Surah Al-Muminun in Kannada

    المؤمنون

    Surah Al-Muminun in Kannada

    Read Surah Al-Muminun in Kannada (المؤمنون) with Arabic text, Kannada translation, and audio recitation. Chapter 23 of the Holy Quran, 118 verses — free online.

    ಕನ್ನಡದಲ್ಲಿ ಕುರ್‌ಆನ್ · all 114 ಸೂರಃs

    قَدۡ أَفۡلَحَ ٱلۡمُؤۡمِنُونَ

    ಸತ್ಯವಿಶ್ವಾಸಿಗಳು ಯಶಸ್ವಿಯಾದರು.

    ٱلَّذِينَ هُمۡ فِي صَلَاتِهِمۡ خَٰشِعُونَ

    ಅವರು ಯಾರೆಂದರೆ, ತಮ್ಮ ನಮಾಝ್‍ನಲ್ಲಿ ವಿನಮ್ರತೆಯಿರುವವರು.

    وَٱلَّذِينَ هُمۡ عَنِ ٱللَّغۡوِ مُعۡرِضُونَ

    ಅನಗತ್ಯ ವಿಷಯಗಳಿಂದ ವಿಮುಖರಾಗುವವರು.

    وَٱلَّذِينَ هُمۡ لِلزَّكَوٰةِ فَٰعِلُونَ

    ಝಕಾತ್ ನೀಡುವವರು.

    وَٱلَّذِينَ هُمۡ لِفُرُوجِهِمۡ حَٰفِظُونَ

    ತಮ್ಮ ಗುಹ್ಯಭಾಗಗಳನ್ನು (ಅನೈತಿಕ ಸಂಗದಿಂದ) ಕಾಪಾಡುವವರು.

    إِلَّا عَلَىٰٓ أَزۡوَٰجِهِمۡ أَوۡ مَا مَلَكَتۡ أَيۡمَٰنُهُمۡ فَإِنَّهُمۡ غَيۡرُ مَلُومِينَ

    ತಮ್ಮ ಮಡದಿಯರು ಅಥವಾ ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಜೊತೆಗೆ ಹೊರತು. ಇವರು ಆಕ್ಷೇಪಾರ್ಹರಲ್ಲ.

    فَمَنِ ٱبۡتَغَىٰ وَرَآءَ ذَٰلِكَ فَأُوْلَٰٓئِكَ هُمُ ٱلۡعَادُونَ

    ಆದರೆ ಯಾರು ಇವರ ಹೊರತಾದವರನ್ನು ಹುಡುಕುತ್ತಾರೋ ಅವರೇ ಅತಿರೇಕಿಗಳು.

    وَٱلَّذِينَ هُمۡ لِأَمَٰنَٰتِهِمۡ وَعَهۡدِهِمۡ رَٰعُونَ

    ಅವರು ಯಾರೆಂದರೆ, ತಮ್ಮ ವಿಶ್ವಸ್ಥತೆಯನ್ನು ಮತ್ತು ಕರಾರುಗಳನ್ನು ಕಾಪಾಡುವವರು.

    وَٱلَّذِينَ هُمۡ عَلَىٰ صَلَوَٰتِهِمۡ يُحَافِظُونَ

    ತಮ್ಮ ನಮಾಝ್‍ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವವರು.

    ೧೦

    أُوْلَٰٓئِكَ هُمُ ٱلۡوَٰرِثُونَ

    ಅವರೇ ವಾರಸುದಾರರು.

    ೧೧

    ٱلَّذِينَ يَرِثُونَ ٱلۡفِرۡدَوۡسَ هُمۡ فِيهَا خَٰلِدُونَ

    ಅಂದರೆ, ಅತ್ಯುನ್ನತ ಸ್ವರ್ಗವನ್ನು (ಫಿರ್ದೌಸ್) ವಾರೀಸಾಗಿ ಪಡೆಯುವವರು. ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.

    ೧೨

    وَلَقَدۡ خَلَقۡنَا ٱلۡإِنسَٰنَ مِن سُلَٰلَةٖ مِّن طِينٖ

    ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಜೇಡಿಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.

    ೧೩

    ثُمَّ جَعَلۡنَٰهُ نُطۡفَةٗ فِي قَرَارٖ مَّكِينٖ

    ನಂತರ ಅವನನ್ನು ವೀರ್ಯವಾಗಿ ಮಾಡಿ ಒಂದು ಭದ್ರ ಸ್ಥಳದಲ್ಲಿಟ್ಟೆವು.

    ೧೪

    ثُمَّ خَلَقۡنَا ٱلنُّطۡفَةَ عَلَقَةٗ فَخَلَقۡنَا ٱلۡعَلَقَةَ مُضۡغَةٗ فَخَلَقۡنَا ٱلۡمُضۡغَةَ عِظَٰمٗا فَكَسَوۡنَا ٱلۡعِظَٰمَ لَحۡمٗا ثُمَّ أَنشَأۡنَٰهُ خَلۡقًا ءَاخَرَۚ فَتَبَارَكَ ٱللَّهُ أَحۡسَنُ ٱلۡخَٰلِقِينَ

    ನಂತರ ಆ ವೀರ್ಯವನ್ನು ಹೆಪ್ಪುಗಟ್ಟಿದ ರಕ್ತಪಿಂಡವಾಗಿ ಮಾಡಿದೆವು. ನಂತರ ಆ ರಕ್ತಪಿಂಡವನ್ನು ಮಾಂಸದ ಮುದ್ದೆಯಾಗಿ ಮಾಡಿದೆವು. ನಂತರ ಆ ಮಾಂಸದ ಮುದ್ದೆಯನ್ನು ಮೂಳೆಗಳಾಗಿ ಮಾಡಿದೆವು. ನಂತರ ಆ ಮೂಳೆಗಳನ್ನು ಮಾಂಸದಿಂದ ಹೊದಿಸಿದೆವು. ನಂತರ ಅದನ್ನು ಇನ್ನೊಂದು ಸೃಷ್ಟಿಯಾಗಿ ಬೆಳೆಸಿದೆವು. ಆದ್ದರಿಂದ ಅತ್ಯುತ್ತಮ ಸೃಷ್ಟಿಕರ್ತನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.

    ೧೫

    ثُمَّ إِنَّكُم بَعۡدَ ذَٰلِكَ لَمَيِّتُونَ

    ನಂತರ ಅದರ ಬಳಿಕ ನೀವು ಖಂಡಿತ ಸಾಯುವಿರಿ.

    ೧೬

    ثُمَّ إِنَّكُمۡ يَوۡمَ ٱلۡقِيَٰمَةِ تُبۡعَثُونَ

    ನಂತರ ಪುನರುತ್ಥಾನ ದಿನದಂದು ನಿಮ್ಮನ್ನು ಖಂಡಿತ ಜೀವ ನೀಡಿ ಎಬ್ಬಿಸಲಾಗುವುದು.

    ೧೭

    وَلَقَدۡ خَلَقۡنَا فَوۡقَكُمۡ سَبۡعَ طَرَآئِقَ وَمَا كُنَّا عَنِ ٱلۡخَلۡقِ غَٰفِلِينَ

    ನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಆಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಸೃಷ್ಟಿಯ ಬಗ್ಗೆ ಯಾವತ್ತೂ ನಿರ್ಲಕ್ಷ್ಯರಾಗಿರಲಿಲ್ಲ.

    ೧೮

    وَأَنزَلۡنَا مِنَ ٱلسَّمَآءِ مَآءَۢ بِقَدَرٖ فَأَسۡكَنَّٰهُ فِي ٱلۡأَرۡضِۖ وَإِنَّا عَلَىٰ ذَهَابِۭ بِهِۦ لَقَٰدِرُونَ

    ನಾವು ಆಕಾಶದಿಂದ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯನ್ನು ಸುರಿಸಿ, ಅದನ್ನು ಭೂಮಿಯಲ್ಲಿ ತಂಗುವಂತೆ ಮಾಡಿದೆವು. ಅದನ್ನು ಇಂಗಿ ಹೋಗುವಂತೆ ಮಾಡಲು ನಮಗೆ ಖಂಡಿತ ಸಾಮರ್ಥ್ಯವಿದೆ.

    ೧೯

    فَأَنشَأۡنَا لَكُم بِهِۦ جَنَّٰتٖ مِّن نَّخِيلٖ وَأَعۡنَٰبٖ لَّكُمۡ فِيهَا فَوَٰكِهُ كَثِيرَةٞ وَمِنۡهَا تَأۡكُلُونَ

    ನಂತರ ಅದರಿಂದ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷಿ ತೋಟಗಳನ್ನು ನಿರ್ಮಿಸಿಕೊಟ್ಟೆವು. ಅವುಗಳಲ್ಲಿ ನಿಮಗೆ ಹೇರಳ ಹಣ್ಣು-ಹಂಪಲುಗಳಿವೆ. ಅದರಿಂದಲೇ ನೀವು ತಿನ್ನುತ್ತೀರಿ.

