿಕೆ ನೀಡುವವರನ್ನು (ಪ್ರವಾದಿಗಳನ್ನು) ಕಳುಹಿಸಿದ ನಂತರವಲ್ಲದೆ ನಾಶ ಮಾಡಿಲ್ಲ.

    ೨೦೯

    ذِكۡرَىٰ وَمَا كُنَّا ظَٰلِمِينَ

    ಇದೊಂದು ಉಪದೇಶ ಮಾತ್ರ. ನಾವು ಎಂದಿಗೂ ಅನ್ಯಾಯ ಮಾಡುವುದಿಲ್ಲ.

    ೨೧೦

    وَمَا تَنَزَّلَتۡ بِهِ ٱلشَّيَٰطِينُ

    ಶೈತಾನರು ಈ ಕುರ್‌ಆನನ್ನು ತಂದಿಲ್ಲ.

    ೨೧೧

    وَمَا يَنۢبَغِي لَهُمۡ وَمَا يَسۡتَطِيعُونَ

    ಅದು ಅವರಿಗೆ ಯೋಗ್ಯವೂ ಅಲ್ಲ. ಅವರಿಗೆ ಅಂತಹ ಸಾಮರ್ಥ್ಯವೂ ಇಲ್ಲ.

    ೨೧೨

    إِنَّهُمۡ عَنِ ٱلسَّمۡعِ لَمَعۡزُولُونَ

    ವಾಸ್ತವವಾಗಿ, ಅವರನ್ನು (ದೇವವಾಣಿಗೆ) ಕಿವಿಗೊಡದಂತೆ ದೂರ ಸರಿಸಲಾಗಿದೆ.

    ೨೧೩

    فَلَا تَدۡعُ مَعَ ٱللَّهِ إِلَٰهًا ءَاخَرَ فَتَكُونَ مِنَ ٱلۡمُعَذَّبِينَ

    ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಹಾಗೇನಾದರೂ ಆದರೆ ನೀವು ಶಿಕ್ಷಗೆ ಗುರಿಯಾದವರಲ್ಲಿ ಸೇರುವಿರಿ.

    ೨೧೪

    وَأَنذِرۡ عَشِيرَتَكَ ٱلۡأَقۡرَبِينَ

    ನಿಮ್ಮ ಹತ್ತಿರದ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.

    ೨೧೫

    وَٱخۡفِضۡ جَنَاحَكَ لِمَنِ ٱتَّبَعَكَ مِنَ ٱلۡمُؤۡمِنِينَ

    ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿ (ಅವರೊಡನೆ ಸೌಮ್ಯವಾಗಿ ವರ್ತಿಸಿ).

    ೨೧೬

    فَإِنۡ عَصَوۡكَ فَقُلۡ إِنِّي بَرِيٓءٞ مِّمَّا تَعۡمَلُونَ

    ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಹೇಳಿರಿ: “ನೀವು ಮಾಡುವ ಕರ್ಮಗಳಿಗೆ ನಾನು ಹೊಣೆಯಲ್ಲ.”

    ೨೧೭

    وَتَوَكَّلۡ عَلَى ٱلۡعَزِيزِ ٱلرَّحِيمِ

    ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ.

    ೨೧೮

    ٱلَّذِي يَرَىٰكَ حِينَ تَقُومُ

    ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು.

    ೨೧೯

    وَتَقَلُّبَكَ فِي ٱلسَّٰجِدِينَ

    ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ.

    ೨೨೦

    إِنَّهُۥ هُوَ ٱلسَّمِيعُ ٱلۡعَلِيمُ

    ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಸರ್ವಜ್ಞನಾಗಿದ್ದಾನೆ.

    ೨೨೧

    هَلۡ أُنَبِّئُكُمۡ عَلَىٰ مَن تَنَزَّلُ ٱلشَّيَٰطِينُ

    ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?

    ೨೨೨

    تَنَزَّلُ عَلَىٰ كُلِّ أَفَّاكٍ أَثِيمٖ

    ಪ್ರತಿಯೊಬ್ಬ ಸುಳ್ಳುಗಾರ ಪಾಪಿಯ ಮೇಲೆ ಅವರು ಇಳಿಯುತ್ತಾರೆ.

    ೨೨೩

    يُلۡقُونَ ٱلسَّمۡعَ وَأَكۡثَرُهُمۡ كَٰذِبُونَ

    ಅವರು ಕೇಳಿದ್ದೆಲ್ಲವನ್ನೂ ತಲುಪಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳರಾಗಿದ್ದಾರೆ.

    ೨೨೪

    وَٱلشُّعَرَآءُ يَتَّبِعُهُمُ ٱلۡغَاوُۥنَ

    ಕವಿಗಳನ್ನು ದುರ್ಮಾರ್ಗಿಗಳು ಹಿಂಬಾಲಿಸುತ್ತಾರೆ.

    ೨೨೫

    أَلَمۡ تَرَ أَنَّهُمۡ فِي كُلِّ وَادٖ يَهِيمُونَ

    ಅವರು (ಕವಿಗಳು) ಎಲ್ಲ ಕಣಿವೆಗಳಲ್ಲೂ ವಿಹರಿಸುವುದನ್ನು ನೀವು ನೋಡಿಲ್ಲವೇ?

    ೨೨೬

    وَأَنَّهُمۡ يَقُولُونَ مَا لَا يَفۡعَلُونَ

    ಅವರು ಮಾಡದ ಕೆಲಸಗಳನ್ನು ಅವರು ಹೇಳುತ್ತಾರೆ.

    ೨೨೭

    إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَذَكَرُواْ ٱللَّهَ كَثِيرٗا وَٱنتَصَرُواْ مِنۢ بَعۡدِ مَا ظُلِمُواْۗ وَسَيَعۡلَمُ ٱلَّذِينَ ظَلَمُوٓاْ أَيَّ مُنقَلَبٖ يَنقَلِبُونَ

    ಆದರೆ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರು, ಮರ್ದನಕ್ಕೊಳಗಾದ ಬಳಿಕ ಪ್ರತೀಕಾರ ಪಡೆಯುವವರು ಇದರಿಂದ ಹೊರತಾಗಿದ್ದಾರೆ. ಅಕ್ರಮವೆಸಗಿದವರು ಸದ್ಯವೇ ಅವರು ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ತಿಳಿದುಕೊಳ್ಳುವರು.

    Ash-Shuara

    Play