    ೨೦

    وَشَجَرَةٗ تَخۡرُجُ مِن طُورِ سَيۡنَآءَ تَنۢبُتُ بِٱلدُّهۡنِ وَصِبۡغٖ لِّلۡأٓكِلِينَ

    ಸೀನಾ ಪರ್ವತದಲ್ಲಿ ಬೆಳೆಯುವ ಒಂದು ಮರವನ್ನು ನಾವು ಸೃಷ್ಟಿಸಿದ್ದೇವೆ. ಅದು ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಆಹಾರ ಸೇವಿಸುವವರಿಗೆ ಪಲ್ಯವಾಗಿದೆ.

    ೨೧

    وَإِنَّ لَكُمۡ فِي ٱلۡأَنۡعَٰمِ لَعِبۡرَةٗۖ نُّسۡقِيكُم مِّمَّا فِي بُطُونِهَا وَلَكُمۡ فِيهَا مَنَٰفِعُ كَثِيرَةٞ وَمِنۡهَا تَأۡكُلُونَ

    ನಿಶ್ಚಯವಾಗಿಯೂ ನಿಮಗೆ ಜಾನುವಾರುಗಳಲ್ಲಿ ನೀತಿಪಾಠವಿದೆ. ಅವುಗಳ ಹೊಟ್ಟೆಗಳಲ್ಲಿ ಏನಿದೆಯೋ ಅದರಿಂದ ನಾವು ನಿಮಗೆ ಕುಡಿಯಲು (ಹಾಲು) ನೀಡುತ್ತೇವೆ. ಅವುಗಳಿಂದ ನಿಮಗೆ ಹಲವಾರು ಉಪಕಾರಗಳಿವೆ. ಅವುಗಳ ಮಾಂಸವನ್ನೂ ನೀವು ತಿನ್ನುತ್ತೀರಿ.

    ೨೨

    وَعَلَيۡهَا وَعَلَى ٱلۡفُلۡكِ تُحۡمَلُونَ

    ಅವುಗಳ ಬೆನ್ನುಗಳಲ್ಲಿ ಮತ್ತು ನಾವೆಗಳಲ್ಲಿ ನೀವು ಸವಾರಿ ಮಾಡುತ್ತೀರಿ.

    ೨೩

    وَلَقَدۡ أَرۡسَلۡنَا نُوحًا إِلَىٰ قَوۡمِهِۦ فَقَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓۚ أَفَلَا تَتَّقُونَ

    ನಾವು ನೂಹರನ್ನು ಅವರ ಜನರ ಬಳಿಗೆ ಸಂದೇಶವಾಹಕರಾಗಿ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರು ನಿಮಗಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

    ೨೪

    فَقَالَ ٱلۡمَلَؤُاْ ٱلَّذِينَ كَفَرُواْ مِن قَوۡمِهِۦ مَا هَٰذَآ إِلَّا بَشَرٞ مِّثۡلُكُمۡ يُرِيدُ أَن يَتَفَضَّلَ عَلَيۡكُمۡ وَلَوۡ شَآءَ ٱللَّهُ لَأَنزَلَ مَلَٰٓئِكَةٗ مَّا سَمِعۡنَا بِهَٰذَا فِيٓ ءَابَآئِنَا ٱلۡأَوَّلِينَ

    ಆಗ ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ಇವನು ನಿಮಗಿಂತಲೂ ಹೆಚ್ಚು ಶ್ರೇಷ್ಠನಾಗಲು ಬಯಸುತ್ತಿದ್ದಾನೆ. ಅಲ್ಲಾಹು ಇಚ್ಛಿಸಿದ್ದರೆ ದೇವದೂತರನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರ ಕಾಲದಿಂದ ಇಂತಹ ಒಂದು ಸುದ್ದಿಯನ್ನು ಕೇಳಿಯೇ ಇಲ್ಲ.

    ೨೫

    إِنۡ هُوَ إِلَّا رَجُلُۢ بِهِۦ جِنَّةٞ فَتَرَبَّصُواْ بِهِۦ حَتَّىٰ حِينٖ

    ಈತ ಬುದ್ಧಿಸ್ತಿಮಿತ ಕಳಕೊಂಡ ವ್ಯಕ್ತಿಯಾಗಿದ್ದಾನೆ. ಆದ್ದರಿಂದ ಇವನ ವಿಷಯದಲ್ಲಿ ಸ್ವಲ್ಪ ಸಮಯ ಕಾಯಿರಿ.”

    ೨೬

    قَالَ رَبِّ ٱنصُرۡنِي بِمَا كَذَّبُونِ

    ನೂಹ್ ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

    ೨೭

    فَأَوۡحَيۡنَآ إِلَيۡهِ أَنِ ٱصۡنَعِ ٱلۡفُلۡكَ بِأَعۡيُنِنَا وَوَحۡيِنَا فَإِذَا جَآءَ أَمۡرُنَا وَفَارَ ٱلتَّنُّورُ فَٱسۡلُكۡ فِيهَا مِن كُلّٖ زَوۡجَيۡنِ ٱثۡنَيۡنِ وَأَهۡلَكَ إِلَّا مَن سَبَقَ عَلَيۡهِ ٱلۡقَوۡلُ مِنۡهُمۡۖ وَلَا تُخَٰطِبۡنِي فِي ٱلَّذِينَ ظَلَمُوٓاْ إِنَّهُم مُّغۡرَقُونَ

    ಆಗ ನಾವು ಅವರಿಗೆ ದೇವವಾಣಿಯನ್ನು ನೀಡಿದೆವು: ನಮ್ಮ ಕಣ್ಣುಗಳ ಮುಂಭಾಗದಲ್ಲಿ ನಮ್ಮ ದೇವವಾಣಿಯ ನಿರ್ದೇಶನದಂತೆ ನೀವು ಒಂದು ನಾವೆಯನ್ನು ನಿರ್ಮಿಸಿರಿ. ನಂತರ ನಮ್ಮ ಆಜ್ಞೆಯು ಬಂದು ಒಲೆ ಉಕ್ಕಿ ಹರಿದಾಗ, ಎಲ್ಲಾ ಜೀವಿಗಳ ಒಂದೊಂದು ಜೋಡಿಯನ್ನು (ಗಂಡು ಮತ್ತು ಹೆಣ್ಣು) ಅದರಲ್ಲಿ ಹತ್ತಿಸಿರಿ. ತಮ್ಮ ಕುಟುಂಬದವರಲ್ಲಿ ಯಾರ ಮೇಲೆ ಅಲ್ಲಾಹನ ಮಾತು ಖಾತ್ರಿಯಾಗಿದೆಯೋ ಅವರನ್ನು ಬಿಟ್ಟು ಉಳಿದವರನ್ನು ಹತ್ತಿಸಿರಿ. ಅಕ್ರಮಿಗಳ ವಿಷಯದಲ್ಲಿ ನನ್ನೊಂದಿಗೆ ಮಾತನಾಡಬೇಡಿ. ನಿಶ್ಚಯವಾಗಿಯೂ ಅವರು ಮುಳುಗಿ ಸಾಯುವರು.

    ೨೮

    فَإِذَا ٱسۡتَوَيۡتَ أَنتَ وَمَن مَّعَكَ عَلَى ٱلۡفُلۡكِ فَقُلِ ٱلۡحَمۡدُ لِلَّهِ ٱلَّذِي نَجَّىٰنَا مِنَ ٱلۡقَوۡمِ ٱلظَّٰلِمِينَ

    ನಂತರ ನೀವು ಮತ್ತು ನಿಮ್ಮ ಜೊತೆಯಲ್ಲಿರುವವರು ನಾವೆಯಲ್ಲಿ ಆರೂಢರಾದಾಗ, “ಅಕ್ರಮಿಗಳಾದ ಜನರಿಂದ ನಮ್ಮನ್ನು ಪಾರುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ” ಎಂದು ಹೇಳಿರಿ.

    ೨೯

    وَقُل رَّبِّ أَنزِلۡنِي مُنزَلٗا مُّبَارَكٗا وَأَنتَ خَيۡرُ ٱلۡمُنزِلِينَ

    ಹೇಳಿರಿ: “ಓ ನನ್ನ ಪರಿಪಾಲಕನೇ! ನನ್ನನ್ನು ಸಮೃದ್ಧವಾದ ಸ್ಥಳದಲ್ಲಿ ಇಳಿಸು. ಇಳಿಸುವವರಲ್ಲಿ ನೀನು ಅತಿಶ್ರೇಷ್ಠನಾಗಿರುವೆ.”

    ೩೦

    إِنَّ فِي ذَٰلِكَ لَأٓيَٰتٖ وَإِن كُنَّا لَمُبۡتَلِينَ

    ನಿಶ್ಚಯವಾಗಿಯೂ ಅದರಲ್ಲಿ (ಜಲಪ್ರಳಯದಲ್ಲಿ) ಅನೇಕ ದೃಷ್ಟಾಂತಗಳಿವೆ. ನಿಜಕ್ಕೂ ನಾವು ಪರೀಕ್ಷಿಸುವವರೇ ಆಗಿದ್ದೇವೆ.

    ೩೧

    ثُمَّ أَنشَأۡنَا مِنۢ بَعۡدِهِمۡ قَرۡنًا ءَاخَرِينَ

    ನಂತರ, ಅವರ ಬಳಿಕ ನಾವು ಇನ್ನೊಂದು ತಲೆಮಾರನ್ನು ಸೃಷ್ಟಿಸಿದೆವು.

    ೩೨

    فَأَرۡسَلۡنَا فِيهِمۡ رَسُولٗا مِّنۡهُمۡ أَنِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓۚ أَفَلَا تَتَّقُونَ

    ಅವರ ಬಳಿಗೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಕಳುಹಿಸಿದೆವು. (ಅವರು ಹೇಳಿದರು): “ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

    ೩೩

    وَقَالَ ٱلۡمَلَأُ مِن قَوۡمِهِ ٱلَّذِينَ كَفَرُواْ وَكَذَّبُواْ بِلِقَآءِ ٱلۡأٓخِرَةِ وَأَتۡرَفۡنَٰهُمۡ فِي ٱلۡحَيَوٰةِ ٱلدُّنۡيَا مَا هَٰذَآ إِلَّا بَشَرٞ مِّثۡلُكُمۡ يَأۡكُلُ مِمَّا تَأۡكُلُونَ مِنۡهُ وَيَشۡرَبُ مِمَّا تَشۡرَبُونَ

    ಅವರ ಜನರಲ್ಲಿದ್ದ, ಸತ್ಯನಿಷೇಧಿಗಳಾದ ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದ ಮುಖಂಡರು—ನಾವು ಅವರಿಗೆ ಐಹಿಕ ಸುಖಭೋಗಗಳನ್ನು ನೀಡಿದ್ದೆವು—ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ನೀವು ತಿನ್ನುವುದನ್ನೇ ಇವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.

    ೩೪

    وَلَئِنۡ أَطَعۡتُم بَشَرٗا مِّثۡلَكُمۡ إِنَّكُمۡ إِذٗا لَّخَٰسِرُونَ

    ನೀವು ನಿಮ್ಮಂತಿರುವ ಒಬ್ಬ ಮನುಷ್ಯನನ್ನು ಅನುಸರಿಸಿದರೆ, ನೀವು ಖಂಡಿತ ನಷ್ಟ ಹೊಂದುವಿರಿ.

    ೩೫

    أَيَعِدُكُمۡ أَنَّكُمۡ إِذَا مِتُّمۡ وَكُنتُمۡ تُرَابٗا وَعِظَٰمًا أَنَّكُم مُّخۡرَجُونَ

    ನೀವು ಸತ್ತು, ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಿಮಗೆ ಪುನಃ ಜೀವ ನೀಡಿ ಹೊರತೆಗೆಯಲಾಗುವುದೆಂದು ಇವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?

    ೩೬

    ۞ هَيۡهَاتَ هَيۡهَاتَ لِمَا تُوعَدُونَ

    ನಿಮಗೆ ವಾಗ್ದಾನ ಮಾಡಲಾಗುತ್ತಿರುವ ಈ ವಿಷಯವು ಬಹಳ ದೂರದಲ್ಲಿದೆ! ಬಹಳ ದೂರದಲ್ಲಿದೆ!

    ೩೭

    إِنۡ هِيَ إِلَّا حَيَاتُنَا ٱلدُّنۡيَا نَمُوتُ وَنَحۡيَا وَمَا نَحۡنُ بِمَبۡعُوثِينَ

    ಜೀವನವೆಂದರೆ ನಮ್ಮ ಈ ಇಹಲೋಕದ ಜೀವನದ ಮಾತ್ರ. ಇಲ್ಲಿ ನಾವು ಹುಟ್ಟುತ್ತಲೂ ಸಾಯುತ್ತಲೂ ಇರುತ್ತೇವೆ. ನಮಗೆ ಜೀವ ನೀಡಿ ಎಬ್ಬಿಸಲಾಗುವ ಸಂಗತಿಯೇ ಇಲ್ಲ.

    ೩೮

    إِنۡ هُوَ إِلَّا رَجُلٌ ٱفۡتَرَىٰ عَلَى ٱللَّهِ كَذِبٗا وَمَا نَحۡنُ لَهُۥ بِمُؤۡمِنِينَ

    ಇವನು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವ ವ್ಯಕ್ತಿ. ನಾವು ಇವನಲ್ಲಿ ವಿಶ್ವಾಸವಿಡುವುದೇ ಇಲ್ಲ.”

    ೩೯

    قَالَ رَبِّ ٱنصُرۡنِي بِمَا كَذَّبُونِ

    ಅವರು (ಸಂದೇಶವಾಹಕರು) ಹೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

    ೪೦

    قَالَ عَمَّا قَلِيلٖ لَّيُصۡبِحُنَّ نَٰدِمِينَ

    ಅಲ್ಲಾಹು ಹೇಳಿದನು: “ಅವರು ಶೀಘ್ರದಲ್ಲೇ ಖಂಡಿತ ಮರುಗುವ ಸ್ಥಿತಿಯಲ್ಲಾಗುವರು.”

    ೪೧

    فَأَخَذَتۡهُمُ ٱلصَّيۡحَةُ بِٱلۡحَقِّ فَجَعَلۡنَٰهُمۡ غُثَآءٗۚ فَبُعۡدٗا لِّلۡقَوۡمِ ٱلظَّٰلِمِينَ

    ನಂತರ ಒಂದು ಭಯಾನಕ ಚೀತ್ಕಾರವು ನ್ಯಾಯಯುತವಾಗಿ ಅವರನ್ನು ಹಿಡಿದುಕೊಂಡಿತು. ನಾವು ಅವರನ್ನು ಕಸಕಡ್ಡಿಗಳಂತೆ ಮಾಡಿದೆವು. ಅಕ್ರಮವೆಸಗಿದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

    ೪೨

    ثُمَّ أَنشَأۡنَا مِنۢ بَعۡدِهِمۡ قُرُونًا ءَاخَرِينَ

    ನಂತರ, ಅವರ ಬಳಿಕ ನಾವು ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.

    ೪೩

    مَا تَسۡبِقُ مِنۡ أُمَّةٍ أَجَلَهَا وَمَا يَسۡتَـٔۡخِرُونَ

    ಯಾವುದೇ ಸಮುದಾಯವು ಅದಕ್ಕೆ ನಿಶ್ಚಯಿಸಲಾದ ಅವಧಿಯನ್ನು ದಾಟಿ ಹೋಗುವುದಿಲ್ಲ. ಅವರು ಹಿಂದೆ ಉಳಿಯುವುದೂ ಇಲ್ಲ.

    ೪೪

    ثُمَّ أَرۡسَلۡنَا رُسُلَنَا تَتۡرَاۖ كُلَّ مَا جَآءَ أُمَّةٗ رَّسُولُهَا كَذَّبُوهُۖ فَأَتۡبَعۡنَا بَعۡضَهُم بَعۡضٗا وَجَعَلۡنَٰهُمۡ أَحَادِيثَۚ فَبُعۡدٗا لِّقَوۡمٖ لَّا يُؤۡمِنُونَ

    ನಂತರ ನಾವು ಸತತವಾಗಿ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು. ಯಾವುದೇ ಸಮುದಾಯಕ್ಕೆ ಅವರ ಸಂದೇಶವಾಹಕರು ಬಂದಾಗಲೆಲ್ಲ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನಾವು ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಹಿಂಬಾಲಿಸುವಂತೆ ಮಾಡಿ, ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು. ವಿಶ್ವಾಸವಿಡದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

    ೪೫

    ثُمَّ أَرۡسَلۡنَا مُوسَىٰ وَأَخَاهُ هَٰرُونَ بِـَٔايَٰتِنَا وَسُلۡطَٰنٖ مُّبِينٍ

    ನಂತರ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದೆವು.

    ೪೬

    إِلَىٰ فِرۡعَوۡنَ وَمَلَإِيْهِۦ فَٱسۡتَكۡبَرُواْ وَكَانُواْ قَوۡمًا عَالِينَ

    ಫರೋಹ ಮತ್ತು ಅವನ ಜನರ ಮುಖಂಡರ ಬಳಿಗೆ. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಮಹಾ ದರ್ಪದ ಜನರಾಗಿದ್ದರು.

    ೪೭

    فَقَالُوٓاْ أَنُؤۡمِنُ لِبَشَرَيۡنِ مِثۡلِنَا وَقَوۡمُهُمَا لَنَا عَٰبِدُونَ

    ಅವರು ಹೇಳಿದರು: “ಏನು? ನಾವು ನಮ್ಮಂತಿರುವ ಇಬ್ಬರು ವ್ಯಕ್ತಿಗಳಲ್ಲಿ ವಿಶ್ವಾಸವಿಡಬೇಕೇ? ಅದೂ ಅವರ ಜನರು ನಮ್ಮ ಗುಲಾಮರಾಗಿರುವಾಗ!”

    ೪೮

    فَكَذَّبُوهُمَا فَكَانُواْ مِنَ ٱلۡمُهۡلَكِينَ

    ಅವರು ಅವರಿಬ್ಬರನ್ನೂ ನಿಷೇಧಿಸಿದರು. ಆದ್ದರಿಂದ ಅವರು ವಿನಾಶ ಹೊಂದಿದವರಲ್ಲಿ ಸೇರಿದರು.

    ೪೯

    وَلَقَدۡ ءَاتَيۡنَا مُوسَى ٱلۡكِتَٰبَ لَعَلَّهُمۡ يَهۡتَدُونَ

    ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರು (ಇಸ್ರಾಯೇಲ್ ಮಕ್ಕಳು) ಸನ್ಮಾರ್ಗ ಪಡೆಯಲೆಂದು.

    ೫೦

    وَجَعَلۡنَا ٱبۡنَ مَرۡيَمَ وَأُمَّهُۥٓ ءَايَةٗ وَءَاوَيۡنَٰهُمَآ إِلَىٰ رَبۡوَةٖ ذَاتِ قَرَارٖ وَمَعِينٖ

    ನಾವು ಮರ್ಯಮರ ಪುತ್ರ ಈಸಾರನ್ನು ಮತ್ತು ಅವರ ತಾಯಿಯನ್ನು ಒಂದು ದೃಷ್ಟಾಂತವಾಗಿ ಮಾಡಿದೆವು. ವಾಸಯೋಗ್ಯವಾದ ಮತ್ತು ನೀರಿನ ಚಿಲುಮೆಯಿರುವ ಒಂದು ಎತ್ತರದ ಸ್ಥಳದಲ್ಲಿ ನಾವು ಅವರಿಬ್ಬರಿಗೆ ಆಶ್ರಯ ನೀಡಿದೆವು.

    ೫೧

    يَٰٓأَيُّهَا ٱلرُّسُلُ كُلُواْ مِنَ ٱلطَّيِّبَٰتِ وَٱعۡمَلُواْ صَٰلِحًاۖ إِنِّي بِمَا تَعۡمَلُونَ عَلِيمٞ

    ಸಂದೇಶವಾಹಕರುಗಳೇ![[ ImageMedia, 22-01-2024 18:07]] ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಸತ್ಕರ್ಮ ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ನಾನು ತಿಳಿಯುತ್ತಿದ್ದೇನೆ.

    ೫೨

    وَإِنَّ هَٰذِهِۦٓ أُمَّتُكُمۡ أُمَّةٗ وَٰحِدَةٗ وَأَنَا۠ رَبُّكُمۡ فَٱتَّقُونِ

    ನಿಶ್ಚಯವಾಗಿಯೂ ಇದು ನಿಮ್ಮ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮ ಪರಿಪಾಲಕನಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.

    ೫೩

    فَتَقَطَّعُوٓاْ أَمۡرَهُم بَيۡنَهُمۡ زُبُرٗاۖ كُلُّ حِزۡبِۭ بِمَا لَدَيۡهِمۡ فَرِحُونَ

    ನಂತರ ಅವರು ತಮ್ಮ ವಿಷಯದಲ್ಲಿ (ಧರ್ಮದಲ್ಲಿ) ಭಿನ್ನಮತ ತಳೆದು ಹಲವು ಗುಂಪುಗಳಾಗಿ ವಿಭಜನೆಯಾದರು. ಎಲ್ಲಾ ಗುಂಪುಗಳೂ ಅವರ ಬಳಿ ಏನಿದೆಯೋ ಅದರಲ್ಲೇ ಖುಷಿಪಡುತ್ತಿದ್ದಾರೆ.

    ೫೪

    فَذَرۡهُمۡ فِي غَمۡرَتِهِمۡ حَتَّىٰ حِينٍ

    ಆದ್ದರಿಂದ (ಪ್ರವಾದಿಯವರೇ) ನೀವು ಅವರನ್ನು ಒಂದು ಅವಧಿಯವರೆಗೆ ಅವರ ಗೊಂದಲದಲ್ಲೇ ಇರಲು ಬಿಟ್ಟುಬಿಡಿ.

    ೫೫

    أَيَحۡسَبُونَ أَنَّمَا نُمِدُّهُم بِهِۦ مِن مَّالٖ وَبَنِينَ

    ಅವರೇನು ಭಾವಿಸುತ್ತಿದ್ದಾರೆ? ನಾವು ಅವರಿಗೆ ಆಸ್ತಿ ಮತ್ತು ಮಕ್ಕಳನ್ನು ಹೆಚ್ಚಿಸುತ್ತಿರುವುದು,

    ೫೬

    نُسَارِعُ لَهُمۡ فِي ٱلۡخَيۡرَٰتِۚ بَل لَّا يَشۡعُرُونَ

    ಅವರಿಗೆ ಒಳಿತುಗಳನ್ನು ನೀಡಲು ನಾವು ತ್ವರೆ ಮಾಡುತ್ತಿದ್ದೇವೆ ಎಂದೇ? ಅಲ್ಲ, ಅವರು (ಸತ್ಯಸಂಗತಿಯನ್ನು) ತಿಳಿಯುವುದಿಲ್ಲ.[1]

    [1] ಅಲ್ಲಾಹು ಕಷ್ಟಗಳನ್ನು ನೀಡಿ ಪರೀಕ್ಷಿಸುವಂತೆಯೇ ಸುಖಗಳನ್ನು ನೀಡಿಯೂ ಪರೀಕ್ಷಿಸುತ್ತಾನೆ.

    ೫೭

    إِنَّ ٱلَّذِينَ هُم مِّنۡ خَشۡيَةِ رَبِّهِم مُّشۡفِقُونَ

    ನಿಶ್ಚಯವಾಗಿಯೂ ತಮ್ಮ ಪರಿಪಾಲಕನ (ಅಲ್ಲಾಹನ) ಭಯದಿಂದ ನಡುಗುವವರು,

    ೫೮

    وَٱلَّذِينَ هُم بِـَٔايَٰتِ رَبِّهِمۡ يُؤۡمِنُونَ

    ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ವಿಶ್ವಾಸವಿಡುವವರು,

    ೫೯

    وَٱلَّذِينَ هُم بِرَبِّهِمۡ لَا يُشۡرِكُونَ

    ತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡದವರು,

    ೬೦

    وَٱلَّذِينَ يُؤۡتُونَ مَآ ءَاتَواْ وَّقُلُوبُهُمۡ وَجِلَةٌ أَنَّهُمۡ إِلَىٰ رَبِّهِمۡ رَٰجِعُونَ

    ಕೊಡುವುದೆಲ್ಲವನ್ನೂ ಕೊಡುವವರು ಮತ್ತು ನಮಗೆ ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಬೇಕಾಗಿದೆಯೆಂದು ಹೃದಯಗಳಲ್ಲಿ ಭಯವನ್ನು ಹೊಂದಿರುವವರು ಯಾರೋ,

    ೬೧

    أُوْلَٰٓئِكَ يُسَٰرِعُونَ فِي ٱلۡخَيۡرَٰتِ وَهُمۡ لَهَا سَٰبِقُونَ

    ಅವರೇ ಒಳಿತಿನ ವಿಷಯಗಳಲ್ಲಿ ತ್ವರೆ ಮಾಡುವವರು. ಅವರೇ ಅದರಲ್ಲಿ ಮುಂಚೂಣಿಯಲ್ಲಿರುವವರು.

    ೬೨

    وَلَا نُكَلِّفُ نَفۡسًا إِلَّا وُسۡعَهَاۚ وَلَدَيۡنَا كِتَٰبٞ يَنطِقُ بِٱلۡحَقِّ وَهُمۡ لَا يُظۡلَمُونَ

    ಯಾವುದೇ ಮನುಷ್ಯನ ಮೇಲೂ ಅವನ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ನಾವು ಹೊರಿಸುವುದಿಲ್ಲ. ಸತ್ಯ ಸಮೇತ ಮಾತನಾಡುವ ಒಂದು ಗ್ರಂಥವು ನಮ್ಮ ಬಳಿಯಿದೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

    ೬೩

    بَلۡ قُلُوبُهُمۡ فِي غَمۡرَةٖ مِّنۡ هَٰذَا وَلَهُمۡ أَعۡمَٰلٞ مِّن دُونِ ذَٰلِكَ هُمۡ لَهَا عَٰمِلُونَ

    ಆದರೆ, ಅವರ ಹೃದಯಗಳು ಈ ವಿಷಯದಲ್ಲಿ ನಿರ್ಲಕ್ಷ್ಯವಾಗಿವೆ. ಅವರಿಗೆ ಇದರ ಹೊರತಾಗಿರುವ ಬೇರೆ ದುಷ್ಕರ್ಮಗಳೂ ಇವೆ. ಅವರು ಅದನ್ನು ಮಾಡುತ್ತಿದ್ದಾರೆ.

    ೬೪

    حَتَّىٰٓ إِذَآ أَخَذۡنَا مُتۡرَفِيهِم بِٱلۡعَذَابِ إِذَا هُمۡ يَجۡـَٔرُونَ

    ಎಲ್ಲಿಯವರೆಗೆಂದರೆ, ನಾವು ಅವರಲ್ಲಿನ ಸಂಪನ್ನರನ್ನು ಶಿಕ್ಷೆಯ ಮೂಲಕ ಹಿಡಿದುಕೊಂಡಾಗ ಅಗೋ! ಅವರು ಗೋಗರೆಯುತ್ತಿದ್ದಾರೆ.

    ೬೫

    لَا تَجۡـَٔرُواْ ٱلۡيَوۡمَۖ إِنَّكُم مِّنَّا لَا تُنصَرُونَ

    ಇಂದು ನೀವು ಗೋಗರೆಯಬೇಕಾಗಿಲ್ಲ. ನಿಶ್ಚಯವಾಗಿಯೂ ನಿಮಗೆ ನಮ್ಮ ಕಡೆಯಿಂದ ಸಹಾಯವು ದೊರೆಯುವುದಿಲ್ಲ.

    ೬೬

    قَدۡ كَانَتۡ ءَايَٰتِي تُتۡلَىٰ عَلَيۡكُمۡ فَكُنتُمۡ عَلَىٰٓ أَعۡقَٰبِكُمۡ تَنكِصُونَ

    ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುತ್ತಿತ್ತು. ಆಗ ನೀವು ನಿಮ್ಮ ಹಿಮ್ಮಡಿಗಳಲ್ಲಿ ಹಿಂದಕ್ಕೆ ತಿರುಗಿ ನಡೆಯುತ್ತಿದ್ದಿರಿ.

    ೬೭

    مُسۡتَكۡبِرِينَ بِهِۦ سَٰمِرٗا تَهۡجُرُونَ

    ಅಹಂಕಾರದಿಂದ ವರ್ತಿಸುತ್ತಾ (ನಡೆಯುತ್ತಿದ್ದಿರಿ). ಅದೊಂದು ರಾತ್ರಿ ಕಥೆಯೋ ಎಂಬಂತೆ ನೀವು ಅದರ (ಕುರ್‌ಆನ್‍ನ) ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಿರಿ.

    ೬೮

    أَفَلَمۡ يَدَّبَّرُواْ ٱلۡقَوۡلَ أَمۡ جَآءَهُم مَّا لَمۡ يَأۡتِ ءَابَآءَهُمُ ٱلۡأَوَّلِينَ

    ಅವರು ಈ ಮಾತಿನ (ಕುರ್‌ಆನಿನ) ಬಗ್ಗೆ ಆಳವಾಗಿ ಯೋಚಿಸುವುದಿಲ್ಲವೇ? ಅಥವಾ, ಅವರ ಪೂರ್ವಜರ ಬಳಿಗೆ ಬರದೇ ಇರುವಂತದ್ದು ಇವರ ಬಳಿಗೆ ಬಂದಿದೆಯೇ?

    ೬೯

    أَمۡ لَمۡ يَعۡرِفُواْ رَسُولَهُمۡ فَهُمۡ لَهُۥ مُنكِرُونَ

    ಅವರಿಗೆ ಅವರ ಸಂದೇಶವಾಹಕರ ಪರಿಚಯವಿಲ್ಲದಿರುವುದರಿಂದ ಅವರು ಅವರನ್ನು ನಿಷೇಧಿಸುತ್ತಿದ್ದಾರೆಯೇ?

    ೭೦

    أَمۡ يَقُولُونَ بِهِۦ جِنَّةُۢۚ بَلۡ جَآءَهُم بِٱلۡحَقِّ وَأَكۡثَرُهُمۡ لِلۡحَقِّ كَٰرِهُونَ

    ಅವರಿಗೆ (ಪ್ರವಾದಿಗೆ) ಬುದ್ಧಿಭ್ರಮಣೆಯಾಗಿದೆಯೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ.

    ೭೧

    وَلَوِ ٱتَّبَعَ ٱلۡحَقُّ أَهۡوَآءَهُمۡ لَفَسَدَتِ ٱلسَّمَٰوَٰتُ وَٱلۡأَرۡضُ وَمَن فِيهِنَّۚ بَلۡ أَتَيۡنَٰهُم بِذِكۡرِهِمۡ فَهُمۡ عَن ذِكۡرِهِم مُّعۡرِضُونَ

    ಒಂದು ವೇಳೆ ಸತ್ಯವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದ್ದರೆ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಎಲ್ಲರೂ ನಾಶವಾಗುತ್ತಿದ್ದರು. ಅಲ್ಲ, ವಾಸ್ತವವಾಗಿ ನಾವು ಅವರಿಗೆ ನಮ್ಮ ಉಪದೇಶವನ್ನು ತಲುಪಿಸಿದ್ದೇವೆ. ಆದರೆ ಅವರು ಅವರಿಗೆ ನೀಡಲಾದ ಉಪದೇಶದಿಂದ ವಿಮುಖರಾಗಿದ್ದಾರೆ.

    ೭೨

    أَمۡ تَسۡـَٔلُهُمۡ خَرۡجٗا فَخَرَاجُ رَبِّكَ خَيۡرٞۖ وَهُوَ خَيۡرُ ٱلرَّٰزِقِينَ

    ನೀವು ಅವರೊಡನೆ ಏನಾದರೂ ಪ್ರತಿಫಲವನ್ನು ಕೇಳುತ್ತಿದ್ದೀರಾ? ನಿಮಗಂತೂ ನಿಮ್ಮ ಪರಿಪಾಲಕನು (ಅಲ್ಲಾಹು) ಕೊಡುವ ಪ್ರತಿಫಲವೇ ಅತ್ಯುತ್ತಮವಾಗಿದೆ. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ.

    ೭೩

    وَإِنَّكَ لَتَدۡعُوهُمۡ إِلَىٰ صِرَٰطٖ مُّسۡتَقِيمٖ

    ನಿಶ್ಚಯವಾಗಿಯೂ ನೀವು ಅವರನ್ನು ನೇರಮಾರ್ಗಕ್ಕೆ ಕರೆಯುತ್ತಿದ್ದೀರಿ.

    ೭೪

    وَإِنَّ ٱلَّذِينَ لَا يُؤۡمِنُونَ بِٱلۡأٓخِرَةِ عَنِ ٱلصِّرَٰطِ لَنَٰكِبُونَ

    ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರು ಆ ಮಾರ್ಗದಿಂದ ತಪ್ಪಿಹೋಗುತ್ತಿದ್ದಾರೆ.

    ೭೫

    ۞ وَلَوۡ رَحِمۡنَٰهُمۡ وَكَشَفۡنَا مَا بِهِم مِّن ضُرّٖ لَّلَجُّواْ فِي طُغۡيَٰنِهِمۡ يَعۡمَهُونَ

    ನಾವು ಅವರ ಮೇಲೆ ದಯೆ ತೋರಿ ಅವರ ಕಷ್ಟವನ್ನು ದೂರೀಕರಿಸಿದರೆ, ಅವರು ತಮ್ಮ ಅತಿರೇಕದಲ್ಲಿ ಅಂಧವಾಗಿ ವಿಹರಿಸುವುದನ್ನು ಹಟದಿಂದ ಮುಂದುವರಿಸುತ್ತಿದ್ದರು.

    ೭೬

    وَلَقَدۡ أَخَذۡنَٰهُم بِٱلۡعَذَابِ فَمَا ٱسۡتَكَانُواْ لِرَبِّهِمۡ وَمَا يَتَضَرَّعُونَ

    ನಾವು ಅವರನ್ನು ಶಿಕ್ಷೆಯ ಮೂಲಕವೂ ಹಿಡಿದಿದ್ದೆವು. ಆದರೂ ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಲಿಲ್ಲ, ವಿನಮ್ರತೆಯನ್ನೂ ತೋರಲಿಲ್ಲ.

    ೭೭

    حَتَّىٰٓ إِذَا فَتَحۡنَا عَلَيۡهِم بَابٗا ذَا عَذَابٖ شَدِيدٍ إِذَا هُمۡ فِيهِ مُبۡلِسُونَ

    ಎಲ್ಲಿಯವರೆಗೆಂದರೆ, ನಾವು ಅವರ ಮೇಲೆ ಕಠೋರ ಶಿಕ್ಷೆಯ ಬಾಗಿಲನ್ನು ತೆರೆದುಕೊಟ್ಟಾಗ, ಅಗೋ! ಅವರು ಹತಾಶರಾಗುತ್ತಿದ್ದಾರೆ.

    ೭೮

    وَهُوَ ٱلَّذِيٓ أَنشَأَ لَكُمُ ٱلسَّمۡعَ وَٱلۡأَبۡصَٰرَ وَٱلۡأَفۡـِٔدَةَۚ قَلِيلٗا مَّا تَشۡكُرُونَ

    ನಿಮಗೆ ಕೇಳುವ ಶಕ್ತಿ, ದೃಷ್ಟಿ ಮತ್ತು ಹೃದಯಗಳನ್ನು ನೀಡಿದವನು ಅವನೇ. ನೀವು ಸ್ವಲ್ಪವೇ ಕೃತಜ್ಞರಾಗುತ್ತೀರಿ.

    ೭೯

    وَهُوَ ٱلَّذِي ذَرَأَكُمۡ فِي ٱلۡأَرۡضِ وَإِلَيۡهِ تُحۡشَرُونَ

    ಅವನೇ ನಿಮ್ಮನ್ನು ಸೃಷ್ಟಿಸಿ ಭೂಮಿಯಲ್ಲಿ ಹಬ್ಬಿಸಿದವನು. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.

    ೮೦

    وَهُوَ ٱلَّذِي يُحۡيِۦ وَيُمِيتُ وَلَهُ ٱخۡتِلَٰفُ ٱلَّيۡلِ وَٱلنَّهَارِۚ أَفَلَا تَعۡقِلُونَ

    ಅವನೇ ಜೀವ ಮತ್ತು ಮರಣ ನೀಡುವವನು. ರಾತ್ರಿ ಹಗಲುಗಳ ಬದಲಾವಣೆಯು ಅವನ ನಿಯಂತ್ರಣದಲ್ಲಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?

    ೮೧

    بَلۡ قَالُواْ مِثۡلَ مَا قَالَ ٱلۡأَوَّلُونَ

    ಬದಲಿಗೆ, ಅವರ ಪೂರ್ವಜರು ಹೇಳಿದಂತೆಯೇ ಅವರೂ ಹೇಳಿದರು.

    ೮೨

    قَالُوٓاْ أَءِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ

    ಅವರು ಹೇಳಿದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?

    ೮೩

    لَقَدۡ وُعِدۡنَا نَحۡنُ وَءَابَآؤُنَا هَٰذَا مِن قَبۡلُ إِنۡ هَٰذَآ إِلَّآ أَسَٰطِيرُ ٱلۡأَوَّلِينَ

    ಇದನ್ನು ನಮಗೂ, ನಮಗಿಂತ ಮೊದಲು ನಮ್ಮ ಪೂರ್ವಜರಿಗೂ ವಾಗ್ದಾನ ಮಾಡಲಾಗಿದೆ. ಇದು ಪ್ರಾಚೀನ ಕಾಲದ ಜನರ ಪುರಾಣಗಳಲ್ಲದೆ ಇನ್ನೇನೂ ಅಲ್ಲ.”

    ೮೪

    قُل لِّمَنِ ٱلۡأَرۡضُ وَمَن فِيهَآ إِن كُنتُمۡ تَعۡلَمُونَ

    (ಪ್ರವಾದಿಯವರೇ) ಕೇಳಿರಿ: “ಭೂಮಿ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳು ಯಾರಿಗೆ ಸೇರಿದ್ದು? ನಿಮಗೆ ತಿಳಿದಿದ್ದರೆ ಹೇಳಿರಿ.”

    ೮೫

    سَيَقُولُونَ لِلَّهِۚ قُلۡ أَفَلَا تَذَكَّرُونَ

    ಅವರು ಹೇಳುತ್ತಾರೆ: “ಅಲ್ಲಾಹನಿಗೆ ಸೇರಿದ್ದು.” ಕೇಳಿರಿ: “ಆದರೂ ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?”

    ೮೬

    قُلۡ مَن رَّبُّ ٱلسَّمَٰوَٰتِ ٱلسَّبۡعِ وَرَبُّ ٱلۡعَرۡشِ ٱلۡعَظِيمِ

    ಕೇಳಿರಿ: “ಏಳಾಕಾಶಗಳ ಮತ್ತು ಮಹಾ ಸಿಂಹಾಸನದ ಪರಿಪಾಲಕ ಯಾರು?”

    ೮೭

    سَيَقُولُونَ لِلَّهِۚ قُلۡ أَفَلَا تَتَّقُونَ

    ಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಭಯಪಡುವುದಿಲ್ಲವೇ?”

    ೮೮

    قُلۡ مَنۢ بِيَدِهِۦ مَلَكُوتُ كُلِّ شَيۡءٖ وَهُوَ يُجِيرُ وَلَا يُجَارُ عَلَيۡهِ إِن كُنتُمۡ تَعۡلَمُونَ

    ಕೇಳಿರಿ: “ಸರ್ವ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆ? ಅಭಯ ನೀಡುವವನು ಮತ್ತು ಅವನಿಗೆ ವಿರುದ್ಧವಾಗಿ ಅಭಯ ನೀಡಲು ಯಾರಿಗೂ ಸಾಧ್ಯವಿಲ್ಲದಂತಹವನು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”

    ೮೯

    سَيَقُولُونَ لِلَّهِۚ قُلۡ فَأَنَّىٰ تُسۡحَرُونَ

    ಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಮೋಡಿಗೆ ಬಲಿಯಾಗುತ್ತಿರುವುದು ಹೇಗೆ?”[1]

    [1] ಈ ಸಂಪೂರ್ಣ ವಿಶ್ವವು ಅಲ್ಲಾಹನಿಗೆ ಸೇರಿದ್ದು. ಅವನೇ ಇದನ್ನು ನಿಯಂತ್ರಿಸುತ್ತಿದ್ದಾನೆ. ಪ್ರಪಂಚ ಸೃಷ್ಟಿ, ನಿರ್ವಹಣೆ ಮತ್ತು ಪರಿಪಾಲನೆಯಲ್ಲಿ ಅವನ ಜೊತೆಗೆ ಬೇರೆ ಯಾವುದೇ ಪಾಲುದಾರರಿಲ್ಲ ಎಂಬ ವಿಷಯದಲ್ಲಿ ಸತ್ಯನಿಷೇಧಿಗಳಿಗೆ ಭಿನ್ನಾಭಿಪ್ರಾಯವಿರಲಿಲ್ಲ. ಈ ಎಲ್ಲಾ ವಿಷಯಗಳಲ್ಲಿ ಅವರು ಅಲ್ಲಾಹನನ್ನು ಏಕೈಕನೆಂದು ಒಪ್ಪಿಕೊಳ್ಳುತ್ತಿದ್ದರು.

    ೯೦

    بَلۡ أَتَيۡنَٰهُم بِٱلۡحَقِّ وَإِنَّهُمۡ لَكَٰذِبُونَ

    ಅಲ್ಲ, ವಾಸ್ತವವಾಗಿ ನಾವು ಅವರ ಬಳಿಗೆ ಸತ್ಯವನ್ನೇ ತಂದಿದ್ದೇವೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆ.

    ೯೧

    مَا ٱتَّخَذَ ٱللَّهُ مِن وَلَدٖ وَمَا كَانَ مَعَهُۥ مِنۡ إِلَٰهٍۚ إِذٗا لَّذَهَبَ كُلُّ إِلَٰهِۭ بِمَا خَلَقَ وَلَعَلَا بَعۡضُهُمۡ عَلَىٰ بَعۡضٖۚ سُبۡحَٰنَ ٱللَّهِ عَمَّا يَصِفُونَ

    ಅಲ್ಲಾಹನಿಗೆ ಯಾವುದೇ ಸಂತಾನವಿಲ್ಲ. ಅವನ ಜೊತೆಗೆ ಬೇರೆ ದೇವರುಗಳೂ ಇಲ್ಲ. ಇರುತ್ತಿದ್ದರೆ ಎಲ್ಲಾ ದೇವರುಗಳೂ ಅವರು ಸೃಷ್ಟಿಸಿದ್ದನ್ನು ತೆಗೆದುಕೊಂಡು ಹೋಗುತ್ತಿದ್ದರು. ಅವರು ಪ್ರಾಬಲ್ಯ ಪಡೆಯುವುದಕ್ಕಾಗಿ ಪರಸ್ಪರ ಹೊಡೆದಾಡುತ್ತಿದ್ದರು.[1] ಅವರು ಆರೋಪಿಸುವ ಎಲ್ಲಾ ಸುಳ್ಳುಗಳಿಂದಲೂ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

    [1] ಅಲ್ಲಾಹನ ಹೊರತು ಬೇರೆ ಸೃಷ್ಟಿಕರ್ತರು ಇರುತ್ತಿದ್ದರೆ ಪ್ರತಿಯೊಬ್ಬ ಸೃಷ್ಟಿಕರ್ತನೂ ತಾನು ಸೃಷ್ಟಿಸಿದ್ದನ್ನು ತಾನೇ ನಿಯಂತ್ರಿಸುತ್ತಿದ್ದನು. ಅಷ್ಟೇ ಅಲ್ಲ, ಅವರು ಪರಸ್ಪರ ಮೇಲುಗೈ ಸಾಧಿಸಲು ಹೊಡೆದಾಡುತ್ತಿದ್ದರು. ಇದರಿಂದ ಸಂಪೂರ್ಣ ವಿಶ್ವದ ವ್ಯವಸ್ಥೆಯು ಕುಸಿಯುತ್ತಿತ್ತು.

    ೯೨

    عَٰلِمِ ٱلۡغَيۡبِ وَٱلشَّهَٰدَةِ فَتَعَٰلَىٰ عَمَّا يُشۡرِكُونَ

    ಅವನು ದೃಶ್ಯ-ಅದೃಶ್ಯವನ್ನು ತಿಳಿದವನು. ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅವನು ಎಷ್ಟೋ ಉನ್ನತನಾಗಿದ್ದಾನೆ.

    ೯೩

    قُل رَّبِّ إِمَّا تُرِيَنِّي مَا يُوعَدُونَ

    ಹೇಳಿರಿ: “ನನ್ನ ಪರಿಪಾಲಕನೇ! ಇವರಿಗೆ ವಾಗ್ದಾನ ಮಾಡಲಾಗುವ ಶಿಕ್ಷೆಯನ್ನು ನನಗೆ ತೋರಿಸಿಕೊಡುವುದಾದರೆ,

    ೯೪

    رَبِّ فَلَا تَجۡعَلۡنِي فِي ٱلۡقَوۡمِ ٱلظَّٰلِمِينَ

    ನನ್ನ ಪರಿಪಾಲಕನೇ! ನನ್ನನ್ನು ಅಕ್ರಮಿಗಳಾದ ಜನರಲ್ಲಿ ಸೇರಿಸಬೇಡ.”

    ೯೫

    وَإِنَّا عَلَىٰٓ أَن نُّرِيَكَ مَا نَعِدُهُمۡ لَقَٰدِرُونَ

    ಅವರಿಗೆ ವಾಗ್ದಾನ ಮಾಡುತ್ತಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವ ಸಾಮರ್ಥ್ಯ ಖಂಡಿತ ನಮಗಿದೆ.

    ೯೬

    ٱدۡفَعۡ بِٱلَّتِي هِيَ أَحۡسَنُ ٱلسَّيِّئَةَۚ نَحۡنُ أَعۡلَمُ بِمَا يَصِفُونَ

    ನೀವು ಒಳಿತಿನ ಮೂಲಕ ಕೆಡುಕನ್ನು ದೂರೀಕರಿಸಿರಿ. ಅವರು ವರ್ಣಿಸುವ ವಿಷಯಗಳ ಬಗ್ಗೆ ನಮಗೆ ಬಹಳ ಚೆನ್ನಾಗಿ ತಿಳಿದಿದೆ.

    ೯೭

    وَقُل رَّبِّ أَعُوذُ بِكَ مِنۡ هَمَزَٰتِ ٱلشَّيَٰطِينِ

    ಹೇಳಿರಿ: “ನನ್ನ ಪರಿಪಾಲಕನೇ! ಶೈತಾನರ ದುರ್ವಿಚಾರಗಳಿಂದ ನಾನು ನಿನ್ನಲ್ಲಿ ಅಭಯಕೋರುತ್ತೇನೆ.

    ೯೮

    وَأَعُوذُ بِكَ رَبِّ أَن يَحۡضُرُونِ

    ಓ ನನ್ನ ಪರಿಪಾಲಕನೇ! ಅವರು ನನ್ನ ಬಳಿ ಬರುವುದರಿಂದಲೂ ನಾನು ನಿನ್ನಲ್ಲಿ ಅಭಯಕೋರುತ್ತೇನೆ.”

    ೯೯

    حَتَّىٰٓ إِذَا جَآءَ أَحَدَهُمُ ٱلۡمَوۡتُ قَالَ رَبِّ ٱرۡجِعُونِ

    ಎಲ್ಲಿಯವರೆಗೆಂದರೆ, ಅವರಲ್ಲೊಬ್ಬನಿಗೆ ಸಾವು ಸನ್ನಿಹಿತವಾದಾಗ, ಅವನು ಹೇಳುವನು: “ಓ ನನ್ನ ಪರಿಪಾಲಕನೇ! ನನ್ನನ್ನು ಹಿಂದಕ್ಕೆ ಕಳಿಸು.

    ೧೦೦

    لَعَلِّيٓ أَعۡمَلُ صَٰلِحٗا فِيمَا تَرَكۡتُۚ كَلَّآۚ إِنَّهَا كَلِمَةٌ هُوَ قَآئِلُهَاۖ وَمِن وَرَآئِهِم بَرۡزَخٌ إِلَىٰ يَوۡمِ يُبۡعَثُونَ

    ನಾನು ಮಾಡದೆ ಬಿಟ್ಟಿರುವ ಸತ್ಕರ್ಮಗಳನ್ನು ನಿರ್ವಹಿಸಲು.” ಇಲ್ಲ, ಎಂದಿಗೂ ಇಲ್ಲ! ಅದು ಕೇವಲ ಒಂದು ಮಾತು ಮಾತ್ರ. ಅವನು ಅದನ್ನು ಹೇಳುತ್ತಲೇ ಇರುವನು. ಅವರನ್ನು ಜೀವ ನೀಡಿ ಎಬ್ಬಿಸಲಾಗುವ ದಿನದ ತನಕ ಅವರ ಹಿಂದೆ ಒಂದು ಪರದೆಯಿದೆ.[1]

    [1] ಒಮ್ಮೆ ಪರಲೋಕವನ್ನು ಪ್ರವೇಶಿಸಿದರೆ ನಂತರ ಪುನಃ ಭೂಮಿಗೆ ಬರಲು ಯಾರಿಗೂ ಅವಕಾಶವಿಲ್ಲ.

    ೧೦೧

    فَإِذَا نُفِخَ فِي ٱلصُّورِ فَلَآ أَنسَابَ بَيۡنَهُمۡ يَوۡمَئِذٖ وَلَا يَتَسَآءَلُونَ

    ಕಹಳೆಯಲ್ಲಿ ಊದಲಾದರೆ, ಅಂದು ಅವರ ನಡುವೆ ಯಾವುದೇ ಸಂಬಂಧಗಳು ಇರುವುದಿಲ್ಲ. ಅವರು ಪರಸ್ಪರ ವಿಚಾರಿಸುವುದೂ ಇಲ್ಲ.

    ೧೦೨

    فَمَن ثَقُلَتۡ مَوَٰزِينُهُۥ فَأُوْلَٰٓئِكَ هُمُ ٱلۡمُفۡلِحُونَ

    ಯಾರ ತಕ್ಕಡಿಗಳು ಭಾರವಾಗುತ್ತದೋ ಅವರೇ ಯಶಸ್ವಿಯಾದವರು.

    ೧೦೩

    وَمَنۡ خَفَّتۡ مَوَٰزِينُهُۥ فَأُوْلَٰٓئِكَ ٱلَّذِينَ خَسِرُوٓاْ أَنفُسَهُمۡ فِي جَهَنَّمَ خَٰلِدُونَ

    ಯಾರ ತಕ್ಕಡಿಗಳು ಹಗುರವಾಗುತ್ತದೋ ಅವರೇ ಸ್ವಯಂ ನಷ್ಟ ಹೊಂದಿದವರು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವರು.

    ೧೦೪

    تَلۡفَحُ وُجُوهَهُمُ ٱلنَّارُ وَهُمۡ فِيهَا كَٰلِحُونَ

    ನರಕದ ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಡುವುದು. ಅವರು ಅದರಲ್ಲಿ ವಿಕಾರವಾಗಿ ಹಲ್ಲುಕಿರಿಯುವರು.[1]

    [1] ನರಕದ ಬೆಂಕಿಯು ಅವರ ಮುಖವನ್ನು ಸುಟ್ಟು ಬಿಡುತ್ತದೆ. ಇದರಿಂದ ಅವರ ತುಟಿಗಳು ಬೆಂಕಿಗೆ ಆಹುತಿಯಾಗಿ, ತುಟಿಗಳಿಲ್ಲದ ಕಾರಣ ಅವರ ಹಲ್ಲುಗಳು ವಿಕಾರವಾಗಿ ಕಿರಿಯುವಂತೆ ಕಾಣುವುದು.

    ೧೦೫

    أَلَمۡ تَكُنۡ ءَايَٰتِي تُتۡلَىٰ عَلَيۡكُمۡ فَكُنتُم بِهَا تُكَذِّبُونَ

    (ಅವರೊಂದಿಗೆ ಕೇಳಲಾಗುವುದು): “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುವಾಗ ನೀವು ಅದನ್ನು ನಿಷೇಧಿಸುತ್ತಿರಲಿಲ್ಲವೇ?”

    ೧೦೬

    قَالُواْ رَبَّنَا غَلَبَتۡ عَلَيۡنَا شِقۡوَتُنَا وَكُنَّا قَوۡمٗا ضَآلِّينَ

    ಅವರು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮ ದುರ್ಗತಿಯು ನಮ್ಮನ್ನು ಮಣಿಸಿದೆ. ನಾವು ದಾರಿತಪ್ಪಿದ ಜನರಾಗಿದ್ದೆವು.

    ೧೦೭

    رَبَّنَآ أَخۡرِجۡنَا مِنۡهَا فَإِنۡ عُدۡنَا فَإِنَّا ظَٰلِمُونَ

    ನಮ್ಮ ಪರಿಪಾಲಕನೇ! ನಮ್ಮನ್ನು ಇಲ್ಲಿಂದ ಹೊರಗೆ ಬಿಡು. ನಾವೇನಾದರೂ ಪುನಃ ಅದೇ ದುರ್ಮಾರ್ಗಕ್ಕೆ ಮರಳಿದರೆ ನಿಜವಾಗಿಯೂ ನಾವೇ ಅಕ್ರಮಿಗಳು.”

    ೧೦೮

    قَالَ ٱخۡسَـُٔواْ فِيهَا وَلَا تُكَلِّمُونِ

    ಅಲ್ಲಾಹು ಹೇಳುವನು: “ಅವಮಾನವನ್ನು ಸಹಿಸುತ್ತಾ ಇಲ್ಲೇ ಬಿದ್ದಿರಿ. ನನ್ನೊಡನೆ ಮಾತನಾಡಬೇಡಿ.

    ೧೦೯

    إِنَّهُۥ كَانَ فَرِيقٞ مِّنۡ عِبَادِي يَقُولُونَ رَبَّنَآ ءَامَنَّا فَٱغۡفِرۡ لَنَا وَٱرۡحَمۡنَا وَأَنتَ خَيۡرُ ٱلرَّٰحِمِينَ

    ನಿಶ್ಚಯವಾಗಿಯೂ, ನನ್ನ ದಾಸರಲ್ಲಿ ಒಂದು ಗುಂಪು ಜನರು ಹೇಳುತ್ತಿದ್ದರು: “ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ದಯೆ ತೋರು. ನೀನು ದಯೆ ತೋರುವವರಲ್ಲಿ ಅತ್ಯುತ್ತಮನಾಗಿರುವೆ.”

    ೧೧೦

    فَٱتَّخَذۡتُمُوهُمۡ سِخۡرِيًّا حَتَّىٰٓ أَنسَوۡكُمۡ ذِكۡرِي وَكُنتُم مِّنۡهُمۡ تَضۡحَكُونَ

    ಆಗ ನೀವು ಅವರನ್ನು ತಮಾಷೆಯ ವಸ್ತುವಾಗಿ ಮಾಡಿಕೊಂಡಿರಿ. ಎಲ್ಲಿಯವರೆಗೆಂದರೆ, (ಈ ತಮಾಷೆಯು) ನಿಮಗೆ ನನ್ನ ನೆನಪನ್ನೇ ಮರೆಸಿಬಿಟ್ಟಿತು. ನೀವು ಅವರನ್ನು ಅಣಕಿಸಿ ನಗುತ್ತಿದ್ದಿರಿ.

    ೧೧೧

    إِنِّي جَزَيۡتُهُمُ ٱلۡيَوۡمَ بِمَا صَبَرُوٓاْ أَنَّهُمۡ هُمُ ٱلۡفَآئِزُونَ

    ಅವರು ತಾಳ್ಮೆಯಿಂದ ಜೀವಿಸಿದ ಕಾರಣ ಇಂದು ನಾನು ಅವರಿಗೆ ಪ್ರತಿಫಲವನ್ನು ನೀಡಿದ್ದೇನೆ. ನಿಶ್ಚಯವಾಗಿಯೂ ಅವರೇ ವಿಜಯ ಗಳಿಸಿದವರು.”

    ೧೧೨

    قَٰلَ كَمۡ لَبِثۡتُمۡ فِي ٱلۡأَرۡضِ عَدَدَ سِنِينَ

    ಅಲ್ಲಾಹು ಕೇಳುವನು: “ನೀವು ಭೂಮಿಯಲ್ಲಿ ಎಷ್ಟು ವರ್ಷಗಳ ಕಾಲ ವಾಸವಾಗಿದ್ದಿರಿ?”

    ೧೧೩

    قَالُواْ لَبِثۡنَا يَوۡمًا أَوۡ بَعۡضَ يَوۡمٖ فَسۡـَٔلِ ٱلۡعَآدِّينَ

    ಅವರು ಹೇಳುವರು: “ನಾವು ಒಂದು ದಿನ ಅಥವಾ ದಿನದ ಸ್ವಲ್ಪ ಭಾಗ ಮಾತ್ರ ವಾಸವಾಗಿದ್ದೆವು. ಎಣಿಕೆ ಮಾಡಿದವರನ್ನು ಕೂಡ ಕೇಳಿ ನೋಡು.”

    ೧೧೪

    قَٰلَ إِن لَّبِثۡتُمۡ إِلَّا قَلِيلٗاۖ لَّوۡ أَنَّكُمۡ كُنتُمۡ تَعۡلَمُونَ

    ಅಲ್ಲಾಹು ಹೇಳುವನು: “ನೀವು ಸ್ವಲ್ಪ ಸಮಯ ಮಾತ್ರ ವಾಸವಾಗಿದ್ದಿರಿ. ನಿಮಗೆ ಮೊದಲೇ ತಿಳಿದಿರುತ್ತಿದ್ದರೆ!

    ೧೧೫

    أَفَحَسِبۡتُمۡ أَنَّمَا خَلَقۡنَٰكُمۡ عَبَثٗا وَأَنَّكُمۡ إِلَيۡنَا لَا تُرۡجَعُونَ

    ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆ ಮತ್ತು ನೀವು ನಮ್ಮ ಬಳಿಗೆ ಮರಳಿ ಬರುವುದಿಲ್ಲವೆಂದು ನೀವು ಭಾವಿಸಿದ್ದೀರಾ?”

    ೧೧೬

    فَتَعَٰلَى ٱللَّهُ ٱلۡمَلِكُ ٱلۡحَقُّۖ لَآ إِلَٰهَ إِلَّا هُوَ رَبُّ ٱلۡعَرۡشِ ٱلۡكَرِيمِ

    ನೈಜ ಸಾಮ್ರಾಟನಾಗಿರುವ ಅಲ್ಲಾಹು ಪರಮೋನ್ನತನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನು ಗೌರವಾನ್ವಿತ ಸಿಂಹಾಸನದ ಪರಿಪಾಲಕನಾಗಿದ್ದಾನೆ.

    ೧೧೭

    وَمَن يَدۡعُ مَعَ ٱللَّهِ إِلَٰهًا ءَاخَرَ لَا بُرۡهَٰنَ لَهُۥ بِهِۦ فَإِنَّمَا حِسَابُهُۥ عِندَ رَبِّهِۦٓۚ إِنَّهُۥ لَا يُفۡلِحُ ٱلۡكَٰفِرُونَ

    ಯಾರು ಅಲ್ಲಾಹನ ಜೊತೆಗೆ ಬೇರೆ ದೇವರನ್ನು ಕರೆದು ಪ್ರಾರ್ಥಿಸುತ್ತಾನೋ—ಹಾಗೆ ಪ್ರಾರ್ಥಿಸಲು ಅವನ ಬಳಿ ಯಾವುದೇ ಸಾಕ್ಷ್ಯಾಧಾರವಿಲ್ಲ—ಅವನ ವಿಚಾರಣೆಯು ಅವನ ಪರಿಪಾಲಕನ (ಅಲ್ಲಾಹನ) ಬಳಿಯಲ್ಲಿದೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಶಸ್ವಿಯಾಗುವುದಿಲ್ಲ.[1]

    [1] ಅಲ್ಲಾಹನನ್ನು ಬಿಟ್ಟು ಬೇರೆ ದೇವರನ್ನು (ಅವರು ಪ್ರವಾದಿಗಳು, ದೇವದೂತರು ಅಥವಾ ಮಹಾಪುರುಷರಾಗಿದ್ದರೂ ಸಹ) ಕರೆದು ಪ್ರಾರ್ಥಿಸಲು ಮತ್ತು ಅವರನ್ನು ಆರಾಧಿಸಲು ಯಾವುದೇ ಆಧಾರವಿಲ್ಲವೆಂದು ಅಲ್ಲಾಹು ಇಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾನೆ.

    ೧೧೮

    وَقُل رَّبِّ ٱغۡفِرۡ وَٱرۡحَمۡ وَأَنتَ خَيۡرُ ٱلرَّٰحِمِينَ

    ಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”

    Al-Muminun

    Play